cardamom benefit : ಕಾಳುಮೆಣಸು ತಿನ್ನಿ ಮಾನಸಿಕ ಖಿನ್ನತೆಯಿಂದ ದೂರವಿರಿ

0

cardamom benefit : ಭಾರತೀಯ ಅಡುಗೆಯಲ್ಲಿ ಮಸಾಲೆ ಪದಾರ್ಥಗಳಿಗೆ ಪ್ರಾಮುಖ್ಯತೆ ಹೆಚ್ಚು. ವಿಶ್ವದ ಜನರೆಲ್ಲಾ ಭಾರತ ಹಲವು ಮಸಾಲೆ ಪದಾರ್ಥಗಳಿಗೆ ಮನಸೋತಿದ್ದಾರೆ. ಅದರಲ್ಲಿ ಕಾಳು ಮೆಣಸು ಕೂಡ ಒಂದು. ಪೆಪ್ಪರ್ ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೂ ಉತ್ತಮ. ನಿತ್ಯವೂ ತಯಾರಿಸೋ ಖಾದ್ಯಗಳಲ್ಲಿ ಕಾಳುಮೆಣಸು ಬಳಕೆಯಿಂದ ಹಲವು ಕಾಯಿಲೆ ಗಳಿಂದ ದೂರವಿರಬಹುದು. ನಿತ್ಯ ಆಹಾರದಲ್ಲಿ ಖಾರಕ್ಕಾಗಿ ಮೆಣಸಿನ ಬದಲು ಕಾಳು ಮೆಣಸು ಅಥವಾ ಕರಿಮೆಣಸು ಬಳಸೋದ್ರಿಂದ ಏನೆಲ್ಲಾ ಅನುಕೂಲತೆಗಳಿವೆ ಅನ್ನೋದನ್ನು ತಿಳಿದುಕೊಳ್ಳೊಣಾ.

ಮಾನಸಿಕ ಖಿನ್ನತೆ ದೂರ : ದೇಹವು ಪೋಷಕಾಂಶಗಳನ್ನು ಹೀರಲು ಹೆಚ್ಚು ಸಹಕಾರಿ ಕಾಳುಮೆಣಸು ಜೈವಿಕ ಲಭ್ಯತೆ ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಲು ಇದು ಸಹಾಯಕವಾಗಿದೆ. ಕಾಳುಮೆಣಸು ಔಷಧಿಯಾಗಿಯೂ ಹೆಚ್ಚು ಸಹಾಯಕವಾಗಿದೆ. ಕಾಳುಮೆಣಸು ನೈಸರ್ಗಿಕ ಖಿನ್ನತಾವಿರೋಧಿ ಕಾಳುಮೆಣಸಿನಲ್ಲಿ ಇರುವ ಪೆಪ್ಪರಿನ್ ಮೆದುಳನ್ನು ಚುರುಕುಗೊಳಿಸು ತ್ತದೆ. ಇದರಿಂದಾಗಿ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುತ್ತದೆ. ನಿತ್ಯ ಸರಿ ಪ್ರಮಾಣದಲ್ಲಿ ಆಹಾರದಲ್ಲಿ ಕಾಳುಮೆಣಸು ಬಳಸುವುದ ರಿಂದ ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ದಿನನಿತ್ಯ ಆಹಾರದಲ್ಲಿ ಇದನ್ನು ಬಳಸಿ ಮತ್ತು ಸಲಾಡ್ ಗೆ ಇದನ್ನು ಸಿಂಪಡಿಸಿ ಬಳಸಿ. ಯಾವುದೇ ರೀತಿಯಲ್ಲಿ ಕಾಳುಮೆಣಸು ಬಳಸಿದರೂ ನಿಮ್ಮ ಆರೋಗ್ಯಕ್ಕೆ, ನಿಮ್ಮನ್ನು ಹೆಚ್ಚು ಚುರುಕುಗೊಳಿಸಿ, ಖಿನ್ನತೆಯಿಂದ ಹೊರಬರುವಂತೆ ಮಾಡಲು ಸಹಾಯಕವಾಗಿದೆ.ಆದ್ದರಿಂದ ಅಡುಗೆಗೆ ಖಾರ ಬಳಸುವಾಗ ಕಾಳುಮೆಣಸನ್ನು ಹೆಚ್ಚು ಹೆಚ್ಚಾಗಿ ಬಳಸಿ ಮತ್ತು ಆರೋಗ್ಯಯುತವಾಗಿರಿ.

ಕ್ಯಾನ್ಸರ್ ಗೆ ರಾಮಬಾಣ : ಕಾಳುಮೆಣಸು ಆಹಾರಕ್ಕೆ ಕೇವಲ ಫ್ಲೇವರ್ ನೀಡುವುದು ಮಾತ್ರವಲ್ಲ. ಆರೋಗ್ಯಕ್ಕೂ ಉತ್ತಮ. ಅದರಲ್ಲೂ ಕಾಳು ಮೆಣಸು ಕ್ಯಾನ್ಸರ್ ತಡೆಯಲು ಸಹಕರಿಸುತ್ತದೆ ಇದರಲ್ಲಿರುವ ಪೆಪ್ಪರಿನ್ ಅಂಶ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಳುಮೆಣಸಿನ ಜೊತೆಗೆ ಅರಿಶಿನ ಸೇವನೆಯಿಂದ ಆಂಟಿಕ್ಯಾನ್ಸರ್ ದೇಹದಲ್ಲಿ ಗುಣ ಹೆಚ್ಚಿರು ತ್ತದೆ. ಕಾಳುಮೆಣಸಿನಲ್ಲಿ ಕೇವಲ ಪೆಪ್ಪರಿನ್ ಅಂಶ ಮಾತ್ರವಲ್ಲ ವಿಟಮಿನ್ ಸಿ, ವಿಟಮಿನ್ ಎ,ಕ್ಯಾರೋಟಿನ್ಸ್, ಫ್ಲವೋನೈಡ್ ಮುಂತಾದವು ಗಳು ಕ್ಯಾನ್ಸರ್ ಮತ್ತು ಇನ್ನಿತರ ಕಾಯಿಲೆಗಳು ಬರದಂತೆ ತಡೆಯಲು ಸಹಕರಿಸುತ್ತದೆ.ಅಧ್ಯಯನಗಳ ಪ್ರಕಾರ ಕಾಳುಮೆಣಸಿನಲ್ಲಿ ಸಣ್ಣ ಕರುಳು ಮತ್ತು ದೊಡ್ಡ ಕರುಳಿನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ತಡೆಯುವ ಶಕ್ತಿಯಿದೆ.. ಪ್ರತಿದಿನ ಅಡುಗೆಗೆ ಬಳಸುವ ಜೊತೆಗೆ ಹಾಗೆಯೇ ತಿಂದರೆ ಕೂಡ ಇನ್ನೂ ಒಳ್ಳೆಯದು.

ತೂಕ ಕಳೆದುಕೊಳ್ಳಿ : ತೂಕ ಕಳೆದುಕೊಳ್ಳಲು ಜನ ನಾನಾ ಕಸರತ್ತು ನಡೆಸುತ್ತಾರೆ. ದುಬಾರಿ ಹಣತೆತ್ತು ಔಷಧಿಗಳ ಸೇವನೆ ಮಾಡಿದ್ರೂ ತೂಕ ಕಡಿಮೆಯಾಗುತ್ತಿಲ್ಲ ಅನ್ನೋ ಚಿಂತೆ ನಿಮ್ಮನ್ನು ಕಾಡುತ್ತಿದ್ರೆ, ಕಾಳು ಮೆಣಸು ಸೇವನೆ ಮಾಡೋದನ್ನು ಅಭ್ಯಾಸ ಮಾಡಿಕೊಳ್ಳಿ. ಕಾಳು ಮೆಣಸು ಆಹಾರಕ್ಕೆ ಸರಿಯಾದ ಸಮೀಕರಣ ಮಾಡಲು ಸಹಕರಿಸು ತ್ತದೆ. ಇದರಲ್ಲಿ ಪ್ರಬಲವಾದ ಫೈಟೋನ್ಯೂಟ್ರಿಯೆಂಟ್ಸ್ ಅಂಶ ಇರುವುದರಿಂದ ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ. ಮಾತ್ರವಲ್ಲ ದೇಹದ ಕಲ್ಮಶವನ್ನು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ, ಬೆವರು ಇವುಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹದ ತೂಕ ಕಡಿಮೆಯಾಗಲು ಸಹಾಯಕವಾಗುತ್ತದೆ. ಆಹಾರ ಪದಾರ್ಥಗಳ ಮೇಲೆ ಕಾಳುಮೆಣಸಿನ ಪುಡಿಯನ್ನು ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಆದರೆ ಹೆಚ್ಚು ಖಾರ ತಿನ್ನಬೇಡಿ ಇದರಿಂದ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು.

ಅಸಿಡಿಟಿ ಶಮನ : ಕಾಳುಮೆಣಸು ವಾಯು ಶಮನ ಮಾಡುತ್ತದೆ. ಇದರಲ್ಲಿ ಕಾರ್ಮಿನೇಟಿವ್ ಗುಣ ಹೊಂದಿರುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಗೆ ಸಂಬಂಧಿಸಿದ ನೋವುಗಳನ್ನು ತಡೆಗಟ್ಟಲು ಕಾಳುಮೆಣಸು ಸಹಾಯಕ. ಅಡುಗೆಯಲ್ಲಿ ಮೆಣಸಿನ ಪುಡಿಯ ಬದಲು ಕಾಳುಮೆಣಸನ್ನು ಬಳಸುವುದರಿಂದ ಹೊಟ್ಟೆ ಉಬ್ಬರ ಅಥವಾ ವಾಯು ತುಂಬುವುದನ್ನು ತಡೆಯಬಹುದು.

ಜೀರ್ಣಕ್ರಿಯೆಗೆ ಸಹಕಾರಿ : ಕಾಳುಮೆಣಸಿನಲ್ಲಿರುವ ಪೆಪ್ಪರಿನ್ ಅಂಶ ಜೀರ್ಣಕ್ರಿಯೆಯನ್ನು ಹೆಚ್ಚಲು ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಹೈಡ್ರೋಕ್ಲೊರಿಕ್ ಅಂಶ ಪ್ರೊಟಿನ್ ಹೀರಿಕೊಳ್ಳಲು ಸಹಕರಿಸುತ್ತದೆ. ಹೀಗಾಗಿ ಸರಿಯಾಗಿ ಜೀರ್ಣ ಆಗದಿದ್ದಾಗ ವಾಯು, ಅಜೀರ್ಣ, ಭೇದಿ, ಮಲಬದ್ಧತೆ ಮತ್ತು ಆಮ್ಲೀಯತೆ ಆಗುವುದನ್ನು ಇದರಿಂದ ತಡೆಯ ಬಹುದು. ಹೈಡ್ರೋಕ್ಲೋರಿಕ್ ಆಮ್ಲ ಇವುಗಳನ್ನು ತಡೆಯುವಲ್ಲಿ ಸಹಕರಿಸುತ್ತದೆ. ಜೀರ್ಣ ಕ್ರಿಯೆಯನ್ನು ಸುಗಮವಾಗಿಸಲು ಖಾದ್ಯ ಗಳಿಗೆ ಒಂದು ಚಮಚ ಕಾಳುಮೆಣಸಿನ ಪುಡಿಯನ್ನು ಬಳಸಿ. ಇದು ಅಡುಗೆಗೆ ಫ್ಲೇವರ್ ನೀಡುವುದರ ಜೊತೆಗೆ ನಿಮ್ಮ ಹೊಟ್ಟೆಯನ್ನೂ ಸರಿಯಾಗಿ ಇಡುತ್ತದೆ.

ತಲೆಹೊಟ್ಟಿನ ಸಮಸ್ಯೆ ದೂರ : ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುವವರು ಶಾಂಪೂಗಳ ಬದಲು ಕಾಳುಮೆನಸನ್ನು ಬಳಸಿ ನೋಡಿ. ಕಾಳುಮೆಣಸಿನಲ್ಲಿರುವ ಜೀವವಿರೋಧಿ ಅಂಶ ತಲೆಹೊಟ್ಟು ಹೋಗಲಾಡಿಸಲು ಸಹಕರಿಸುತ್ತದೆ. ಒಂದು ಚಮಚ ಪುಡಿಮಾಡಿದ ಕಾಳುಮೆಣಸನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿ. ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಸರಿಯಾಗಿ ತೊಳೆಯಿರಿ. ಹೆಚ್ಚು ಕಾಳುಮೆಣಸು ಬಳಸಬೇಡಿ ಇದರಿಂದ ತಲೆ ಸುಡುವ ಅನುಭವವಾಗಬಹುದು.

ಮೂಗುಗಟ್ಟುವ ಸಮಸ್ಯೆಗೆ ಮುಕ್ತಿ : ಮೂಗು ಕಟ್ಟುವುದು ಮತ್ತು ಕೆಮ್ಮಿನಿಂದ ಮುಕ್ತಿ. ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಇದರಲ್ಲಿರುವದರಿಂದ ಕೆಮ್ಮು ಮತ್ತು ನೆಗಡಿಗೆ ಕಾಳುಮೆಣಸು ಪರಿಹಾರ ನೀಡುತ್ತದೆ. ಕಾಳುಮೆಣಸಿನ ಬಿಸಿ ಮತ್ತು ಖಾರದ ಗುಣ ಕಟ್ಟಿದ ಮೂಗನ್ನು ಕೂಡ ಸರಿಯಾಗಿಸುತ್ತದೆ. ರಸಂ ಮತ್ತು ಸೂಪ್ ಗಳ ಮೇಲೆ ಕಾಳುಮೆಣಸಿನ ಪುಡಿ ಸಿಂಪಡಿಸಿ ಬಳಸುವುದರಿಂದ ಕೆಮ್ಮು ಮತ್ತು ನೆಗಡಿ ಕಡಿಮೆಯಾಗುವುದರ ಜೊತೆಗೆ ಉಸಿರಾಟವನ್ನು ಸರಾಗವಾಗಿಸುತ್ತದೆ.

ಇದನ್ನೂ ಓದಿ : Belly Fat: ಹೊಟ್ಟೆ ಕರಗಿಸಬೇಕಾ ? ಇಲ್ಲಿ ಹೇಳಿರುವ ಸರಳ ಟಿಪ್ಸ್‌ ಪಾಲಿಸಿ!!

ಇದನ್ನೂ ಓದಿ : Teenager skincare : ಟೀನೇಜರ್‌ಗಳನ್ನು ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಬೆಸ್ಟ್‌ ಟಿಪ್ಸ್‌!!

cardamom benefit for mental health tips

Leave A Reply

Your email address will not be published.