Gastric problem : ರುಚಿಕರ ಅಡುಗೆಗಾಗಿ ಬಳಸು ತೆಂಗಿನಕಾಯಿಯನ್ನು ಬಳಸಿ ಅದರ ಜುಟ್ಟನ್ನು ಎಲ್ಲೆಂದರಲ್ಲಿ ಎಸೆಯುತ್ತೇವೆ. ಆದರೆ ಅದರ ಜುಟ್ಟಿನಲ್ಲಿ ಔಷದಿಯ ಗುಣ ಇರುತ್ತದೆ ಎಂಬುದನ್ನೂ ಯಾರು ಕೂಡ ಊಹೆ ಮಾಡಿರುವುದಿಲ್ಲ. ನಂಬಲಾಗದ ವಿಷಯವಾದರು ಇದು ಸತ್ಯ. ಕಾಯಿಜುಟ್ಟಿನಲ್ಲಿ ಕಷಾಯ ಮಾಡಿ ಕುಡಿಯುವುದರಿಂದ ಗ್ರಾಸ್ಟಿಕ್ ಸಮಸ್ಯೆ ಕಡಿಮೆಯಾಗುತ್ತದೆ.
ಕಾಯಿಜುಟ್ಟನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಲೋಟದಲ್ಲಿ ಶೋಧಿಸಬೇಕು. ದಿನಕ್ಕೆ ಮೂರ್ನಾಲ್ಕು ಭಾರಿ ಸ್ಪೂನ್ ನಲ್ಲಿ ಅದನ್ನು ಕುಡಿಯುತ್ತಾ ಬಂದರೆ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಬಾಳೆಹಣ್ಣಿನ ಸಿಪ್ಪೆ:
ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿ ಮುಖಕ್ಕೆ ಪೇಸ್ ಪ್ಯಾಕ್ ರೀತಿಯಲ್ಲಿ ಹಚ್ಚುವುದರಿಂದ ಮುಖದಲ್ಲಿರುವ ಕಲೆ, ಸುಕ್ಕು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಯಾವುದಾದರು ರೂಪದಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಸೇವನೆ ಮಾಡುವುದರಿಂದ ಹೊಟ್ಟೆ ಒಳಗೆ ಆಗುವಂತಹ ಹುಣ್ಣುಗಳು ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.
ಇದನ್ನೂ ಓದಿ: Kawasaki W175 : ಭಾರತದಲ್ಲಿ ಬಿಡುಗಡೆಯಾದ ಕವಾಸಕಿ W175 ರೆಟ್ರೊ ಮೋಟಾರ್ಸೈಕಲ್
ಇದನ್ನೂ ಓದಿ:Pay CM campaign: ಕರಾವಳಿ ಭಾಗದಲ್ಲಿ ಜೋರಾಗಿದೆ ಪೇ ಸಿಎಂ ಅಭಿಯಾನ
ತಂಗಡಿ ಹೂವು :
ತಂಗಡಿ ಹೂವನ್ನು ನೀರಿನಲ್ಲಿ ಕುದಿಸಿ ಚಹಾದ ರೂಪದಲ್ಲಿ ಸೇವಿಸುವುದರಿಂದ ಮಧುಮೇಹ ಕಾಯಿಲೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು.
ಇದನ್ನೂ ಓದಿ: Arjun Tendulkar Yograj Singh : ಸಚಿನ್ ತೆಂಡೂಲ್ಕರ್ ಪುತ್ರನಿಗೆ ಯುವರಾಜ್ ಸಿಂಗ್ ತಂದೆಯೇ ಕೋಚ್
ಪಪ್ಪಾಯ ಎಲೆ:
ಪಪ್ಪಾಯ ಎಲೆಯಲ್ಲಿ ರೊಗ ನಿರೋಧಕ ಹೆಚ್ಚಿಸುವಂತಹ ಗುಣ ಇರುವುದರಿಂದ ಕಷಾಯವನ್ನು ಮಾಡಿ ಸೇವಿಸುವುದರಿಂದ ಜ್ವರವನ್ನು ಕಡಿಮೆ ಮಾಡುತ್ತದೆ. ಡೆಂಗ್ಯೂನಿಂದ ಬೇಗ ಗುಣಮುಖರಾಗಲು ಪಪ್ಪಾಯ ಎಲೆಯ ರಸ ಹೆಚ್ಚು ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ:LPG Subsidy : ಎಲ್ಪಿಜಿ ಸಬ್ಸಿಡಿ, ಹೊಸ ನಿಯಮ ಪ್ರಕಟಿಸಿದ ಸರಕಾರ
coconut waste helps cure gastric problem
Comments are closed.