ಗುಡ್ ನ್ಯೂಸ್ : ನರಸೀಪುರದಲ್ಲಿ ಮತ್ತೆ ನಾಟಿ ಔಷಧ ವಿತರಣೆ ಆರಂಭ

ಶಿವಮೊಗ್ಗ : ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾಟಿ ಔಷಧದ ಮೂಲಕವೇ ಪರಿಹಾರ ನೀಡುತ್ತಿದ್ದ ನರಸೀಪುರ ನಾರಾಯಣ ಮೂರ್ತಿ ಅವರ ಕುಟುಂಬ ಇದೀಗ ಮತ್ತೆ ನಾಟಿ ಔಷಧ ವಿತರಣೆ ಮುಂದಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನರಸೀಪುರದ ನಾರಾಯಣಮೂರ್ತಿ ಅವರು ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾಟಿ ಔಷಧವನ್ನು ವಿತರಣೆ ಮಾಡುತ್ತಿದ್ದರು. ಇವರಿಂದ ಔಷಧವನ್ನು ಪಡೆಯಲು ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ ಹಲವು ರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದರು. ಅಷ್ಟೇ ಅಲ್ಲಾ ವಿದೇಶಿ ಪ್ರಜೆಗಳು ಕೂಡ ನಾರಾಯಣ ಮೂರ್ತಿ ಅವರ ನಾಟಿ ಔಷಧವನ್ನು ಪಡೆದುಕೊಂಡಿದ್ದಾರೆ.

ಆದರೆ ನಾರಾಯಣ ಮೂರ್ತಿ ಅವರ ನಿಧನದ ಜೊತೆಗೆ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ನಾರಾಯಣ ಮೂರ್ತಿ ಅವರ ಕುಟುಂಬ ನಾಟಿ ಔಷಧ ವಿತರಣೆಯನ್ನೇ ಸ್ಥಗಿತ ಗೊಳಿಸಿತ್ತು. ಆದ್ರೀಗ ಸಾಗರ ತಾಲೂಕಿನ ಆರೋಗ್ಯಾಧಿಕಾರಿಗಳ ಮಾರ್ಗದರ್ಶನದ ಮೂಲಕ ಮತ್ತೆ ನಾಟಿ ಔಷಧ ನೀಡುವುದನ್ನು ಆರಂಭಿಸಿದ್ದಾರೆ. ಇದರಿಂದಾಗಿ ನರಸೀಪುರದ ನಾಟಿ ಔಷಧದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ.

Comments are closed.