ಬೆಂಗಳೂರಿನಿಂದ ಮಂಗಳೂರು ಪ್ರಯಾಣ ಮತ್ತಷ್ಟು ಸುಲಭ : ಕೇವಲ 5 ಗಂಟೆ ಸಾಕು..!

ಇದ್ಹೇಗೆ ಸಾಧ್ಯ ? 5 ಗಂಟೆಯ ಅವಧಿಯಲ್ಲಿ ಬೆಂಗಳೂರಿನಿಂದ ಮಂಗಳೂರು ಬಂದು ತಲುಪೋಕೆ ಪುಷ್ಪಕ ವಿಮಾನವೇ ಬೇಕು ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಭಾರತೀಯ ರೈಲ್ವೆ ಇಲಾಖೆಯು ಇದನ್ನು ಸಾಧ್ಯ ಮಾಡುತ್ತಿದೆ. ಏಕೆಂದರೆ ಬಹುನಿರೀಕ್ಷಿತ ವಂದೇ ಭಾರತ್​ ರೈಲು ಬೆಂಗಳೂರು ಮತ್ತು ಮಂಗಳೂರು ಮಾರ್ಗವಾಗಿ ಶೀಘ್ರದಲ್ಲಿಯೇ ತನ್ನ ಕಾರ್ಯಾಚರಣೆ ಆರಂಭಿಸಲಿದೆ. ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ 2026ರಲ್ಲಿ ಪ್ರವಾಸ ಕೈಗೊಳ್ಳಬೇಕು ಎಂದು ಪ್ಲಾನ್​ ಮಾಡಿದವರಿಗೆ ನಿಜಕ್ಕೂ ಇದೊಂದು ಸಂತಸದ ವಿಚಾರವಾಗಿದೆ.

ಸದ್ಯ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವೆ 55 ಕಿಲೋ ಮೀಟರ್​ ಘಾಟ್​ ವಿಭಾಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳುವುದು ಮಾತ್ರ ಬಾಕಿ ಇದೆ. ಇದೊಂದು ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ವಂದೇ ಭಾರತ್​ ರೈಲು ಕರಾವಳಿ ಪ್ರದೇಶಕ್ಕೆ ಎಂಟ್ರಿ ಕೊಡಲಿದೆ. ವಿದ್ಯುದೀಕರಣ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ರೈಲು ಸಂಚಾರ ಆರಂಭಿಸಲಿದ್ದೇವೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Sirsi-Kumta: ಖರ್ಚು ಕಮ್ಮಿ ,ಪ್ರಯಾಣವೂ ಸುಲಭ; ಹೊಸ ವರ್ಷಕ್ಕೆ ಇದೊಂದು ಸಿಹಿ ಸುದ್ದಿ, ಅರ್ಧಕ್ಕರ್ಧ ಇಳಿಯಲಿದೆ ಈ ಮಾರ್ಗದ ಟಿಕೇಟ್‌ ದರ!

ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲುಗಳು ವಿದ್ಯುಚ್ಛಶಕ್ತಿಯನ್ನು ಇಂಧನವನ್ನಾಗಿ ಬಳಸಿಕೊಳ್ಳುತ್ತದೆ. ಹೀಗಾಗಿ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಅಲ್ಲದೇ ಸಾಮಾನ್ಯ ರೈಲಿಗಿಂತ ವೇಗ ಕೂಡ ಹೆಚ್ಚಿರುತ್ತದೆ. ಸ್ವಚ್ಛವಾದ ಗಾಳಿಯೊಂದಿಗೆ ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯುವ ಮೂಲಕ ಕರಾವಳಿಗೆ ಎಂಟ್ರಿ ಕೊಡಬಹುದಾಗಿದೆ/

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories