ಪುತ್ತೂರು : ಹೊಂಡಾಗುಂಡಿ ರಸ್ತೆ – ನಗರಸಭೆ ಆಯುಕ್ತರಿಗೆ ಶಾಸಕರ ಕ್ಲಾಸ್‌

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹೊಂಡಾಗುಂಡಿ ರಸ್ತೆಗಳದ್ದೇ ಕಾರುಬಾರು ಎಂಬಂತಾಗಿದೆ. ಸಾರ್ವಜನಿಕರು ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ. ಇದೀಗ ರಸ್ತೆಗಳಲ್ಲಿ ಹೊಂಡ ಮುಚ್ಚದ ಹಿನ್ನೆಲೆಯಲ್ಲಿ ಸ್ವತಃ ಶಾಸಕ ಅಶೋಕ್​ ರೈ (MLA Ashok Rai) ಗರಂ ಆಗಿದ್ದಾರೆ.

ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಪುತ್ತೂರು ಶಾಸಕ ಅಶೋಕ್‌ ರೈ ಹೊಂಡಾಗುಂಡಿ ರಸ್ತೆಯನ್ನು ಕಂಡು ಗರಂ ಆಗಿದ್ದಾರೆ. ಕೂಡಲೇ ಅಶೋಕ್‌ ರೈ ಪುತ್ತೂರು ನಗರ ಸಭೆಯ ಆಯುಕ್ತರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಡ್​ ಪ್ಯಾಚ್​ ವರ್ಕ್ ಮಾಡಿ ಎಂದು ಎಷ್ಟು ಸಲ ಹೇಳಬೇಕು ? ನಾನು ಹೇಳೋ ಭಾಷೆ ನಿಮಗೆ ಅರ್ಥ ಆಗುತ್ತಾ ಇಲ್ವಾ ? ಎಲ್ಲದಕ್ಕೂ ಇಂಜಿನಿಯರ್​ ಕಡೆ ಬೊಟ್ಟು ಮಾಡಿ ತೋರಿಸುವುದಾದರೆ ನೀವು ಕಮಿಷನರ್​ ಆಗಿ ಯಾಕೆ ಇದ್ದೀರಾ ? ಆ ಇಂಜಿನಿಯರ್​ಗೆ ಏನು ತಲೆ ಕೆಟ್ಟಿದ್ಯಾ ? ನಾಳೆ ಇಲ್ಲಿ ದುರಸ್ತಿ ಕಾರ್ಯ ನಡೆಸದಿದ್ದರೆ ಏನು ಮಾಡುತ್ತೇನೆ ಎಂದು ನೋಡ್ತೀರಿ ಎಂದು ನಗರಸಭೆ ಕಮಿಷನರ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರಮೋದ್‌ ಮಧ್ವರಾಜ್‌ ಕಡೆಗಣನೆ ವಿವಾದ : ಬಿಜೆಪಿಯಿಂದ ಡ್ಯಾಮೇಜ್‌ ಕಂಟ್ರೋಲ್‌

ಈ ರಸ್ತೆ ನಿತ್ಯ ಓಡಾಡುವ ಜನರು ಸಾಯುತ್ತಿದ್ದಾರೆ. ನಾನು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ನೀವೆಂತಾ ಕಮಿಷನರ್​ ? ಎಲ್ಲಾದಕ್ಕೂ ಕೆಳ ಹಂತದ ಅಧಿಕಾರಿಗಳ ಕಡೆ ಕೈ ತೋರಿಸುತ್ತಿದ್ದೀರಾ ? ನನ್ನ ಮಾತುಗಳನ್ನು ಕಡೆಗಣಿಸಬೇಡಿ.

ಮುಂದಿನ ಮಳೆಗಾಲವನ್ನೂ ಈ ಗುಂಡಿ ರಸ್ತೆಯಲ್ಲಿಯೇ ಮುಂದೂಡುತ್ತೀರಾ ಎಂದು ಶಾಸಕ ಅಶೋಕ್​ ರೈ ಪ್ರಶ್ನಿಸಿದ್ದಾರೆ. ಶಾಸಕ ಅಶೋಕ್​ ರೈ ಈ ರೀತಿ ತರಾಟೆ ತೆಗೆದುಕೊಳ್ಳುತ್ತಿದ್ದಂತೆಯೇ ಪುತ್ತೂರು ನಗರಸಭೆ ಅಲರ್ಟ್​ ಆಗಿದ್ದು ರಸ್ತೆ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ : ಎಚ್ಚರ … ಎಚ್ಚರ… : ರಾಜ್ಯದಲ್ಲಿ ಹೆಚ್ಚಿನ ಇಲಿಜ್ವರದ ಆತಂಕ

Puttur Hondagundi Road MLA Class for Municipal Commissioner

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories