ಆಕ್ಸಿಜನ್ ಕೊರತೆ 11 ಮಂದಿ ದುರ್ಮರಣ

ಆಂಧ್ರಪ್ರದೇಶ : ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ  ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ರಾಮನಾರಾಯಣ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿ ಸಿದೆ. ಆಕ್ಸಿಜನ್ ರಿಫೀಲಿಂಗ್ ವೇಳೆಯಲ್ಲಿ 5 ನಿಮಿಷದ  ವ್ಯತ್ಯಯವಾಗಿದೆ. ಇದರಿಂದ ಆಕ್ಸಿಜನ್ ಪೂರೈಕೆಯಲ್ಲಿ ಕಡಿತವಾಗಿ ಈ ದುರಂತ ಸಂಭವಿಸಿದೆ. ಆಸ್ಪತ್ರೆಯಲ್ಲಿದ್ದ 30 ವೈದ್ಯರು ತಕ್ಷಣವೇ ಐಸಿಯುಗೆ ಧಾವಿಸಿದರು. ಐದು ನಿಮಿಷದಲ್ಲಿ ಮತ್ತೆ ಆಕ್ಸಿಜನ್ ಪುನಃ ಪೂರೈಕೆ ಪ್ರಾರಂಭಿಸಲಾ ಯಿತು ಎಂದು ಚಿತ್ತೋರ್ ಜಿಲ್ಲಾಧಿಕಾರಿ ಹರಿನಾರಾಯಣ ತಿಳಿಸಿದ್ದಾರೆ.

ಆಕ್ಸಿಜನ್ ದುರಂತ ಪ್ರಕರಣದ ಕುರಿತು ಸಮಗ್ರ ತನಿಖೆ ಗೆ ಆದೇಶಿಸಿ ರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳು ವಂತೆ ಸೂಚಿಸಿದ್ದಾರೆ.

Comments are closed.