Mukesh Ambani : ತಿರುಮಲ ವೆಂಕಟೇಶ್ವರ ದೇಗುಲಕ್ಕೆ 1.5 ಕೋಟಿ ರೂಪಾಯಿ ಕಾಣಿಕೆ ಸಲ್ಲಿಸಿದ ಮುಕೇಶ್​ ಅಂಬಾನಿ

ಆಂಧ್ರ ಪ್ರದೇಶ : Mukesh Ambani offers Rs 1.5 crore: ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಅಧ್ಯಕ್ಷ ಮುಕೇಶ್​ ಅಂಬಾನಿ ಇಂದು ಆಂಧ್ರ ಪ್ರದೇಶದ ತಿರುಮಲದ ಸಮೀಪದಲ್ಲಿರುವ ವೆಂಕಟೇಶ್ವರನ ಪುರಾತನ ಬೆಟ್ಟದ ದೇವಾಲಯಕ್ಕೆ ಬರೋಬ್ಬರಿ 1.5 ಕೋಟಿ ರೂಪಾಯಿ ಮೌಲ್ಯದ ಚೆಕ್​ನ್ನು ಕಾಣಿಕೆಯ ರೂಪದಲ್ಲಿ ಅರ್ಪಿಸಿದ್ದಾರೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಂಕಟೇಶ್ವರನ ಕಟ್ಟಾ ಭಕ್ತರಾಗಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಅಧ್ಯಕ್ಷ ಮುಕೇಶ್​ ಅಂಬಾನಿ ದೇವಳಕ್ಕೆ ಒಂದಿಲ್ಲೊಂದು ಕಾಣಿಕೆಯನ್ನು ನೀಡುತ್ತಲೇ ಇರುತ್ತಾರೆ. ಇಂದು ಮುಂಜಾನೆ ಕೂಡ ಎನ್‌ಕೋರ್ ಹೆಲ್ತ್‌ಕೇರ್ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಮತ್ತು ಇತರ ಆರ್‌ಐಎಲ್ ಅಧಿಕಾರಿಗಳು ನಸುಕಿನ ಜಾವ ಬೆಟ್ಟಗಳಿಗೆ ಆಗಮಿಸಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಮುಕೇಶ್​ ಅಂಬಾನಿ ದೇಗುಲದಲ್ಲಿ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ ವೆಂಕಟ ಧರ್ಮ ರೆಡ್ಡಿ ಅವರಿಗೆ 1.5 ಕೋಟಿ ರೂಪಾಯಿ ಚೆಕ್​ ಹಸ್ತಾಂತರ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಟ್ಟದ ಮೇಲಿರುವ ಅತಿಥಿ ಗೃಹದಲ್ಲಿ ಟಿಟಿಡಿ ಹೆಚ್ಚುವರಿ ಕಾರ್ಯ ನಿರ್ವಾಹಕ ಅಧಿಕಾರಿ ಎ. ವೆಂಕಟ ಧರ್ಮ ರೆಡ್ಡಿ ಜೊತೆಯಲ್ಲಿ ಕೆಲ ಕಾಲ ಮಾತುಕತೆ ನಡೆಸಿದ ನಂತರ ಮುಕೇಶ್​ ಅಂಬಾನಿ . ರಾಧಿಕಾ ಮರ್ಚೆಂಟ್​ ಹಾಗೂ ಇತರರು ವೆಂಕಟೇಶ್ವರನ ಮಹಾ ಅಭಿಷೇಕ ಕಾರ್ಯದಲ್ಲಿ ಭಾಗಿಯಾದರು.

ಒಂದು ಗಂಟೆಗಳ ಕಾಲ ನಡೆದ ವೆಂಕಟೇಶ್ವರನ ಮಹಾ ಅಭಿಷೇಕದಲ್ಲಿ ಭಾಗಿಯಾದ ಮುಕೇಶ್​ ಅಂಬಾನಿ, ರಾಧಿಕಾ ಮರ್ಚೆಂಟ್​ ಸೇರಿದಂತೆ ಇತರರು ವೇದ ಸ್ತೋತ್ರ ಪಠಣ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಇದಾದ ಬಳಿಕ ದೇಗುಲದ ಆನೆಗಳಿಗೆ ಮುಕೇಶ್​ ಅಂಬಾನಿ ಆಹಾರ ನೀಡಿದ್ದಾರೆ ಎಂದು ದೇಗುಳದ ಆಡಳಿತ ಮಂಡಳಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Ipl 2023: ಪಂಜಾಬ್​ ಕಿಂಗ್ಸ್​ ಮುಖ್ಯ ಕೋಚ್​ ಸ್ಥಾನದಿಂದ ಅನಿಲ್​ ಕುಂಬ್ಳೆ ಔಟ್​ : ಟ್ರೆವೋರ್​ ಬೇಲಿಸ್​ ಇನ್​

ಇದನ್ನೂ ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

Mukesh Ambani offers Rs 1.5 crore to Lord Venkateswara shrine in Tirumala

Comments are closed.