ರೋಹಿಣಿ ಸಿಂಧೂರಿ V/s ಶಿಲ್ಪ ನಾಗ್ ಸಂಘರ್ಷ : ಏಟಿಗೆ ತಿರುಗೇಟು

ಮೈಸೂರು :  ಅರಮನೆ ನಗರಿ ಮೈಸೂರಿನಲ್ಲೀಗ ಐಎಎಸ್ ಸಂಘರ್ಷ ಶುರುವಾಗಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪ ನಾಗ್ ಅವರ  ನಡುವಿನ ಜಟಾಪಟಿ ಮತ್ತಷ್ಟು ರಂಗುಪಡೆದಿದೆ.

ಮೈಸೂರು ನಗರ ಪಾಲಿಕೆಯಲ್ಲಿ ಖರ್ಚು ಮಾಡಿದ ಸಿಎಸ್ಆರ್ ಫಂಡ್ ನ 12 ಕೋಟಿ ರೂಪಾಯಿಯ ಲೆಕ್ಕ ಕೇಳಿರುವುದೇ ತಪ್ಪಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶಿಲ್ಪನಾಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಆದರೆ ಈ ಬಗ್ಗೆ ಸ್ಪಷ್ಟನೆ ‌ನೀಡದ ಶಿಲ್ಪನಾಗ್ ಅವರು, ಪ್ರತಿಯೊಂದು ಕೆಲಸವೂ ನನ್ನಿಂದಲೇ ಆಗಬೇಕೆಂಬ ಅಹಂ ರೋಹಿಣಿ ಸಿಂಧೂರಿಗೆ ತಿರುಗೇಟು ನೀಡಿದ್ದಾರೆ.

ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು, ಸರಕಾರ ಯಾರ ಪರ ಅಥವಾ ವಿರುದ್ಧ ಇಲ್ಲದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಮುಖ್ಯ ‌ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

Comments are closed.