Punjab CM: ಕಮಿಷನ್​ ಆರೋಪ ಹೊತ್ತ ಸಚಿವರನ್ನು ಸಂಪುಟದಿಂದ ವಜಾಗೊಳಿಸಿದ ಪಂಜಾಬ್​ ಸಿಎಂ

Punjab CM : ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಪಂಜಾಬ್​ ಆರೋಗ್ಯ ಸಚಿವರನ್ನು ಪಂಜಾಬ್​ ಸಿಎಂ ಭಗವಂತ್​ ಮಾನ್​​ ಸಂಪುಟದಿಂದ ವಜಾಗೊಳಿಸಿದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿದೆ. ಪಂಜಾಬ್​ ಸಿಂಗ್ಲಾ ವಿರುದ್ಧ 1 ಪರ್ಸೆಂಟ್ ಕಮಿಷನ್​ ಕೇಳಿದ ಆರೋಪ ಎದುರಾಗಿತ್ತು. ದೇಶದ ಇತಿಹಾಸದಲ್ಲಿಯೇ ಮುಖ್ಯಮಂತ್ರಿಯು ಸಂಪುಟದ ಸದಸ್ಯನ ಮೇಲೆ ಈ ರೀತಿಯಾಗಿ ನೇರ ಕ್ರಮ ಕೈಗೊಂಡಿರುವುದು ದೇಶದ ಇತಿಹಾಸದಲ್ಲಿಯೇ ಇದು ಎರಡನೇ ಬಾರಿಯಾಗಿದೆ. 2015ರಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದ ಸಚಿವನನ್ನು ಸಂಪುಟದಿಂದ ವಜಾಗೊಳಿಸಿದ್ದರು.


ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬ್​ ಸಿಎಂ ಭಗವಂತ್​ ಮಾನ್​​ರ ಈ ಕ್ರಮವನ್ನು ಪ್ರಶಂಸಿಸಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​, ಕಮಿಷನ್​ ಆರೋಪವನ್ನು ಎದುರಿಸುತ್ತಿರುವ ತಮ್ಮದೇ ಸಂಪುಟದ ಸಚಿವರನ್ನು ವಜಾ ಮಾಡಿರುವ ಮಾನ್​ ನಡೆಯು ನನ್ನ ಕಣ್ಣಿನಲ್ಲಿ ನೀರು ತರಿಸಿದೆ. ಈ ರೀತಿಯ ಕ್ರಮದಿಂದಾಗಿ ಸಂಪೂರ್ಣ ದೇಶವು ಇಂದು ಆಮ್​ ಆದ್ಮಿ ಪಕ್ಷದ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು ಹೇಳಿದ್ದಾರೆ.


ದೇಶದಲ್ಲಿ ಭ್ರಷ್ಟಾಚಾರ ಹಾಗೂ ಭ್ರಷ್ಟರಿಗೆ ಸ್ಥಾನವಿಲ್ಲದ ಏಕೈಕ ಪಕ್ಷವೆಂದರೆ ಅದು ಆಮ್​ ಆದ್ಮಿ ಪಕ್ಷವಾಗಿದೆ. ಭ್ರಷ್ಟಾಚಾರದ ವಿರುದ್ಧ ಕಿರಿಯ ಸಹೋದರ ಭಗವಂತ್​ ಮಾನ್​ ಅವರ ನಿರ್ಧಾರ ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದು ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ .


“ಇಂದು, ಪಂಜಾಬ್ ಸಿಎಂ ಭಗವಂತ್ ಮಾನ್ ರಾಜ್ಯದ ಆರೋಗ್ಯ ಸಚಿವರನ್ನು ವಜಾಗೊಳಿಸಿದ್ದಾರೆ … ಯಾರನ್ನು ಬಂಧಿಸಲಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಮಾಧ್ಯಮಗಳು ಅಥವಾ ಪ್ರತಿಪಕ್ಷಗಳಿಗೂ ಇದರ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಕೇಜ್ರಿವಾಲ್​ ಹೇಳಿದರು.

ಇದನ್ನು ಓದಿ : Devanur Mahadeva : ತೀವ್ರಗೊಂಡ ಪಠ್ಯ ಕೇಸರಿಕರಣ ವಿವಾದ : ನನ್ನ ಬರಹ ಕೈಬಿಡಿ ಎಂದು ಸರ್ಕಾರಕ್ಕೆ ದೇವನೂರ ಮಹಾದೇವ ಪತ್ರ

ಇದನ್ನೂ ಓದಿ : Heavy Rain Yellow Alert : ತಮಿಳುನಾಡಲ್ಲಿ ಮೇಲ್ಮೈ ಸುಳಿಗಾಳಿ ಕರ್ನಾಟಕದಲ್ಲಿ ಬಾರೀ ಮಳೆ : ಉಡುಪಿ, ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌

‘Proud of you Bhagwant, brought tears in my eyes’: Kejriwal heaps praise on Punjab CM for sacking minister

Comments are closed.