ರಾಜ್ಯದ ಪರ ಮಾತಾಡ ಬೇಕಾದ ಬಿಜೆಪಿಯ 25 ಸಂಸದರು ಮೌನವಾಗಿದ್ದಾರೆ: ಕೃಷ್ಣಬೈರೇಗೌಡ

ಬೆಂಗಳೂರು : ರಾಜ್ಯದ ಪರವಾಗಿ ಕೇಂದ್ರದಲ್ಲಿ    ಆಗ್ರಹಿಸ ಬೇಕಾದ ಆಡಳಿತ ಪಕ್ಷ ಬಿಜೆಪಿಯ 25 ಸಂಸದರು ಕೈ ಬಾಯಿಮುಚ್ಚಿಕೊಂಡು ಸುಮ್ಮನಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ, ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಪರವಾಗಿ ಕೇಂದ್ರದಲ್ಲಿ ಮಾತನಾಡಬೇಕಾದ ಸಂಸದರು ಸುಮ್ಮನೆ ಇರುವುದು ರಾಜ್ಯದ ದುರದೃಷ್ಟ ಎಂದಿದ್ದಾರೆ‌. ಜಿಎಸ್ಟಿ ಇಂದ ಹಿಡಿದು ಆಕ್ಸಿಜನ್ ತನಕ ಈ ಸಂಸದರು ಮೋದಿ ಅಥವಾ ಅಮಿತ್ ಶಾ ಮುಂದೆ ತಮ್ಮ ಬಾಯಿ ಯನ್ನು ಬಿಚ್ಚುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಎಲ್ಲಾ ಸಂಸದರು, ತಮ್ಮ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಆಕ್ಸಿಜನ್ ವಿಷಯದಲ್ಲಿ ಕೇಂದ್ರ ವನ್ನು ಈ ಸಂಸದರು ಕೆಳಬೇಕಾಗಿತ್ತು, ಆದರೆ ಮೋದಿ ಹಾಗೂ ಅಮಿತ್ ಶಾಗೆ ಹೆದರಿಕೊಂಡು ಸುಮ್ಮನೆ ಕುಳಿತು ಕೊಂಡು ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ.  ಸರಿಯಾಗಿ ಜಿಎಸ್ಟಿಯ ಭಾಗವನ್ನು ಸಹ ರಾಜ್ಯಕ್ಕೆ ಕೇಂದ್ರ ಕೊಟ್ಟಿಲ್ಲ. ಆದರೆ ಈ ಸಂಸದರು ಇದನ್ನು ಕೇಳುವ ಬದಲು ಸುಮ್ಮನೆ ಕುಳಿತಿದ್ದಾರೆ ಎಂದಿದ್ದಾರೆ. ಶಾಸಕರಾದ ರಿಜ್ವಾನ್ ಅರ್ಷದ್, ಪ್ರಿಯಾಂಕ ಖರ್ಗೆ ಉಪಸ್ಥಿತರಿದ್ದರು.

Comments are closed.