ನಾನು ಪಕ್ಷದ ಪರವಾಗಿದ್ದೇನೆ, ಯಾರು‌ ಬೇಕಾದರೂ ದೆಹಲಿಗೆ ಹೋಗಲಿ : ಸಚಿವ ಸಿ.ಪಿ‌.ಯೋಗೀಶ್ವರ್

ರಾಮನಗರ : ನಾನು ಪಕ್ಷದ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಯಾರು ಬೇಕಾದರೂ ದೆಹಲಿಗೆ ಹೋಗಲಿ ನಾನು ತಲೆಕೆಡಿಸಿಕೊಳ್ಳು ವುದಿಲ್ಲ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದ್ದಾರೆ.

ಬಿ.ಜಿ.ಎಸ್. ಶಾಖಾಮಠಕ್ಕೆ ತೆರಳಿ ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದ ಯೋಗೇಶ್ವರ್, ನನ್ನ ಕೆಲ ಸ್ನೇಹಿತರು ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಿದ್ದಾರೆ. ಅವರ ಹಿಂದೆ ಯಾರು ಮಾತನಾಡಿಸುತ್ತಿದ್ದಾರೋ ಗೊತ್ತಿಲ್ಲ. ಈ ಬೆಳವಣಿಗೆಯಿಂದ ನೋವಾಗಿದೆ ಎಂದಿದ್ದಾರೆ.

ನಾನು ನೀಡಿದ ಹೇಳಿಕೆ ಇಷ್ಟೊಂದು ದೊಡ್ಡದಾಗುತ್ತದೆಂದು  ಗೊತ್ತಿರಲಿಲ್ಲ. ಮಾತನಾಡಲು ಬಹಳ ವಿಷಯಗಳಿವೆ. ಯಾರು ಯಾವಾಗ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದನ್ನು ಈಗ ಹೇಳಲ್ಲ. ಕೆಲ ಸ್ನೇಹಿತರ ಮಾತಿಂದ ನೋವಾಗಿದೆ. ಆದರೆ ನನ್ನ ವಿರುದ್ಧ ಯಾರು ಸಹಿ ಸಂಗ್ರಹದ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅಲ್ಲದೇ ಮೆಗಾ ಸಿಟಿ ಹಗರಣ ನ್ಯಾಯಾಲಯ ದಿಂದಲೇ ಕ್ಲಿಯರ್ ಆಗಿದೆ.

Comments are closed.