Minister Dr. K Sudhakar : ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಗೊಂದಲ : ನಮ್ಮ ಪಕ್ಷ ನೋಡಿ ಕಲಿತುಕೊಳ್ಳಿ ಎಂದ ಸುಧಾಕರ್​

ಚಿಕ್ಕಬಳ್ಳಾಪುರ : Minister Dr. K Sudhakar : ಕಾಂಗ್ರೆಸ್​​ನಲ್ಲಿ ಮುಂದಿನ ಸಿಎಂ ಯಾರು ಎಂಬ ಗೊಂದಲ ಹೆಚ್ಚಾಗಿದ್ದು ಒಬ್ಬೊಬ್ಬ ಕಾಂಗ್ರೆಸ್​ ನಾಯಕರು ಒಂದೊಂದು ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಹಲವು ತಿಂಗಳುಗಳು ಬಾಕಿ ಇರುವಾಗಲೇ ಕಾಂಗ್ರೆಸ್​​ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆಯು ಪಕ್ಷದ ನಾಯಕರಲ್ಲಿ ಆಂತರಿಕ ಕಚ್ಚಾಟಕ್ಕೆ ನಾಂದಿ ಹಾಡಿದೆ. ಡಿ.ಕೆ ಶಿವಕುಮಾರ್​ ಸಿಎಂ ಸೀಟಿನಲ್ಲಿ ಕೂರಬೇಕೆಂಬ ಅಭಿಲಾಷೆಯನ್ನು ಹೊಂದಿದ್ದರೆ ಸಿದ್ದರಾಮಯ್ಯ ಆಪ್ತರು ನಮ್ಮ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ವಿಪಕ್ಷದಲ್ಲಿ ಆಂತರಿಕ ಕಚ್ಚಾಟದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್​ ವ್ಯಂಗ್ಯವಾಡಿದ್ದಾರೆ.


ಚಿಕ್ಕ ಬಳ್ಳಾಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಡಾ.ಕೆ ಸುಧಾಕರ್​ , ಪಕ್ಷದ ಅಧ್ಯಕ್ಷರು ವ್ಯಕ್ತಿ ಪೂಜೆ ಮಾಡಬೇಡಿ . ಪಕ್ಷದ ಪೂಜೆ ಮಾಡಿ ಎಂದು ಹೇಳುತ್ತಾರೆ. ಮಾಜಿ ಮಂತ್ರಿಯೊಬ್ಬರು ಸಿದ್ದರಾಮಯ್ಯರೇ ನಮ್ಮ ಮುಂದಿನ ಸಿಎಂ ಎಂದು ಹೇಳ್ತಾರೆ. ಇತ್ತ ಎಂ.ಬಿ ಪಾಟೀಲ್​ ಸಿಎಂ ಖುರ್ಚಿಯಲ್ಲಿ ಕೂರಲು ನಾನೂ ಸಮರ್ಥನಿದ್ದೇನೆ ಎಂದು ಹೇಳುತ್ತಾರೆ. ಇವೆಲ್ಲದರ ನಡುವೆ ಸಾಮೂಹಿಕ ನಾಯಕತ್ವದಲ್ಲಿ ಮುಂದುವರಿಯೋಣ ಅಂತಾ ಡಾ .ಜಿ ಪರಮೇಶ್ವರ್​ ಕರೆ ನೀಡುತ್ತಾರೆ.


ಇನ್ನು ದಲಿತ ಮುಖ್ಯಮಂತ್ರಿ ಬಗ್ಗೆ ಈಗಲೇ ಹೇಳುವಂತಿಲ್ಲ. ಹೈಕಮಾಂಡ್​ ತೀರ್ಮಾನ ಏನಿರುತ್ತೋ ನೋಡೋಣ ಅಂತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ನ ಹಿರಿಯ ನಾಯಕ. ಇಲ್ಲಿ ಯಾರೂ ಕೂಡ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಪದವೇ ಸರಿಯಿಲ್ಲ. ಇಂತದ್ದೊಂದು ದ್ವಂದ್ವವನ್ನು ಹೊಂದಿರುವ ಜೇನುಗೂಡಿನಲ್ಲಿ ನೀವೆಲ್ಲ ಸಿಲುಕಿಕೊಂಡಿದ್ದೀರಿ.ಈ ಸಂದರ್ಭದಲ್ಲಿ ನಮ್ಮ ಪಕ್ಷದ ಉಸಾಬರಿ ನಿಮಗ್ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.


ನಮ್ಮ ಪಕ್ಷ ಬಹಳ ಶಿಸ್ತಿನ ಪಕ್ಷ. ನಮ್ಮಲ್ಲಿ ಇಲ್ಲಿಯವರೆಗೂ ಸಿಎಂ ಬಗ್ಗೆ ಆಗಲಿ, ಮಾಜಿ ಸಿಎಂ ಬಗ್ಗೆ ಆಗಲಿ ,ರಾಜ್ಯದಲ್ಲೇ ಇರಲಿ ಕೇಂದ್ರದಲ್ಲೇ ಇರಲಿ ಅಪಸ್ವರ ಎಲ್ಲಾದರೂ ಬಂದಿದೆಯಾ..? ನಮ್ಮ ಪಕ್ಷವನ್ನು ನೋಡಿ ನೀವು ಕಲಿತುಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ ಸುಧಾಕರ್​ ಟಾಂಗ್​ ನೀಡಿದರು.

ಇದನ್ನು ಓದಿ : love with transgender : ಯುವಕನೆಂದು ನಂಬಿ ಮಂಗಳಮುಖಿಯನ್ನು ಪ್ರೀತಿಸಿದ ಯುವತಿ:ತನಿಖೆಯಲ್ಲಿ ಬಯಲಾಯ್ತು FB ಲವ್​ ಅಸಲಿತ್ತು

ಇದನ್ನೂ ಓದಿ : poonam pandey : ರಣವೀರ್​ ಸಿಂಗ್ ನನ್ನ ಆಟದಲ್ಲಿ​​ ನನ್ನನ್ನೇ ಸೋಲಿಸಿಬಿಟ್ಟರು ಎಂದ ಪೂನಂ ಪಾಂಡೆ

Minister Dr. K Sudhakar gave a response to the Congress leaders

Comments are closed.