ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು !

0

ತುಳುನಾಡಿನ ಅವಳಿ ವೀರರಾದ ಕೋಟಿ -ಚೆನ್ನಯರು ಇಡೀ ಕರಾವಳಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ವೀರರು. ಲಕ್ಷಾಂತರ ಭಕ್ತರನ್ನು ಹೊಂದಿರುವ ಕೋಟಿ ಚೆನ್ನಯ್ಯರ ಸಂಪೂರ್ಣ ಕಥಾವಳಿಗೆ ವಿವಿಧ ಪ್ರದೇಶಗಳ ಸಂಬಂಧವಿದೆ. ಆ ಎರಡು ಪ್ರದೇಶಗಳು ಕೋಟಿ ಚೆನ್ನಯ್ಯರ ಬದುಕಿನ ಬಹುಮುಖ್ಯ ಸ್ಥಳಗಳು. ಒಂದು ಕೋಟಿ ಚೆನ್ನಯ್ಯರು ವಿದ್ಯೆ ಕಲಿತ ಕಟಪಾಡಿ, ಇನ್ನೊಂದು ಕೋಟಿ ಚೆನ್ನಯ್ಯರ ಮಾವ ಸಾಯನ ಬೈದ್ಯ ನಾಟಿ ವೈದ್ಯ ಪದ್ದತಿಯ ಚಿಕಿತ್ಸೆಯನ್ನು ಕಲಿತ ಕೇರಳದ – ಕೊಡಗಿನ ಗಡಿ ಕರಿಕೆ.

Koti chennayya 6 1
ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು! 6

ಗೆಜ್ಜೆಗಿರಿಯಲ್ಲಿ ತನ್ನ ಮಾವ ಸಾಯನ ಬೈದ್ಯರ ಆಶ್ರಯದಲ್ಲಿ ಬೆಳೆದ ಕೋಟಿ ಚೆನ್ನಯ್ಯರನ್ನು ಯುದ್ದ ವಿದ್ಯಾಭ್ಯಾಸಕ್ಕಾಗಿ ಕಟಪಾಡಿಯ ಗರಡಿಗೆ ಕಳುಹಿಸಲಾಯಿತು. ಕೇರಳದ ಗುರುಗಳಿಂದ ಅವಳಿ ವೀರರು ಯುದ್ದ ವಿದ್ಯೆಯನ್ನು ಅಭ್ಯಾಸ ಮಾಡಿದರು. ಆ ಗರಡಿಯೇ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿಯೋ ಪಾಂಗಾಳ ಗರಡಿ.

Koti chennayya 5
ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು! 7

ಇದೇ ಪಾಂಗಾಳದ ಗರಡಿಯಲ್ಲಿ ಯುದ್ದ ವಿದ್ಯೆಯನ್ನು ಕರಗತ ಮಾಡಿಕೊಂಡ ಕೋಟಿ ಚೆನ್ನಯ್ಯರು ವೀರ ಪರಾಕ್ರಮಿಗಳಾಗಿ ಮಿಂಚಿದ್ದು ಈಗ ಇತಿಹಾಸ.  ಕಟಪಾಡಿಯ ಪಾಂಗಾಳ ಗರಡಿ ಜೀರ್ಣೋದ್ದಾರಗೊಂಡಿದ್ದು, ಲಕ್ಷಾಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

Koti chennayya 1
ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು! 8

ಕೋಟಿ ಚೆನ್ನಯ್ಯರಿಗೆ ಗುರು ಸಮಾನವಾಗಿದ್ದ ಮಾವ ಸಾಯನ ಬೈದ್ಯ ನಾಟಿ ವಿದ್ಯೆಯ ಮಹಾನ್ ಪಂಡಿತರು. ಈ ತನ್ನ ನಾಟಿ ವಿದ್ಯೆಯ ಪಾಂಡಿತ್ಯವನ್ನು ತನ್ನ ತಂಗಿ ದೇಯಿ ಬೈದತಿಗೆ ಸಾಯನ ಬೈದ್ಯರು ಧಾರೆ ಎರೆದಿದ್ದರು. ಸಾಯನ ಬೈದ್ಯರು ಈ ಅಪಾರ ಪಾಂಡಿತ್ಯದ ನಾಟಿ ವಿದ್ಯೆಯನ್ನು ಕಲಿತದ್ದು ಕೇರಳದ ಗಡಿ ಕೊಡಗಿನ ಭಾಗವಾಗಿರೋ ಕರಿಕೆಯಲ್ಲಿ.

Koti chennayya
ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು! 9

ಕರಿಕೆ ಶತಮಾನಗಳಿಂದಲೂ ನಾಟಿ ವೈದ್ಯ ಪದ್ದತಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಸಾಯನ ಬೈದ್ಯರು ಈ ನಾಟಿ ವೈದ್ಯ ಪದ್ದತಿಯನ್ನು ಕಲಿತಿದ್ದಾರೆ ಎಂಬುದು ಪ್ರತೀತಿ.

Koti chennayya 4
ಕರಿಕೆ, ಕಟಪಾಡಿಗೂ ಉಂಟು ಕೋಟಿ ಚೆನ್ನಯ್ಯರ ನಂಟು! 10

ಈ ರೀತಿಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ – ಪುತ್ತೂರಿನಲ್ಲಿ ಕರ್ಮ ಭೂಮಿಯಾಗಿಸಿದ ಕೋಟಿ ಚೆನ್ನಯ್ಯರು ವಿದ್ಯೆಯ  ಮೂಲ ಎರಡು ಜಿಲ್ಲೆಗಳು ಎಂಬುದು ಒಂದು ವಿಶೇಷ.. ಒಂದು ಕೃಷ್ಣನ ನಗರಿ ಉಡುಪಿ ಜಿಲ್ಲೆಯಾಗಿದ್ದರೆ ಇನ್ನೊಂದು ಕಾಫಿಯನಾಡು ಕೊಡಗು.

Leave A Reply

Your email address will not be published.