ಯುವರಾಜ್ ಆರ್ಭಟ, ಪಠಾಣ್ ಸಹೋದರರ ಮೋಡಿ : ಶ್ರೀ ಲಂಕಾ ಸೋಲಿಸಿ ಚಾಂಪಿಯನ್ಸ್ ಆದ ಇಂಡಿಯಾ ಲೆಜೆಂಡ್ಸ್

ರಾಯ್ ಪುರ : ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅಬ್ಬರದ ಬ್ಯಾಟಿಂಗ್ ಹಾಗೂ ಯೂಸೂಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಬೌಲಿಂಗ್ ಮೋಡಿಗೆ ಶ್ರೀಲಂಕಾ ಲೆಜೆಂಡ್ಸ್ ರೋಡ್ ಸೆಫ್ಟಿ ವಲ್ಡ್ ಸೀರಿಸ್ ನ ಫೈನಲ್ ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಭಾರತ ಲೆಜೆಂಡ್ಸ್ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.

ರಾಯ್ ಪುರದ ಶಾಹೀದ್ ವೀರ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಡ್ ಸೇಫ್ಟಿ ವಲ್ಡ್ ಸೀರಿಸ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಲೆಜೆಂಡ್ಸ್ ತಂಡಕ್ಕೆ ರಂಗನಾ ಹೆರಾತ್ ಆರಂಭಿಕ ಆಘಾತ ನೀಡಿದ್ರು. 10 ರನ್ ಗಳಿಸಿದ್ದ ವೀರೇಂದ್ರ ಸೆಹವಾಗ್ ಗೆ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಬದ್ರಿನಾಥ್ 7 ರನ್ ಗಳಿಸಿದಾ ಜಯಸೂರ್ಯಗೆ ವಿಕೆಟ್ ಒಪ್ಪಿಸಿದ್ರು. ನಂತರ ಸಚಿನ್ ತೆಂಡೂಲ್ಕರ್ ಗೆ ಜೊತೆಯಾದ ಯುವರಾಜ್ ಸಿಂಗ್ ಸ್ಪೋಟಕ ಆಟಕ್ಕೆ ಮನಮಾಡಿದ್ರು. 23 ಎಸೆತಗಳಲ್ಲಿ 30 ರನ್ ಗಳಿಸಿದ್ದ ಸಚಿನ್ ಮಹಾರೂಪ್ ಗೆ ವಿಕೆಟ್ ಒಪ್ಪಿಸಿದ್ದಾರೆ.

ನಂತರ ಯುವರಾಜ್ ಸಿಂಗ್ ಜೊತೆಯಾದ ಯೂಸೂಫ್ ಪಠಾಣ್ ಭರ್ಜರಿ ಜೊತೆಯಾಟವಾಡಿದ್ರು. 41 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 60 ರನ್ ಗಳಿಸಿದ್ರೆ, ಯೂಸೂಫ್ ಪಠಾಣ್ 36 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿ ಮೂಲಕ 62 ರನ್ ಬಾರಿಸಿದ್ದಾರೆ. ಇರ್ಫಾನ್ ಪಠಾಣ್ ಸಿಡಿಸಿದ 8 ರನ್ ನೆರವಿನಿಂದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 181ರನ್ ಗಳಿಸಿದ್ದಾರೆ.ಶ್ರೀಲಂಕಾ ಪರ ರಂಗನ ಹೆರಾತ್, ಸನತ್ ಜಯಸೂರ್ಯ, ಮಹಾರೂಪ್ ಹಾಗೂ ವೀರ ರತ್ನೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದರು.

ಭಾರತ ಲೆಜೆಂಡ್ಸ್ ನೀಡಿದ್ದ 182 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡಕ್ಕೆ ಆರಂಭಿಕರಾದ ಸನತ್ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್ಶನ್ ಉತ್ತಮ ಜೊತೆಯಾದ ಭರವಸೆ ಮೂಡಿಸಿದರು. ಆದರೆ 18 ಎಸೆತಗಳಲ್ಲಿ 21 ರನ್ ಗಳಿಸಿದ್ದ ತಿಲಕರತ್ನೆ ದಿಲ್ಶನ್ ಯೂಸೂಪ್ ಪಠಾಣ್ ಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಚಾಮರ ಸಿಲ್ವಗೆ ಇರ್ಫಾನ್ ಪಠಾಣ್ ಫೆವಿಲಿಯನ್ ಹಾದಿ ತೋರಿಸಿದ್ರು.

ಉಪುಲ್ ತರಂಗ 13 ರನ್ ಸಿಡಿ ಇರ್ಫಾನ್ ಪಠಾಣ್ ಗೆ ವಿಕೆಟ್ ಒಪ್ಪಿಸಿದ್ರೆ ಜಯಸೂರ್ಯ ಜೊತೆಯಾದ ಜಯಸಿಂಗೆ ಒಂದಿಷ್ಟು ಹೊತ್ತು ತಂಡವನ್ನು ಆಧರಿಸಿದ್ರು. ಆದರೆ 35 ಎಸೆತಗಳಲ್ಲಿ 43 ರನ್ ಗಳಿಸಿದ್ದ ಸನತ್ ಜಯಸೂರ್ಯ ಯಸೂಪ್ ಪಠಾಣ್ ವಿಕೆಟ್ ಒಪ್ಪಿಸಿದ್ರೆ, ಜಯಸಿಂಗೆ 40 ರನ್ ಗಳಿಸಿದ್ದಾಗ ರನೌಟ್ ಆದ್ರು. ವೀರ ರತ್ನೆ 38 ರನ್ ಗಳಿಸಿದ್ದು, ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್ ಗಳಲ್ಲಿ ಕೇವಲ 167 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಮೂಲಕ ಭಾರತ ಲೆಜೆಂಡ್ಸ್ ತಂಡ 14 ರನ್ ಗಳ ನೆರವಿನಿಂದ ಗೆಲುವು ಕಂಡಿದ್ದು, ರೋಡ್ ಸೇಫ್ಟಿ ವಲ್ಡ್ ಸಿರೀಸ್ ನಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.

Comments are closed.