Honor killing : ಮರ್ಯಾದಾ ಹತ್ಯೆ : ಅನ್ಯ ಜಾತಿ ಯುವಕನೊಂದಿಗೆ ಪ್ರೀತಿ : ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಂದೆ

ಬಳ್ಳಾರಿ : (Honor killing)ಮಗಳು ಬೇರೆ ಸಮುದಾಯದ ಹುಡುಗನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದ ತಂದೆ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಂದ ಮರ್ಯಾದಾ ಹತ್ಯೆ ಪ್ರಕರಣ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಕುಡಿತಿನಿ ಎಂಬಲ್ಲಿ ನಡೆದಿದೆ

ಮಗಳು ಬೇರೆ ಸಮುದಾಯದ ಹುಡುಗನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಮಗಳಿಗೆ ಹಲವು ಬಾರೀ ತಂದೆ ಆತನನ್ನು ಬಿಡುವಂತೆ ಎಚ್ಚರಿಕೆ ನೀಡಿದ್ದರು . ಆದರೂ ಕೂಡ ಆಕೆ ಆತನೊಂದಿಗೆ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದಳು . ಇದರಿಂದ ಮನನೊಂದ ತಂದೆ ತನ್ನ ಮಗಳನ್ನು ಬಳ್ಳಾರಿ ಜಿಲ್ಲೆಯ ಕುಡಿತಿನಿ ಎಂಬಲ್ಲಿನ ಕಾಲುವೆಗೆ (Honor killing)ತಳ್ಳಿದ್ದಾನೆ .

ಅಕ್ಟೋಬರ್‌ 31 ರಂದು ಈ ಕೃತ್ಯ ನಡೆದಿದ್ದು, ಆರೋಪಿ ಓಂಕಾರ್‌ ಗೌಡ ತನ್ನ ಮಗಳನ್ನು ಸಿನಿಮಾಗೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ . ಮನೆಯಿಂದ ಹೊರಬಂದ ಇಬ್ಬರು ಚಲನಚಿತ್ರಕ್ಕೆ ತಡವಾಗಿ ಹೋಗಿದ್ದರು . ಆದ್ದರಿಂದ , ಅವರು ಥಿಯೇಟರ್‌ ಬಿಟ್ಟು ದೇವಸ್ಥಾನಕ್ಕೆ ಹೋಗಿ ನಂತರ ಹತ್ತಿರದ  ಚಿನ್ನದ ಅಂಗಡಿಯಿಂದ ಆಭರಣಗಳನ್ನು ಖರೀದಿಸಿ,  ಬಳಿಕ ಆಕೆಯನ್ನು  ಬಳ್ಳಾರಿ ಪ್ರದೇಶದ ಕುಡಿತಿನಿ ಎಂಬ ಹೈಲೆವೆಲ್‌ ಕಾಲುವೆಗೆ ಕರೆದೊಯ್ದು ನೀರಿಗೆ ತಳ್ಳಿದ್ದಾನೆ . ಸಹಾಯಕ್ಕಾಗಿ ಬಾಲಕಿ ಕೂಗಿಕೊಂಡರೂ ಕೂಡ ಆಕೆಯ ತಂದೆ ಸಹಾಯ ಮಾಡಲಿಲ್ಲ . ಮಗಳು ನೀರಿನಲ್ಲಿ ಮುಳುಗಿ ಸತ್ತ ನಂತರ ರಾತ್ರೋರಾತ್ರಿ ತಿರುಪತಿಗೆ ಪರಾರಿಯಾಗಿದ್ದನು .

ಇದನ್ನೂ ಓದಿ : Chandrasheskar death case : ಚಂದ್ರು ಸಾವಿನ ಮರುಸೃಷ್ಟಿ, ಸಮಗ್ರ ತನಿಖೆ ಸಿಎಂ ಬೊಮ್ಮಾಯಿ ಸೂಚನೆ

ಇದನ್ನೂ ಓದಿ : Student suicide : ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಹೊರಹಾಕಿದ್ದ ಶಿಕ್ಷಕರು : 13 ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಬಾಲಕಿಯ ತಾಯಿ ಮತ್ತು ಸಹೋದರ ಕುಡಿತಿನಿ ಪೋಲೀಸ್‌ ಠಾಣೆಯಲ್ಲಿ ಓಂಕಾರ್‌ ಗೌಡ ಮತ್ತು ಮಗಳು ನಾಪತ್ತೆಯಾಗಿದ್ದ ಕುರಿತು ದೂರು ದಾಖಲಿಸಿದ್ದರು . ಮಂಗಳವಾರ ತಂದೆ ಓಂಕಾರ್‌ ಗೌಡ ಊರಿಗೆ ಮರಳಿ ಬಂದಾಗ ಪೋಲೀಸರು ಆತನನ್ನು ಬಂಧಿಸಿದ್ದಾರೆ . ವಿಚಾರಣೆ ನಡೆಸಿದ ವೇಳೆ  ಮಗಳನ್ನು ತಾನೇ ಕೊಂದಿರುವುದಾಗಿ ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾನೆ . ಇದೀಗ ಪೋಲೀಸರು ಬಾಲಕಿಯ ಶವಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ .

(Honor killing) A case of honor killing took place in Kuditini, Bellary district of Karnataka, where a father, who was offended because his daughter was in a relationship with a boy from a different community, drowned his daughter in water.

Comments are closed.