kodihalli chandrashekar : ರಾಜ್ಯ ರೈತ ಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್ಗೆ ಕೊಕ್ : ನೂತನ ಅಧ್ಯಕ್ಷರಾಗಿ ಹೆಚ್.ಆರ್ ಬಸವರಾಜಪ್ಪ ಆಯ್ಕೆ
ಶಿವಮೊಗ್ಗ :kodihalli chandrashekar : ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿರುವ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೋಡಿಹಳ್ಳಿ ಚಂದ್ರಶೇಖರ್ರನ್ನು ವಜಾ ಮಾಡಲಾಗಿದ್ದು ರೈತ ಸಂಘದ ನೂತನ ಅಧ್ಯಕ್ಷರಾಗಿ ಹೆಚ್.ಆರ್ ಬಸವರಾಜಪ್ಪ ಆಯ್ಕೆಯಾಗಿದ್ದಾರೆ. ಸಾಕಷ್ಟು ರೈತ ಪರ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಪ್ರತಿಭಟನೆಯಲ್ಲಿ ಹಣ ಸ್ವೀಕರಿಸಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿತ್ತು.
ಕೋಡಿಹಳ್ಳಿ ಚಂದ್ರ ಶೇಖರ್ ಮೇಲಿನ ಈ ಆರೋಪಗಳಿಂದಾಗಿ ರೈತರ ಸಂಘದ ಗೌರವಕ್ಕೆ ಭಂಗ ಬರುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ರನ್ನು ಸಂಘದಿಂದ ವಜಾಗೊಳಿಸಿದೆ. ಖಾಸಗಿ ವಾಹಿನಿಯ ಆರೋಪಗಳನ್ನು ಕೋಡಿಹಳ್ಳಿ ಚಂದ್ರಶೇಖರ್ ಅಲ್ಲಗಳೆದಿರಲಿಲ್ಲ. ಅಥವಾ ಯಾವುದೇ ಸ್ಪಷ್ಟನೆಯನ್ನೂ ನೀಡಿರಲಿಲ್ಲ.
ತಮ್ಮ ಮೇಲೆ ಇಂತಹದ್ದೊಂದು ಗಂಭೀರ ಆರೋಪ ಬಂದಾಗ ಸಂಘದ ಗೌರವಕ್ಕೆ ತನ್ನಿಂದ ಧಕ್ಕೆ ಬರಬಾರದೆಂದು ಆರೋಪ ಮುಕ್ತವಾಗುವವರೆಗೆ ನಾನು ರಾಜೀನಾಮೆ ನೀಡುವ ಎಂಬ ಮಾತು ಕೂಡ ಕೋಡಿಹಳ್ಳಿ ಚಂದ್ರಶೇಖರ್ ಬಾಯಲ್ಲಿ ಬಂದಿರಲಿಲ್ಲ. ಇವೆಲ್ಲವನ್ನೂ ಗಮನಿಸಿದ ರೈತ ಸಂಘವು ಇಂದು ಶಿವಮೊಗ್ಗದಲ್ಲಿ ಸಭೆ ನಡೆಸಿ ಕೋಡಿಹಳ್ಳಿ ಚಂದ್ರಶೇಖರ್ರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಅಲ್ಲದೇ ಕೋಡಿಹಳ್ಳಿಯಿಂದಾಗಿ ಇಂದು ಸಂಪೂರ್ಣ ರೈತ ಸಂಘವೇ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಕೋಡಿಹಳ್ಳಿ ಚಂದ್ರ ಶೇಖರ್ ವಿರುದ್ಧ ಬಂದಿರುವ ಆರೋಪದ ಸತ್ಯಾ ಸತ್ಯತೆಯನ್ನು ಅರಿತುಕೊಳ್ಳಲು ಐವರು ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಲಾಗಿದೆ. ಪದಾಧಿಕಾರಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಪ್ರಸ್ತುತ ರೈತ ಸಂಘದ ಅಧ್ಯಕ್ಷರಾಗಿ ಹೆಚ್.ಆರ್ ಬಸವರಾಜಪ್ಪ ಆಯ್ಕೆಯಾಗಿದ್ದರೆ, ಗೌರವಾಧ್ಯಕ್ಷರ ಸ್ಥಾನದಲ್ಲಿ ಶಶಿಕಾಂತ್ ಪಡಸಲಗಿಯನ್ನು ನೇಮಿಸಲಾಗಿದೆ. ರಾಹ್ಯ ಖಜಾಂಚಿ ಸ್ಥಾಣದಲ್ಲಿ ಡಾ. ಬಿಎಂ ಚಿಕ್ಕಸ್ವಾಮಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾಗಿ ಸಿದ್ದವೀರಪ್ಪ, ಕರುವ ಗಣೇಶ್, ಚುನ್ನಪ್ಪ ಪೂಜಾರಿ ಇದ್ದಾರೆ.
ಇದನ್ನು ಓದಿ : GT vs RR : ಗುಜರಾತ್ ಟೈಟಾನ್ಸ್ನಲ್ಲಿ ದೊಡ್ಡ ಬದಲಾವಣೆ, IPL 2022 Final ನಲ್ಲಿ ಯಾರೆಲ್ಲಾ ಆಡ್ತಾರೆ
ಇದನ್ನೂ ಓದಿ : yenapoya collage at mangaluru : ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಯೂನಿಯರ್ಸ್ -ಸೀನಿಯರ್ಸ್ ಗಲಾಟೆ : 8 ಮಂದಿ ವಿದ್ಯಾರ್ಥಿಗಳ ಬಂಧನ
rajya raitha sangha sacks kodihalli chandrashekar from the post of president
Comments are closed.