ಮಣಿಪಾಲ (Manipal): ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ, ನಂತರ ಮದುವೆಯಾಗಲು ನಿನ್ನ ಜಾತಕ ಸರಿಯಿಲ್ಲ ಎಂಬ ಸಬೂಬು ನೀಡಿ ಮದುವೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತೆ ಓರ್ವಳು ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ತಮಿಳುನಾಡಿನ ವೆಲ್ಲೂರು ನಿವಾಸಿಯಾಗಿರುವ ಪ್ರಶಾಂತ್ ಮುದಲಿಯಾರ್ ಎಂಬಾತನೇ ಅತ್ಯಾಚಾರದ ಆರೋಪಿ. ಯುವತಿ ಹಾಗೂ ಆರೋಪಿ ಪ್ರಶಾಂತ್ ಇಬ್ಬರೂ ಕೂಡ ಕಾಲೇಜು ದಿನಗಳಲ್ಲಿಯೇ ಪರಿಚಿತರು. ಮಾತ್ರವಲ್ಲ ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರು. ಕಾಲೇಜು ಮುಗಿದ ನಂತರದಲ್ಲಿ ಪ್ರಶಾಂತ್ ಮಣಿಪಾಲದಲ್ಲಿ (Manipal) ಉದ್ಯೋಗದಲ್ಲಿದ್ದ.
ಕಳೆದ ಜೂನ್ ತಿಂಗಳಲ್ಲಿ ಯುವತಿಯನ್ನು ಮಣಿಪಾಲಕ್ಕೆ ಕರೆಯಿಸಿಕೊಂಡಿದ್ದ ಪ್ರಶಾಂತ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ನಂತರದಲ್ಲಿ ಮದುವೆಯಾಗಲು ನಿಕಾರಿಸಿದ್ದಾರೆ. ಯುವತಿ ಎಷ್ಟೇ ಕೇಳಿಕೊಂಡರೂ ಕೂಡ ನಿನ್ನ ಜಾತಕ ಸರಿಯಿಲ್ಲ, ಹೀಗಾಗಿ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿ ಇದೀಗ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಬಾಲಕಿಗೆ ಲೈಂಗಿಕ ದೌರ್ಜನ್ಯ : ಇಬ್ಬರ ಬಂಧನ
ಇನ್ನು ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ ಮಹಿಳಾ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಘ್ನೇಶ್ ನಾಯಕ್ ಹಾಗೂ ಸಂದೀಪ್ ನಾಯ್ಕ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಅಪ್ರಾಪ್ತ ಬಾಲಕಿಯ ತಂದೆ, ತಾಯಿ ಕೆಲಸಕ್ಕೆ ತೆರಳಿದ್ದ ವೇಳೆಯಲ್ಲಿ ಮನೆಗೆ ಬಂದ ಆರೋಪಿಗಳು ಅಪ್ಪ, ಅಮ್ಮನ್ನು ಕೊಲೆ ಮಾಡುವುದಾಗಿ ಬೆದರಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.
ಆರೋಪಿ ಸಂದೀಪ್ ನಾಯ್ಕ ವಿವಾಹಿತನಾಗಿದ್ದು ಪೈಟಿಂಗ್ ಕೆಲಸ ಮಾಡುತ್ತಿದ್ದ. ಇನ್ನು ವಿಘ್ನೇಶ್ ನಾಯ್ಕ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸಂತ್ರಸ್ತ ಬಾಲಕಿಯ ನೀಡಿರುವ ದೂರಿನ ಆಧಾರದ ಮೇಲೆ ಇದೀಗ ಮಹಿಳಾ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಗಿಡನೆಟ್ಟು ಸರಳವಾಗಿ ಹುಟ್ಟುಹಬ್ಬ ಆಚರಣೆ : ಕರಾವಳಿಯಲ್ಲಿ ವೃಕ್ಷ ಪ್ರೇಮಿ ಪೊಲೀಸ್ ಅಧಿಕಾರಿ
ಇದನ್ನೂ ಓದಿ : ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವಕನ ಮುಖಕ್ಕೆ ಆಸಿಡ್ ಎರಚಿದ 2 ಮಕ್ಕಳ ತಾಯಿ
(Rape a young woman for believing in marriage in Manipal)
Comments are closed.