ಹಾಸನಾಂಬೆ ದರ್ಶನ : ಸಚಿವ ಕೃಷ್ಣ ಬೈರೇಗೌಡ ಮಹತ್ವದ ಸೂಚನೆ

Hasanamba Darshan : ಹಾಸನ : ಪ್ರಸಿದ್ದ ಹಾಸನಾಂಬಾ ದೇವಿಯ ದೇವಸ್ಥಾನದ ಬಾಗಿಲು ಇಂದು ತೆರೆದಿದೆ. ಅಕ್ಟೋಬರ್ 10ರಿಂದ ಭಕ್ತರಿಗೆ ದೇವಿಯ ದರ್ಶನ ದೊರೆಯಲಿದೆ. ಈ ನಡುವಲ್ಲೇ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಪುರಾಣ ಪ್ರಸಿದ್ದ ಹಾಸನದ ಹಾಸನಾಂಬಾ ದೇವಿ ವರ್ಷದ ಬಳಿಕ ದರ್ಶನ ನೀಡಿದ್ದಾಳೆ. ಅಶ್ವಯುಜ ಮಾಸದ ಮೊದಲ ಗುರುವಾರದಂದು ದೇವಿಯ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಈ ಬಾರಿ ಒಟ್ಟು 13 ದಿನಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 10 ರಿಂದ ಅಕ್ಟೋಬರ್ 23ರ ವರೆಗೆ ಲಕ್ಷಾಂತರ ಮಂದಿ ಹಾಸನಾಂಬೆಯ ದರ್ಶನ ಪಡೆಯಲಿದ್ದಾರೆ. ಕಳೆದ ಬಾರಿ 20 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದರು. ಆದರೆ ಈ ಬಾರಿ 25 ಲಕ್ಷಕ್ಕೂ ಅಧಿಕ ಭಕ್ತರು ಹಾಸನಕ್ಕೆ ಆಗಮಿಸುವ ನಿರೀಕ್ಷೆಯಿದೆ.
Hasanamba Darshan : ಸಚಿವ ಕೃಷ್ಣ ಬೈರೇಗೌಡ ಮನವಿ
ಹಾಸನಾಂಬಾ ದೇವಿಯ ದೇವಸ್ಥಾನದಲ್ಲಿ ಅಕ್ಟೋಬರ್ 10 ರಿಂದ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ.
ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಹಲವು ವಿಚಾರಗಳನ್ನು ತಿಳಿಸಿ ಹೇಳಲಾಗಿದೆ. ಹಾಗಾದ್ರೆ ಕೃಷ್ಣಬೈರೇಗೌಡ ಅವರು ಅಧಿಕಾರಿಗಳಿಗೆ ಕೊಟ್ಟ ಸೂಚನೆ ಇಲ್ಲಿದೆ.
ಹಾಸನಾಂಬೆ ದರ್ಶನಕ್ಕೆ ಸಚಿವರ ಸೂಚನೆಯೇನು ?
- ಅನಾಹುತ ನಡೆಯುವ ಮುನ್ನ ಎಚ್ಚರಿಕೆ ವಹಿಸಲು ಸೂಚನೆ
- ಅನಾಹುತ ತಡೆಯುವುದೇ ನಮ್ಮ ಕೆಲಸ. ಹೀಗಾಗಿ ಎಲ್ಲಾ ಅಧಿಕಾರಿಗಳೂ ನಾಯಕತ್ವ ಗುಣದ ಜೊತೆ ಕೆಲಸ ಮಾಡುವಂತೆ ಕಿವಿಮಾತು.
- ಹಾಸನಾಂಬ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ತೊಂದರೆಯಾಗಬಾರದು.
- ಭದ್ರತಾ ಲೋಪವನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ.
- ದೇವಾಲಯಕ್ಕೆ ಪ್ರತಿ ದಿನ ಎಷ್ಟು ಜನರ ಆಗಮನ ನಿರ್ಗಮನ ಆಗುತ್ತಿದೆ ಎಂಬ ಕುರಿತು ಅಧಿಕಾರಿಗಳು ನಿಗಾ ವಹಿಸಬೇಕು.
- ಟ್ರಾಫಿಕ್ ಸಮಸ್ಯೆಗಳ ಬಗ್ಗೆಯೂ ಎಚ್ಚರಿಕೆಯಿಂದಿರಬೇಕು.
- ದೇವಾಲಯದ ಒಳಗೆ ಎಸ್ಕಾರ್ಟ್ ವಾಹನಗಳಿಗೆ ಸುತಾರಾಂ ಅವಕಾಶ ಇಲ್ಲ.
Hasanamba Darshan: Minister Krishna Byre Gowda gives important instructions



