ಉಡುಪಿ ಬಸ್ ನಿಲ್ದಾಣದ ಬಳಿ ಬಾಲಕರಿಬ್ಬರ ಅಪಹರಣ..!

ಉಡುಪಿ : ಆಟವಾಡುತ್ತಿದ್ದ ಬಾಲಕರಿಬ್ಬರನ್ನು ಯಾರೋ ಅಪಹರಣ ಮಾಡಿರುವ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯಲ್ಲಿ ನಡೆದಿದೆ.

ಸಂತೋಷ್ (11 ವರ್ಷ) ಹಾಗೂ ವಿಷ್ಣು (9 ವರ್ಷ) ಎಂಬ ಬಾಲಕರೇ ನಾಪತ್ತೆಯಾಗಿರುವವರು. ಇಬ್ಬರೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿಯಾಗಿರುವ ನಾಗರಾಜ್ ಎಂಬವರ ಮಗ ಸಂತೋಷ್ ಹಾಗೂ ಪತ್ನಿಯ ತಂಗಿಯ ಮಗ ವಿಷ್ಣು. ಇಬ್ಬರು ಬಾಲಕರು ರಜೆ ಇದ್ದ ಕಾರಣಕ್ಕೆ ಸಂತೊಷ್ ತನ್ನ ಚಿಕ್ಕಮ್ಮ ಮಂಗಳ ಅವರ ಜೊತೆಯಲ್ಲಿ ಉಡುಪಿಗೆ ಬಂದಿದ್ದ.

ಇಬ್ಬರು ಬಾಲಕರು ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯಲ್ಲಿ ಆಟವಾಡುತ್ತಿದ್ದರು. ಸ್ವಲ್ಪ ಹೊತ್ತಲ್ಲೇ ಇಬ್ಬರು ಬಾಲಕರು ನಾಪತ್ತೆಯಾಗಿ ದ್ದರು. ಎಲ್ಲಾ ಕಡೆ ಹುಡುಕಿದ್ರೂ ಕೂಡ ಬಾಲಕರಿಬ್ಬರು ಮಾತ್ರ ಪತ್ತೆಯಾಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಬಾಲಕರಿಬ್ಬರನ್ನು ಯಾರಾದ್ರೂ ಅಪಹರಣ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.

ಈ ಕುರಿತು ನಾಗರಾಜ್ ಅವರು ಉಡುಪಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.