ಬಿಲ್ಲವ ಮುಂದಾಳು, ಭಾರತ್ ಬ್ಯಾಂಕ್ ಸಂಸ್ಥಾಪಕ ಜಯ ಸಿ. ಸುವರ್ಣ ಇನ್ನಿಲ್ಲ

ಮಂಗಳೂರು : ಭಾರತ್ ಬ್ಯಾಂಕ್ ಸ್ಥಾಪಕ ಜಯ ಸಿ. ಸುವರ್ಣ (75 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದವರಾಗಿರುವ ಜಯ ಸಿ.ಸುವರ್ಣ ಅವರು ಚಿಕ್ಕಂದಿನಿಂದಲೇ ಮುಂಬೈನಲ್ಲಿ ನೆಲೆಸಿದ್ದಾರೆ. ಮುಂಬೈನಲ್ಲಿ ಹೋಟೆಲ್ ಉದ್ಯಮದ ಜೊತೆ ಜೊತೆಗೆ ಸಮಾಜಿಕ. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮುಂಬೈನಲ್ಲಿ ಆರಂಭಗೊಂಡ ಭಾರತ್ ಬ್ಯಾಂಕ್ ಇಂದು ಮುಂಬೈ ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಶಾಖೆಗಳನ್ನು ಹೊಂದಿದೆ.
ಮಂಗಳೂರಿನ ಕುದ್ರೋಳಿ ಕ್ಷೇತ್ರದ ಅಭಿವೃದ್ದಿಗೂ ಶ್ರಮಿಸಿದ್ದಾರೆ. ಜನಾರ್ಧನ ಪೂಜಾರಿ ಅವರ ಜೊತೆಗೆ ಕೈ ಜೋಡಿಸಿದ್ದರು.

ಬಿಲ್ಲವ ಸಮುದಾಯದ ಸುಧಾರಣೆಗಾಗಿ ಶ್ರಮಿಸಿದ ಸುವರ್ಣರು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಸ್ಥಾಪಕಾಧ್ಯಕ್ಷರೂ ಆಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 21 ಮಧ್ಯಾಹ್ನ 3 ಗಂಟೆಗೆ ಮುಂಬೈನಲ್ಲಿ ನಡೆಯಲಿದೆ

Comments are closed.