ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ !

0

ಹಾಸನ : ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದೀಗ ಕರ್ನಾಟಕ ರಾಜ್ಯವೇ ಬೆಚ್ಚಿ ಬೀಳುವ ಸ್ಪೋಟಕ ಮಾಹಿತಿ ಬಯಲಾಗಿದೆ. ದುಬೈ, ಮಸ್ಕತ್ ಗೆ ತೆರಳಿದ್ದ ಒಂದೇ ಗ್ರಾಮದ 75 ಮಂದಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಕೊರೊನಾ ಶಂಕೆ ಕಾಣಿಸಿಕೊಂಡಿರೊ ಹಿನ್ನೆಲೆಯಲ್ಲಿ ಎಲ್ಲರನ್ನೂ ಇದೀಗ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನ ಶ್ರೀರಾಮಪುರ ಗ್ರಾಮದಲ್ಲಿ 75 ಮಂದಿಗೆ ಇದೀಗ ಶಂಕಿತ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಆರೋಗ್ಯ ಇಲಾಖೆ 75 ಜನರಿಗೂ ಕಡ್ಡಾಯವಾಗಿ ಹೋಮ್ ಕೊರಂಟೈನ್ ಗೆ ಆದೇಶಿಸಿದೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದೆ.

ಶ್ರೀರಾಮಪುರ ಗ್ರಾಮದ ನಿವಾಸಿಗಳು ದುಬೈ, ಮಸ್ಕತ್ ಗೆ ಭವಿಷ್ಯ ಹೇಳೊದಕ್ಕೆ, ಮಸಾಜ್ ಮಾಡೋದಕ್ಕೆ ತೆರಳಿ ಇತ್ತೀಚಿಗಷ್ಢೇ ವಾಪಾಸಾಗಿದ್ದಾರೆ. ಇದೀಗ ಗ್ರಾಮಕ್ಕೆ ಮರಳುತ್ತಿದ್ದಂತೆಯೇ ಶಂಕಿತ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಇದರಿಂದಾಗಿ ಹಾಸನ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗದ್ದಾರೆ. ಹಾಸನ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ.

Leave A Reply

Your email address will not be published.