Malashree ramu:ಸ್ವರ್ಗವೇ ನಿಮ್ಮದಾಗಿರಲಿ….! ಪತಿಯ ಹುಟ್ಟುಹಬ್ಬದಂದು ಭಾವುಕಪತ್ರ ಬರೆದ ಲೇಡಿಕಮೀಷನರ್ ಮಾಲಾಶ್ರೀ…!!

ಕೊರೋನಾ ಎರಡನೇ ಅಲೆ ಸ್ಯಾಂಡಲ್ ವುಡ್ ಕೋಟಿರಾಮು ಖ್ಯಾತಿಯ ನಿರ್ಮಾಪಕ ರಾಮು ಅವರನ್ನು ಕುಟುಂಬ ಹಾಗೂ ಅಭಿಮಾನಿಗಳಿಂದ ಕಸಿದುಕೊಂಡಿದೆ. ಪತಿಯ ಅಗಲಿಕೆಯ ನೋವಿನಲ್ಲಿರುವ ನಟಿ ಹಾಗೂ ರಾಮು ಪತ್ನಿ ಮಾಲಾಶ್ರೀ ಪತಿಯ ಹುಟ್ಟುಹಬ್ಬದಂದು ಓದುಗರ ಕಣ್ಣಲ್ಲೂ ನೀರುತರಿಸುವಂತಹ ಭಾವುಕ ಶುಭಾಶಯ ಕೋರಿದ್ದಾರೆ.

ಕೊರೋನಾದಿಂದ ಅಸ್ವಸ್ಥರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಮು, ಏಪ್ರಿಲ್ 26 ರಂದು ನಿಧನರಾಗಿದ್ದರು. ರಾಮು ಅವರ ಅಗಿಲಕೆಯ ನೋವಿನಲ್ಲೇ ಇರುವ ನಟಿ ಮಾಲಾಶ್ರೀ ರಾಮು ಅವರ ಹುಟ್ಟುಹಬ್ಬದಂದು ಭಾವುಕ ಪತ್ರ ಬರೆದಿದ್ದು, ತಾವು ಪತಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ವಿವರವಾಗಿ ಬರೆದಿದ್ದಾರೆ.

23 ವರ್ಷ ನಿಮ್ಮ ಹುಟ್ಟುಹಬ್ಬವನ್ನು ಹಬ್ಬದ ರೀತಿಯಲ್ಲಿ ಆಚರಿಸಿದ್ವಿ.  ನೀವು ನನಗೆ ದೇವರ ವರವಾಗಿ ಬಂದ್ರಿ. ನನಗೆ ಕೇಳಿದ ವರಗಳನ್ನು ಕೊಡುವ ದೇವರಾಗಿದ್ರಿ. 

ನನ್ನ ದಿನ,ನನ್ನ ನಡೆ,ನುಡಿ,ನಗು,ನೆಮ್ಮದಿ ನೀವಾಗಿದ್ರಿ. ನನ್ನ ಹೆಸರಿಗೆ ಬೆಳಕಾಗಿದ್ರಿ ನೀವು ದೂರವಾದ  ಕ್ಷಣದಿಂದ ಈ  ಸಾಲುಗಳನ್ನು  ಬರೆಯುತ್ತಿರುವ ಕ್ಷಣದಲ್ಲೂ ಕಣ್ಣಿನಲ್ಲಿ ನೀರು ತುಂಬಿದೆ.

ಕಣ್ಣು ಮಂಜಾಗುತ್ತಿದೆ. ನಾನು ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗಾಗೆ ಜನುಮ ಪಡೆದು ಬಂದ  ನನ್ನ ಹೃದಯ ನೀವು.  ನನಗೆ ಏನೇನೋ ಬೇಕೋ ಅದನ್ನೆಲ್ಲ ಕೊಟ್ಟ ನಿಮಗೆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದನೇ ಹಾರೈಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಕೋಟಿ ರಾಮು ಎಂದೇ ಖ್ಯಾತಿ ಗಳಿಸಿದ್ದ ರಾಮು ಅವರು, ಹಲವು ನಟ-ನಟಿಯರಿಗೆ ಬ್ರೇಕ್ ನೀಡಿದ ಸಿನಿಮಾರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ನೆರವಾದ ವ್ಯಕ್ತಿಯಾಗಿದ್ದರು. ಹೀಗಾಗಿ ರಾಮು ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿತ್ತು.

Comments are closed.