ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ?

0

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂರುವರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ಮೂವರ ಪೈಕಿ ಇಬ್ಬರು ದೆಹಲಿಗೆ ತೆರಳಿ ಹಿಂದಿರುಗಿದ್ದರು, ಇನ್ನೋರ್ವ ದುಬೈನಿಂದ ವಾಪಾಸಾಗಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಇನ್ನೋರ್ವ ಮಂಗಳೂರು ಹೊರವಲಯದ ತೊಕ್ಕಟ್ಟು ನಿವಾಸಿ ಎಂದು ತಿಳಿದುಬಂದಿದೆ. ಬಂಟ್ವಾಳದ ತುಂಬೆಯ ನಿವಾಸಿಯಾಗಿರುವ ಯುವಕ ಮಾರ್ಚ್ 21ರಂದು ದೆಹಲಿಯಿಂದ ಮಂಗಳೂರಿಗೆ ಹಿಂದಿರುಗಿದ್ದ.

ಇನ್ನೋರ್ವ ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಯಾಗಿರುವ ಯುವಕ ಇತ್ತೀಚಿಗೆ ದುಬೈನಿಂದ ಹಿಂದಿರುಗಿದ್ದರೆ, ಮಂಗಳೂರು ಹೊರವಲಯದ ತೊಕ್ಕಟ್ಟುವಿನ ನಿವಾಸಿ ಆಟೋ ಚಾಲಕನಾಗಿದ್ದು, ಈತ ದೆಹಲಿಯ ನಿಜಾಮುದ್ದೀನ್ ಮರ್ಕಸ್ ಗೆ ತೆರಳಿ ವಾಪಾಸಾಗಿದ್ದ ಎಂದು ತಿಳಿದುಬಂದಿದೆ. ಉಳ್ಳಾಲ ಪೊಲೀಸರು ಈಗಾಗಲೇ ತೊಕ್ಕಟ್ಟುವಿನ ಆಟೋ ಚಾಲಕ ವಾಸವಾಗಿದ್ದ ವಸತಿ ಸಂಕೀರ್ಣವನ್ನು ಲಾಕ್ ಡೌನ್ ಮಾಡಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಮೂವರ ಟ್ರಾವೆಲ್ ಹಿಸ್ಟರಿಯನ್ನು ಕಲೆಹಾಕಲಾಗುತ್ತಿದೆ. ಮೂವರಿಗೂ ಕೂಡ ಕೊರೊನಾ ಸೋಂಕಿರುವ ಕುರಿತು ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಾಗಿದೆ.

Leave A Reply

Your email address will not be published.