ಡಿಕೆಶಿ ಪುತ್ರಿ ನಿಶ್ಚಿತಾರ್ಥ ಸಂಭ್ರಮ…! ಎಸ್ಎಂಕೆ ಮೊಮ್ಮಗನ ಕೈಹಿಡಿಯಲಿರುವ ಐಶ್ವರ್ಯಾ…!!

ಬೆಂಗಳೂರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣರ ರಾಜಕೀಯ ಬಾಂಧವ್ಯ ನಾಳೆ ಸಂಬಂಧವಾಗಿ ಅಧಿಕೃತವಾಗಿ ಬದಲಾಗಲಿದ್ದು, ಎಸ್ಎಂಕೆ ಮೊಮ್ಮಗನ ಜೊತೆ ಡಿಕೆಶಿ ಪುತ್ರಿಯ ವಿವಾಹ ನಿಶ್ಚಿತಾರ್ಥ ನಾಳೆ ಅದ್ದೂರಿಯಾಗಿ ನಡೆಯಲಿದೆ.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಯಲಿರೋ ಅದ್ದೂರಿ ಸಮಾರಂಭಕ್ಕಾಗಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದೆ. ಡಿ.ಕೆ.ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ಎಸ್ಎಂಕೆ ಮೊಮ್ಮಗ ಕಾಫಿಉದ್ಯಮಿ ದಿ.ಸಿದ್ಧಾರ್ಥ್ ಹೆಗ್ಡೆ ಹಾಗೂ ಮಾಳವಿಕಾ ದಂಪತಿ ಪುತ್ರ ಅಮರ್ಥ್ಯ ಹೆಗ್ಡೆ ನಿಶ್ಚಿತಾರ್ಥ ನಡೆಯಲಿದ್ದು, ಕೆಲವೇ ದಿನಗಳಲ್ಲಿ ವಿವಾಹ ಮುಹೂರ್ತ ನಿಗದಿಯಾಗಲಿದೆ.

ಹೆಣ್ಣುನೋಡುವ ಶಾಸ್ತ್ರವನ್ನೇ ಎಂಗೇಜಮೆಂಟ್ ನಷ್ಟು ಅದ್ದೂರಿಯಾಗಿ ನಡೆಸಿದ್ದ ಡಿಕೆಶಿ ಕುಟುಂಬ ನಾಳೆ ಕೊರೋನಾ ಹಿನ್ನೆಲೆಯಲ್ಲಿ ಖಾಸಗಿಯಾಗಿ ನಿಶ್ಚಿತಾರ್ಥ ಶಾಸ್ತ್ರ ನಡೆಸಲಿದೆ. ಡಿಕೆಶಿ, ಎಸ್ಎಂಕೆ ಕುಟುಂಬಸ್ಥರು ಹಾಗೂ ಕೆಲ ಹತ್ತಿರದ ಸಂಬಂಧಿಗಳು,ಸ್ನೇಹಿತರನ್ನು ನಿಶ್ಚಿತಾರ್ಥಕ್ಕೆ ಆಹ್ವಾನಿಸಲಾಗಿದೆ.

ಡಿಕೆಶಿ ಹಾಗೂ ಎಸ್ಎಂಕೆ ನಡುವೆ ಹಲವು ವರ್ಷಗಳಿಂದ ರಾಜಕೀಯ ಬಾಂಧವ್ಯವಿದ್ದರೇ, ಆತ್ಮಹತ್ಯೆಗೆ ಶರಣಾದ ಕಾಫಿ ಉದ್ಯಮಿ ಹಾಗೂ ಎಸ್ಎಂಕೆ ಅಳಿಯ ಸಿದ್ಧಾರ್ಥ್ ಹೆಗ್ಡೆ ಜೊತೆ ಡಿಕೆಶಿವಕುಮಾರ್ ವ್ಯಾವಹಾರಿಕ ಸಂಬಂಧ ಹೊಂದಿದ್ದರು. ಸಿದ್ಧಾರ್ಥ್ ಆತ್ಮಹತ್ಯೆಗೆ ಶರಣಾದ ವೇಳೆಯೂ ಡಿಕೆಶಿ ಮುಂದೇ ನಿಂತು ಎಸ್ಎಂಕೆ ಕುಟುಂಬದ ದುಃಖಕ್ಕೆ ಸಾಂತ್ವನ ಹೇಳಿದ್ದರು.

ಆ ಬಳಿಕ  ಈ ಎರಡು ಮನೆತನಗಳ ಬಾಂಧವ್ಯ ಸಂಬಂಧವಾಗಿ ಬದಲಾಗಿದೆ. ಬಹುಕಾಲ ಕಾಂಗ್ರೆಸ್ ನಲ್ಲೇ ಇದ್ದ ಎಸ್.ಎಂ.ಕೃಷ್ಣ ಅವರನ್ನು ಡಿ.ಕೆ.ಶಿವಕುಮಾರ್ ರಾಜಕೀಯ ಗುರು ಎಂದೇ ಭಾವಿಸುತ್ತ ಬಂದಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯಾ ಓದು ಮುಗಿಸಿ ತಂದೆಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡಿದ್ದರೇ, ಅಮರ್ಥ್ಯ ಹೆಗ್ಡೆ ತಂದೆಯ ಕಾಫಿ ಉದ್ಯಮ ಮುಂದುವರೆಸುತ್ತಿದ್ದಾರೆ.  

Comments are closed.