ಈ ಕಷ್ಟದಿಂದ ನಾವೆಲ್ಲಾ ಹೊರಬರುತ್ತೇವೆ…! ಅಭಿಮಾನಿಗಳಿಗೆ ಧೈರ್ಯ ತುಂಬಿದ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ….!!

ನಟನೆಯಿಂದ ಒಂದು ಬ್ರೇಕ್ ಪಡೆದು ಮುದ್ದಾದ ಮಕ್ಕಳ ಜೊತೆ ತಾಯ್ತನ ಎಂಜಾಯ್ ಮಾಡ್ತಿರೋ ರಾಧಿಕಾ ಪಂಡಿತ್ ಕೊರೋನಾ ಕಷ್ಟದಿಂದ ನಾವೆಲ್ಲಾ ಗೆದ್ದುಬರುತ್ತೇವೆ ಎಂದಿದ್ದಾರೆ.  ಅಭಿಮಾನಿಗಳಿಗೆ , ಜನರಿಗೆ ಸೋಷಿಯಲ್ ಮೀಡಿಯಾ ಮೂಲಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ಕ್ಯೂಟ್ ತಾರಾದಂಪತಿ ಯಶ್ ಮತ್ತು ರಾಧಿಕಾ ತಮ್ಮ ಸಾಮಾಜಿಕ ಜವಾಬ್ದಾರಿಯಲ್ಲೂ ಹಿಂದೆ ಬಿದ್ದಿಲ್ಲ. ಈಗಾಗಲೇ ಹಲವು ಭಾರಿ ಸಂಕಷ್ಟದಲ್ಲಿರೋ ರೈತರ ನೆರವಿಗೆ ಧಾವಿಸಿದ ಯಶ್ ಕೊರೋನಾ ಸಂಕಷ್ಟದಲ್ಲಿ ಚಿತ್ರರಂಗದ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವಾಗಿದ್ದಾರೆ.

3 ಸಾವಿರಕ್ಕೂ ಅಧಿಕ ಜನರಿಗೆ ತಲಾ 5 ಸಾವಿರ ರೂಪಾಯಿಗಳಂತೆ 1.5 ಕೋಟಿ ರೂಪಾಯಿ ಸಹಾಯಧನ ನೀಡಿ ನೆರವಾಗಿದ್ದಾರೆ. ಇನ್ನು ಪತಿಯ  ಈ ಎಲ್ಲ ಕಾರ್ಯಗಳಿಗೆ ಬೆಂಬಲವಾಗಿ ನಿಂತಿರೋ ನಟಿ ರಾಧಿಕಾ ಪಂಡಿತ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಸಂತೈಸುವ ಕೆಲಸ ಮಾಡಿದ್ದಾರೆ.

https://www.instagram.com/p/CPyF5DEAnlm/?utm_medium=copy_link

ನಟನೆಯಿಂದ ಅಂತರ ಕಾಯ್ದುಕೊಂಡಿದ್ದರೂ, ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಇರುವ ರಾಧಿಕಾ, ತಮ್ಮ ಇಬ್ಬರು ಮಕ್ಕಳೊಂದಿಗೆ ಸೂರ್ಯಾಸ್ತದ ಹೊತ್ತಿನಲ್ಲಿ ಸಮುದ್ರದ ದಂಡೆಯಲ್ಲಿ ಕುಳಿತ ಪೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಅದರೊಂದಿಗೆ ಧೈರ್ಯತುಂಬವ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಇದು ತುಂಬ ಕಷ್ಟದ ಸಮಯ. ನಾವೆಲ್ಲರೂ ನಮ್ಮವರನ್ನು ಕಳೆದುಕೊಂಡ ಸಂಕಷ್ಟದಲ್ಲಿದ್ದೇವೆ. ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ. ನಾಳೆ ಎನೆಂಬುದನ್ನು ಅರಿಯದ ಸ್ಥಿತಿಯಲ್ಲಿದ್ದೇವೆ.

ಆದರೆ ದಯವಿಟ್ಟು ಪ್ರತಿದಿನ ಈ ಒಂದು ಮಾತನ್ನು ನಿಮಗೆ ನೀವು ಹೇಳಿಕೊಳ್ಳಿ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ನಾಳೆಯ ಮೇಲೆ ನಂಬಿಕೆ ಇಡುತ್ತೇವೆ. ಹೋರಾಡುತ್ತೇವೆ ಮತ್ತು ಎಲ್ಲರೂ ಈ ನೋವಿನಿಂದ ಹೊರಗೆ ಬರುತ್ತೇವೆ ಎಂದು ಬರೆದಿದ್ದಾರೆ.

ರಾಧಿಕಾ ಈ ಸಂದೇಶಕ್ಕೆ ಅಭಿಮಾನಿಗಳು ಖುಷಿಯಾಗಿದ್ದು, ರಾಧಿಕಾ ಸಂದೇಶ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಸದ್ಯ ಯಥರ್ವ್ ಮತ್ತು ಆಯ್ರಾ ಜೊತೆ ತಾಯ್ತನ ಎಂಜಾಯ್ ಮಾಡ್ತಿರೋ ರಾಧಿಕಾಗೆ ಸಿನಿಮಾ ರಂಗದ ಚಟುವಟಿಕೆಗಳು ಸ್ತಬ್ಧವಾಗಿರೋದರಿಂದ ನಟ ಯಶ್ ಕೂಡ ಸಾಥ್ ನೀಡಿದ್ದಾರೆ.

Comments are closed.