ಸ್ಯಾಂಡಲ್ ವುಡ್ ಹೊಸ್ತಿಲು ದಾಟಿದ ರಶ್ಮಿಕಾ ಹೀಂಗ್ಯಾಕಾದ್ರು…?! ಕೊಡಗಿನ ಕುವರಿಯ ಪೊಗರು ಕಂಡು ಹೈರಾಣಾದ ಚಿತ್ರತಂಡ…!!

ರಶ್ಮಿಕಾ ಮಂದಣ್ಣ ಕನ್ನಡದ ಕುವರಿ. ಆದರೆ ಸ್ಯಾಂಡಲ್ ವುಡ್ ಹೊಸ್ತಿಲು ದಾಟಿದ ಬೆಡಗಿ ಈಗ ಕನ್ನಡಿಗರ ಪಾಲಿಗೆ ಕೈಗೆಟುಕದ ತುತ್ತಾಗಿದ್ದು, ನಿರ್ಮಾಪಕರ ಪಾಲಿಗೆ ಜೇಬಿನಲ್ಲಿಟ್ಟ ಬೆಂಕಿಯಂತಾಗಿದ್ದಾರೆ ಅನ್ನೋ ಮಾತು ಚಂದನವನದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ ಈ ಸ್ಟೋರಿ ಓದಿ.

ರಶ್ಮಿಕಾ ಈಗ ನ್ಯಾಶನಲ್ ಕ್ರಶ್. ಅಷ್ಟೇ ಅಲ್ಲ ತಮಿಳು,ತೆಲುಗು,ಹಿಂದಿಯಲ್ಲಿ ಬ್ಯುಸಿ ನಟಿ. ಹೀಗಾಗಿ ತಾವು ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ ಪೊಗರುವನ್ನು ಮರೆತೇ ಬಿಟ್ಟಿದ್ದರು. ಇನ್ನೇನು ರಿಲೀಸ್ ಗೆ ಸಿದ್ಧವಾಗಿರೋ ಪೊಗರು ಚಿತ್ರತಂಡ  ಹಿರೋಯಿನ್ ನ್ನು ಪ್ರಮೋಶನ್ ಗೆ ಕರೆಸೋಕೆ ಇನ್ನಿಲ್ಲದೇ ಪರದಾಡಿತು.

ಕೊನೆಗೂ ರಿಲೀಸ್ ಗೆ 10 ದಿನಗಳಿರುವಾಗ ರಶ್ಮಿಕಾ ಪ್ರಮೋಶನ್ ಗೆ ಬಂದರು. ಆದರೆ ಹೀಗೆ ಬಂದ ರಶ್ಮಿಕಾ ಪ್ರೊಡ್ಯೂಸರ್ ಮತ್ತು ಡೈರೈಕ್ಟರ್ ಸಂಕಷ್ಟ ಅರ್ಥ ಮಾಡಿಕೊಂಡು ಸ್ಪಂದಿಸಿದರೂ ಅಂತ ನೀವಂದುಕೊಂಡ್ರೆ ಖಂಡಿತಾ ಇಲ್ಲ. ಪಕ್ಕಾ ಸ್ಟಾರ್ ನಟಿಯರಂತೆ ಗತ್ತು ತೋರಿದ ರಶ್ಮಿಕಾರನ್ನು  ಬ್ಯುಸಿನೆಸ್ ಫ್ಲೈಟ್ ನಲ್ಲಿ ಟಿಕೇಟ್ ಬುಕ್ ಮಾಡಿ ಕರೆಸಿಕೊಂಡಿದ್ದಾರೆ.

ಅಷ್ಟೇ ಅಲ್ಲ ಸ್ಟಾರ್ ಹೊಟೇಲ್ ನಲ್ಲಿ ರಶ್ಮಿಕಾ ಹಾಗೂ ಅವರ ಇಬ್ಬರು ಅಸಿಸ್ಟೆಂಟ್, ಒಬ್ಬ ಮ್ಯಾನೇಜರ್ ಗೂ ಸೇರಿ ಎಲ್ಲರಿಗೂ ಸೂಟ್ ರೂಂ ಬುಕ್ ಮಾಡಿದ್ದಾರೆ. ಅಲ್ಲಿಗೆ ಬರೋಬ್ಬರಿ 6-7ಲಕ್ಷ ರೂಪಾಯಿ ವ್ಯಯಿಸಿದ್ದಾರೆ. ಆದರೆ ಇಷ್ಟೆಲ್ಲ ಮಾಡಿ ಪ್ರಮೋಶನ್ ಗೆ ಕರೆಸಿದ ರಶ್ಮಿಕಾ ಸಿನಿಮಾ ಪ್ರಮೋಶನ್ ಮರೆತು ತಮ್ಮ ಕೆರಿಯರ್ ಬಗ್ಗೆ ಪುಂಖಾನುಪುಂಖವಾಗಿ ಮಾತಾಡಿ  ಮೊದಲು ಸ್ಟೇಟ್ ಕ್ರಶ್ ಆಗಿದ್ದೇ, ಈಗ ನ್ಯಾಶನಲ್ ಕ್ರಶ್ ಎಂದೆಲ್ಲ ಬಡಬಡಿಸಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರು ಮೂವಿ ರಿಲೀಸ್ ಪ್ರೆಸ್ಮಿಟ್ ನಲ್ಲಿ ತಮ್ಮ ವೈಯಕ್ತಿಕ ಸಾಧನೆ, ಕೆರಿಯರ್ ಬಗ್ಗೆ ಮಾತಾಡೋದಿಲ್ಲ. ಇದು ಕಾಮನ್ ಸೆನ್ಸ್ . ಚಿತ್ರದ ಶೂಟಿಂಗ್, ನಿರ್ದೇಶಕರ ಬಗ್ಗೆ, ಸಿನಿಮಾ ಬಗ್ಗೆ ಮಾತಾಡ್ತಾರೆ. ಆದರೆ ಲಕ್ಷಾಂತರ ರೂಪಾಯಿ ಪಡೆದು ಪ್ರಮೋಶನ್ ಗೆ ಬಂದ ರಶ್ಮಿಕಾ ಇದ್ಯಾವುದನ್ನು ಮಾಡದೇ ತನ್ನ ಬಗ್ಗೆಯೇ ಮಾತಾಡಿಕೊಂಡು ಚಿತ್ರದ ಬಗ್ಗೆ ಅಲ್ಲೊಂದು ಇಲ್ಲೊಂದು ಮಾತಾಡಿದ್ದಾರೆ.

3.5 ವರ್ಷಗಳ ಕಾಲ ಕಷ್ಟಪಟ್ಟು ಶೂಟಿಂಗ್ ಮಾಡಿದ ಪೊಗರು ನಂದಕಿಶೋರ್ ಕನಸಿನ ಸಿನಿಮಾ. ಇಷ್ಟೇ ಅಲ್ಲ ನಟ ಧ್ರುವ್ ಸರ್ಜಾ ಈ ಚಿತ್ರಕ್ಕಾಗಿ ಸಾಕಷ್ಟು ಕಸರತ್ತು ಮಾಡಿದ್ದಾರೆ. ಕೊರೋನಾ ಸಂಕಷ್ಟದ ಬಳಿಕ  ರಿಲೀಸ್ ಆಗ್ತಿರೋ ಮೊದಲ ದೊಡ್ಡ ಬಜೆಟ್ ಚಿತ್ರ ಚಿತ್ರತಂಡದ ಎದೆಯಲ್ಲಿ ನಡುಕ ಮೂಡಿಸಿದೆ. ಆದರೆ ಇದ್ಯಾವುದನ್ನು ನಟಿ ರಶ್ಮಿಕಾ ಅರ್ಥನೇ ಮಾಡಿಕೊಂಡಿಲ್ಲ ಅನ್ನೋದು ರಶ್ಮಿಕಾ ಪ್ರಮೋಶನ್ ಟಾಕ್ ನಲ್ಲಿ ಬಯಲಾಗಿದೆ.

ಕಿರಿಕ್ ಪಾರ್ಟಿಯ ಲಾಂಚ್ ಪ್ರೆಸ್ಮಿಟ್ ನಲ್ಲಿ ಪಾಪದ ಹುಡುಗಿಯಂತೆ ಮಾತನಾಡಿದ ರಶ್ಮಿಕಾ ಒಂದಷ್ಟು ವರ್ಷದಲ್ಲಿ ಸಾಕಷ್ಟು ಬೆಳೆದರು. ವಿಜಯ್ ದೇವರಕೊಂಡ, ಅಲ್ಲೂ ಅರ್ಜುನ್, ಈಗ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅದಕ್ಕಾಗಿ ಕನ್ನಡದ ಮೂಲಬೇರನ್ನು ಮರೆತಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

ಮೊನ್ನೆ ಮೊನ್ನೆ ಕಿರಿಕ್ ಪಾರ್ಟಿ ಸಿನಿಮಾದ ಶೂಟಿಂಗ್ ವೇಳೆ ಸಾಮಾನ್ಯನಟಿಯರಂತೆ ಸರಳವಾಗಿದ್ದ ರಶ್ಮಿಕಾ ಈಗ ಗೆಲುವನ್ನೇ ತಲೆಗೆ ಹತ್ತಿಸಿಕೊಂಡು ಸ್ಟಾರ್ ಆಕ್ಟರ್ ಗಳಂತೆ ಸ್ಟೇಟಸ್ ಮಾಡ್ತಿರೋದನ್ನು ಸ್ಯಾಂಡಲ್ ವುಡ್ ಕಣ್ಣು-ಬಾಯಿ ಬಿಟ್ಟು ನೋಡ್ತಿದ್ದು, ಸಕ್ಸಸ್ ಅನ್ನೋದು ಮನುಷ್ಯನಿಗೆ ಸಾಗಿ ಬಂದ ಹಾದಿಯನ್ನೇ ಮರೆಯುವಂತೆ ಮಾಡುತ್ತಾ ಅಂತ ತಮ್ಮ-ತಮ್ಮಲ್ಲೇ ಮಾತಾಡಿಕೊಳ್ತಿದ್ದಾರೆ.

ಅಷ್ಟೇ ಅಲ್ಲ ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾರಂಗ ಹರಿಯುವ ನೀರಿದ್ದಂತೆ. ಇಲ್ಲಿ ಸದಾ ಹೊಸ ಹೊಸ ಪ್ರತಿಭೆಗಳು ಬರುತ್ತವೇ ಹೋಗುತ್ತವೆ. ಹೀಗಾಗಿ ರಶ್ಮಿಕಾ ಇನ್ನಷ್ಟು ಕಾಲ ಇರೋಕೆ ಪ್ರಯತ್ನಿಸಬೇಕೆ ವಿನಃ ಹತ್ತಿದ ಏಣಿಯನ್ನೇ ಒದೆಯೋ ಕೆಲಸ ಮಾಡಬಾರದು ಅಂತ ಸಿನಿಪ್ರಿಯರು ಹೇಳ್ತಿದ್ದಾರೆ.

Comments are closed.