ಅಣ್ಣಾಮಲೈಗೆ ರಾಜೀನಾಮೆ ಕೊಡಿಸಿದ್ರಾ ಕಾಫಿಡೇ ಸಿದ್ದಾರ್ಥ್ ..!

ಚಿಕ್ಕಮಗಳೂರು : ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡೋದಕ್ಕೆ ಕಾರಣವೇನು ಅನ್ನೋದು ಬಯಲಾಗಿದೆ. ಖಡಕ್ ಪೊಲೀಸ್ ಅಧಿಕಾರಿಗೆ ರಾಜೀನಾಮೆ ಕೊಡುವಂತೆ ಮಾಡಿದ್ದು ಯಾರೂ ಅನ್ನೋ ಕುತೂಹಲಕ್ಕೆ ಅಣ್ಣಾಮಲೈ ಅವರೇ ತೆರೆ ಎಳೆದಿದ್ದು, ಕಾಫಿ ಡೇ ಸಿದ್ದಾರ್ಥ್ ರಾಜೀನಾಮೆ ಕೊಡಿಸಿದ್ರು ಅಂತಾ ಖುದ್ದು ಅಣ್ಣಾಮಲೈ ಅವರ ಹೇಳಿದ್ದಾರೆ.

ಸುಮಾರು 10 ವರ್ಷಗಳ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಎಸ್ಪಿಯಾದ ನಂತರದ ಡಿಐಜಿ, ಐಜಿಯಾಗಿ ಎಸಿ ರೂಮ್ ನಲ್ಲಿ ಕುಳಿತು ಕೆಲಸ ಮಾಡೋದಕ್ಕೆ ಆಸಕ್ತಿ ಇಲ್ಲಾ,ಎರಡು ಜನ ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು, ಊರಿಗೆ ಹೋಗಬೇಕು. ಸಾಧಾರಣ ವ್ಯಕ್ತಿಯಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕೆಂಬ ಆಸೆ ಸರ್ ಎಂದು ಸಿದ್ದಾರ್ಥ್ ಅಣ್ಣಾ ಅವರ ಬಳಿ ಹೇಳಿದ್ದೇ. ನನ್ನ ರಾಜೀನಾಮೆಯನ್ನು ನಾವಿಬ್ಬರು ಸೇರಿ ಡಿಸೈಡ್ ಮಾಡಿದ್ದು. ಕಾಫಿ ಡೇ ಚೇಂಬರ್ ರೂಮ್ ನಲ್ಲಿ ಕುಳಿತು ಮೂರುವರೆ ಗಂಟೆ ಮಾತನಾಡಿದ್ದೇವೆ ಎಂದು ಕಾಫಿಡೇ ಮಾಲೀಕ ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಕುರಿತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ನೆನಪಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿಯಲ್ಲಿ ನಿರ್ಮಾಣಗೊಳ್ಳಲಿರುವ ಸಿದ್ದಾರ್ಥ್ ಹೆಗ್ಡೆ ಅವರ ಪುತ್ಹಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ್ರು. ತಾನು ಐಪಿಎಸ್ ಹುದ್ದೆಗೆ ಯಾವ ದಿನಾಂಕದಂದು ರಾಜೀನಾಮೆ ನೀಡಬೇಕು ಅನ್ನೋ ಕುರಿತು ನಾವಿಬ್ಬರೇ ಸೇರಿ ಡಿಸೈಡ್ ಮಾಡಿದ್ದೇವು.

ರಾಜೀನಾಮೆ ನೀಡಿದ ಕೂಡಲೇ ನನಗೆ ಕಾಲ್ ಮಾಡಿದ್ದರು. ಜನ ನಿಮ್ಮನ್ನ ಮೂರ್ಖ ಅನ್ನಬಹುದು, ಪೂಲ್ ಎನ್ನಬಹುದು, ಇದು ಕಷ್ಟದ ಕೆಲಸ ಯಾರೂ ಮಾಡೋದಿಲ್ಲ. ಆದರೆ ನಿಮ್ಮ ಉದ್ದೇಶ ಏನೆಂದು ನನಗೆ ಗೊತ್ತು ಎಂದಿದ್ದರು. ಆದ್ರೆ ಈಗ ಅವರು ಇಲ್ಲ. ಆದರೆ ಮೇಲಿಂದ ನೋಡುತ್ತಿದ್ದಾರೆ. ಯಾವಾಗಲೂ ಅವರು ನನ್ನೊಂದಿಗೆ ಇರುತ್ತಾರೆ. ಈ ಹಿಂದೆಯೂ ಗೈಡ್ ಮಾಡಿದ್ದರು. ಮುಂದೆಯೂ ಮಾಡುತ್ತಲೇ ಇರುತ್ತಾರೆ ಎಂದು ತಿಳಿಸಿದ್ದಾರೆ.

Comments are closed.