ವಿಷ್ಣು ಪ್ರತಿಮೆ ಧ್ವಂಸ ಮಾಡಿದವರ ಹೆಸರು ತಿಳಿಯೋ ಮುನ್ನ ದೇಶ ಬಿಟ್ಟು ಹೋಗಿ ಅಂದ ಕಿಚ್ಚ..!

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಪ್ರಕರಣದ ಬೆನ್ನಲ್ಲೇ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಮೆಯನ್ನು ಧ್ವಂಸ ಮಾಡಿರುವ ನಿಮ್ಮ ಹೆಸರು ತಿಳಿಯುವ ಮೊದಲೇ ನೀವು ದೇಶ ಬಿಟ್ಟು ಹೋಗಿ ಅಂದಿದ್ದಾರೆ.

ವಿಷ್ಣು ಸರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವ ವಿಚಾರ ತನಗೆ ತಡವಾಗಿ ತಿಳಿದಿದೆ. ಓರ್ವ ವಿಷ್ಣು ಸರ್ ಅಭಿಮಾನಿಯಾಗಿ ಪ್ರತಿಮೆಯನ್ನು ಒಡೆದು ಹಾಕಿರುವವರಿಗೆ ಕೆಲವೊಂದು ವಿಚಾರಗಳನ್ನು ಹೇಳಲು ಇಷ್ಟಪಡುತ್ತೇನೆ. ವಿಷ್ಣು ಸರ್ ಅವರ ಪ್ರತಿಮೆಯನ್ನು ಒಡೆದು ಹಾಕಿರುವವರು ಸಿಕ್ಕರೆ, ಪ್ರತಿಮೆಯನ್ನು ಒಡೆದಿರುವುದಕ್ಕಿಂತಲೂ ಹೀನಾಯವಾಗಿ ನಿಮ್ಮನ್ನು ವಿಷ್ಣು ಸರ್ ಅಭಿಮಾನಿಗಳು ಒಡೆದು ಹಾಕುತ್ತಾರೆ ಎನ್ನುವ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಇನ್ನು ವಿಷ್ಣು ಸರ್ ಅವರ ಮೂರ್ತಿಯನ್ನು ಒಡೆದು ಹಾಕಿರುವ ನೀವು ಮನುಷ್ಯರೇ ಅಲ್ಲಾ, ನೀವು ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳಿ. ಇಲ್ಲವಾದ್ರೆ ನಿಮ್ಮ ಹೆಸರು ಗೊತ್ತಾದ ದಿನ ಏನು ನಡೆಯುತ್ತೋ ಅದನ್ನು ಯಾರಿಂದಲೂ ತಡೆಯೋದಕ್ಕೆ ಸಾಧ್ಯವಿಲ್ಲ. ಅಂತಹ ಮಹಾನ್ ವ್ಯಕ್ತಿಯ ಮೂರ್ತಿಯನ್ನು ಒಡೆಯುವ ಮೊದಲೇ ನೀವು ಯೋಚನೆ ಮಾಡಬೇಕಿತ್ತು ಎಂದಿದ್ದಾರೆ.

Comments are closed.