Bigboss : ಬಿಗ್‌ಬಾಸ್‌ ರನ್ನರ್ಸ್‌ಅಪ್‌ ಆದ ಅರವಿಂದ್‌ ..!!

ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಮೂವರು ಅಂತಿಮ ಘಟ್ಟಕ್ಕೆ ತಲುಪಿದ್ದಾರೆ. ಈ ನಡುವಲ್ಲೇ ಕೆ.ಪಿ.ಅರವಿಂದ ಮೂರನೇ ಸ್ಥಾನಿಯಾಗಿ ಬಿಗ್‌ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ಶೋ ಅರ್ಧಕ್ಕೆ ನಿಂತಾಗ ಪ್ರೇಕ್ಷಕರು ನಿರಾಸೆಗೊಂಡಿದ್ದರು. ಆದರೆ ಮತ್ತೆ ಶುರುವಾಗುತ್ತಲೇ ಪ್ರೇಕ್ಷಕರಿಗೆ ದಿನೇ ದಿನೇ ಕುತೂಹಲವನ್ನು ಹುಟ್ಟುಹಾಕಿತ್ತು. ಆದರೆ ಇದೀಗ ಅಂತಿಮಘಟ್ಟ ತಲುಪಿದೆ. ಈ ನಡುವಲ್ಲೇ ದಿವ್ಯ ಉರುಡುಗ, ಮಂಜುಪಾವಗಡ ಹಾಗೂ ಅರವಿಂದ್‌ ಕೆ.ಪಿ. ಅಂತಿಮ ಘಟ್ಟ ತಲುಪಿದ್ದಾರೆ. ಟಾಪ್‌ ಐದರಲ್ಲಿ ಕಾಣಿಸಿಕೊಂಡಿದ್ದ ಪ್ರಶಾಂತ್‌ ಸಂಬರಗಿ ಹಾಗೂ ವೈಷ್ಣವಿ ಗೌಡ ಬಿಗ್‌ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ.

ಆದ್ರೀಗ ಬಿಗ್‌ಬಾಸ್‌ ಮನೆಯಲ್ಲಿ ದಿವ್ಯ ಉರುಡುಗ, ಮಂಜು ಪಾವಗಡ ಹಾಗೂ ಅರವಿಂದ್‌ ಕೆ.ಪಿ. ಬಿಗ್‌ಬಾಸ್‌ ಸ್ಪರ್ಧೆಯ ಅಂತಿಮ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅರವಿಂದ ಕೆ.ಪಿ. ಮೂರನೇ ಸ್ಥಾನ ಪಡೆದುಕೊಂಡಿದ್ದು, ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಉಳಿದಂತೆ ದಿವ್ಯ ಉರುಡುಗ ಹಾಗೂ ಮಂಜು ಪಾವಗಡ ಉಳಿದುಕೊಂಡಿದ್ದು, ವೀಕ್ಷಕರ ಓಟ್‌ ಆಧಾರದ ಮೇಲೆ ಬಿಗ್‌ಬಾಸ್‌ ವಿನ್ನರ್‌ ಆಯ್ಕೆ ನಡೆಯಲಿದೆ.

Comments are closed.