kichcha sudeep : ‘ದರ್ಶನ್​ಗೆ ಚಪ್ಪಲಿ ಎಸೆದಿದ್ದು ಮನಸ್ಸಿಗೆ ಘಾಸಿಯುಂಟುಮಾಡಿದೆ’ : ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಸುದೀಪ್​

ಬೆಂಗಳೂರು:kichcha sudeep : ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆಯಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ನಟ ದರ್ಶನ್​ ಮೇಲೆ ಚಪ್ಪಲಿ ಎಸೆದ ಪ್ರಕರಣ ಇದೀ ಸ್ಯಾಂಡಲ್​ವುಡ್​ನ್ನು ಆಘಾತಕ್ಕೆ ಒಳಪಡಿಸಿದೆ. ದರ್ಶನ್​ ಅಭಿಮಾನಿಗಳು ಈ ಘಟನೆಯನ್ನು ಖಂಡಿಸುತ್ತಿರುವುದು ಮಾತ್ರವಲ್ಲದೇ ಚಂದನವನದ ಬಹುತೇಕ ಎಲ್ಲಾ ಸ್ಟಾರ್​ ನಟರು ದರ್ಶನ್​ ಬೆಂಬಲಕ್ಕೆ ನಿಂತಿದ್ದಾರೆ. ಈ ಸಾಲಿಗೆ ಇದೀಗ ಕಿಚ್ಚ ಸುದೀಪ ಕೂಡ ಸೇರಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ಮತ್ತೆ ಸುದೀಪ್​ ಹಾಗೂ ದರ್ಶನ್​ರನ್ನು ಒಟ್ಟಾಗಿ ಕಾಣಬೇಕು ಎಂಬುದು ಬಹುಜನರ ಆಸೆ. ಆದರೆ ಅದ್ಯಾಕೋ ಗೊತ್ತಿಲ್ಲ. ಇವರಿಬ್ಬರ ನಡುವಿನ ಮುನಿಸು ಶಮನವಾಗೋವಂತೆ ಕಾಣುತ್ತಿರಲಿಲ್ಲ. ಆದರೆ ಇದೀಗ ಎಲ್ಲಾ ಸಿಟ್ಟು, ಕೋಪಗಳನ್ನು ಬದಿಗೊತ್ತಿ ದರ್ಶನ್​ ಪರ ನಿಂತಿರುವ ನಟ ಕಿಚ್ಚ ಸುದೀಪ ಬಂಡಾಯವೇಳುವುದು ಎಲ್ಲದಕ್ಕೂ ಉತ್ತರವಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


ಟ್ವಿಟರ್​ನಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡಿರುವ ನಟ ಸುದೀಪ, ಪ್ರೀತಿ ಹಾಗೂ ಗೌರವ. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಅಲ್ಲದೇ ಪ್ರತಿಯೊಂದಕ್ಕೂ ಪರಿಹಾರವನ್ನು ನೀವು ಅನೇಕ ವಿಧಾನಗಳಲ್ಲಿ ಕಂಡುಕೊಳ್ಳಬಹುದು. ಪ್ರತಿಯೊಬ್ಬರನ್ನೂ ನಾವು ಗೌರವ ಹಾಗೂ ಘನತೆಯಿಂದ ಕಾಣಬೇಕು. ನಾನು ನೋಡಿದ ಆ ವಿಡಿಯೋ ನಿಜಕ್ಕೂ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಚಪ್ಪಲಿ ಎಸೆಯುವ ವೇಳೆಯಲ್ಲಿ ಚಿತ್ರದ ನಾಯಕಿ ಸೇರಿದಂತೆ ಅನೇಕರು ವೇದಿಕೆಯ ಮೇಲೆ ನಿಂತಿದ್ದರು. ಕಾರ್ಯಕ್ರಮಕ್ಕೆಂದು ತೆರಳಿ ಸಾರ್ವಜನಿಕ ವೇದಿಕೆಯಲ್ಲಿ ಒಬ್ಬರನ್ನು ಈ ರೀತಿ ಅವಮಾನ ಮಾಡುವುದನ್ನು ನೋಡಿದರೆ ನೋವುಂಟಾಗುತ್ತೆ ಎಂದು ಸುದೀಪ್​ ಬರೆದುಕೊಂಡಿದ್ದಾರೆ .


ದರ್ಶನ್​ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯಗಳು ಇರುವುದು ನಿಜ. ಹಾಗೆಂದ ಮಾತ್ರಕ್ಕೆ ನನ್ನ ಮನಸ್ಸಿಗೆ ಘಾಸಿಯುಂಟು ಮಾಡಿದ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಾನು ನಿಲ್ಲಿಸಲಾರೆ. ದರ್ಶನ್​​ಗೆ ಚಪ್ಪಲಿ ಎಸೆದಿದ್ದು ಸಹ್ಯವಲ್ಲ. ಈ ಘಟನೆಯಿಂದ ನಾನು ನೊಂದಿದ್ದೇನೆ ಎಂದು ನಟ ಸುದೀಪ ಬೇಸರ ಹೊರ ಹಾಕಿದ್ದಾರೆ.

ಇದನ್ನು ಓದಿ : News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?

ಇದನ್ನು ಓದಿ : Challenging Star Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆತ : “ಕ್ರಾಂತಿ” ಸಿನಿಮಾದ ಎರಡನೇ ಹಾಡು ರಿಲೀಸ್‌ ವೇಳೆ ದುರ್ಘಟನೆ

kichcha sudeep says the video throwing chappal on actor darshan is very disturbing

Comments are closed.