Mandya Ravi :ಅಕಾಲಿಕ ನಿಧನರಾದ ಮಂಡ್ಯ ರವಿಗೆ ಇತ್ತು ಅದೊಂದು ನನಸಾಗದ ಕನಸು

Mandya Ravi : ಚಿತ್ರರಂಗಕ್ಕೆ ಅದ್ಯಾವ ಕೆಟ್ಟ ದೃಷ್ಠಿ ಬಿದ್ದಿದೆಯೋ ತಿಳಿಯದು. ಅಪ್ರತಿಮ ನಟರು ಒಬ್ಬರಾದ ಮೇಲೆ ಒಬ್ಬರಂತೆ ಇಹಲೋಕ ಯಾತ್ರೆ ನಡೆಸುತ್ತಿದ್ದಾರೆ. ಒಬ್ಬೊಬ್ಬರನ್ನೇ ಕಳೆದುಕೊಂಡ ಚಿತ್ರರಂಗ ಶೋಕದ ಸಾಗರದಲ್ಲಿದೆ. ಇಂದು ಕನ್ನಡ ಕಿರುತೆರೆಯ ಜನಪ್ರಿಯ ಕಲಾವಿದ ಮಂಡ್ಯ ರವಿ ವಿಧಿವಶರಾಗಿದ್ದಾರೆ. ಧಾರವಾಹಿ ಮುಖ್ಯ ಪಾತ್ರಧಾರಿ, ಖಳನಟ, ಪೋಷಕ ಹೀಗೆ ನಾನಾ ಪಾತ್ರಗಳಲ್ಲಿ ರಂಜಿಸುತ್ತಿದ್ದ ಮಂಡ್ಯ ರವಿ ಇಂದು ಕಣ್ಮುಚ್ಚಿ ಮಲಗಿದ್ದಾರೆ.


ಜಾಂಡೀಸ್​ನಿಂದ ಬಳಲುತ್ತಿದ್ದ ಮಂಡ್ಯ ರವಿ ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜಾಂಡೀಸ್​​ ರವಿಪ್ರಸಾದ್​ರನ್ನು ಇಹಲೋಕ ಯಾತ್ರೆಯನ್ನೇ ಮುಗಿಸುವಂತೆ ಮಾಡಿದೆ. ಕಿಡ್ನಿ ಸಮಸ್ಯೆ ಸೇರಿದಂತೆ ಬಹುಅಂಗಾಗ ವೈಫಲ್ಯಗಳಿಂದಾಗಿ ಇಂದು ತಮ್ಮ 42ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ. ಸಿನಿಮಾ ರಂಗದಲ್ಲಿ ಮಿಂಚಬೇಕು ಎಂದು ಗಾಂಧಿನಗರಕ್ಕೆ ಕಾಲಿಟ್ಟಿದ್ದ ಈ ಪ್ರತಿಭೆ ಬಳಿಕ ಆಯ್ಕೆ ಮಾಡಿಕೊಂಡಿದ್ದು ಕಿರುತೆರೆಯನ್ನ. ರಂಗಭೂಮಿ ಕಲಾವಿದನಾಗಿದ್ದ ರವಿಪ್ರಸಾದ್​ ಕಾಲ ಕಳೆದಂತೆ ಕನ್ನಡ ಕಿರುತೆರೆಯ ಹೆಸರಾಂತ ನಟ ಎನಿಸಿಕೊಂಡಿದ್ದರು.


ಟಿ.ಎಸ್​ ನಾಗಾಭರಂ ನಿರ್ದೇಶನದ ಮಾಹಾಮಾಯಿ ಧಾರವಾಹಿ ಮೂಲಕ ಕಿರುತೆರೆಗ ಪಾದಾರ್ಪಣೆ ಮಾಡಿದ್ದ ಮಂಡ್ಯ ರವಿ ಬಳಿಕ ಹಿಂತಿರುಗಿ ನೋಡಲಿಲ್ಲ. ಮಿಂಚು, ಮುಕ್ತ ಮುಕ್ತ, ಚಿತ್ರಲೇಖ, ಯಶೋಧೆ, ವರಲಕ್ಷ್ಮೀ ಸ್ಟೋರ್ಸ್, ಮಗಳು ಜಾನಕಿ ಹಾಗೂ ನಮ್ಮನೆ ಯುವರಾಣಿ ಸೇರಿದಂತೆ ಸಾಕಷ್ಟು ಧಾರವಾಹಿಗಳಲ್ಲಿ ಮಂಡ್ಯ ರವಿ ನಟಿಸಿದ್ದರು. ಕಾಫಿತೋಟ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ಮಂಡ್ಯ ರವಿ ಅಭಿನಯಿಸಿದ್ದರು.


ಸ್ಯಾಂಡಲ್​ವುಡ್​ ನಟ ಪುನೀತ್​ ರಾಜ್​ಕುಮಾರ್ ನಿಧನದ ಸಂದರ್ಭದಲ್ಲಿ ಮಂಡ್ಯ ರವಿ ತಮ್ಮ ನನಸಾಗದ ಕನಸನ್ನು ಹೇಳಿಕೊಂಡಿದ್ದರು. ನಾನು ಒಂದು ಬಾರಿಯಾದರೂ ಪುನೀತ್​ ರಾಜ್​ಕುಮಾರ್ ಜೊತೆಯಲ್ಲಿ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯನ್ನು ಹೊಂದಿದ್ದೆ. ಆದರೆ ಆ ಅವಕಾಶ ನನಗೆ ಸಿಗಲೇ ಇಲ್ಲ ಎಂದು ಮಂಡ್ಯ ರವಿ ನೋವನ್ನು ತೋಡಿಕೊಂಡಿದ್ದರು. ಇದೀಗ ಮಂಡ್ಯ ರವಿ ಕೂಡ ಇಹಲೋಕ ಯಾತ್ರೆಯನ್ನು ಮುಗಿಸಿದ್ದು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.


ಪುನೀತ್​ ರಾಜ್​ ಕುಮಾರ್​ ಜೊತೆಯಲ್ಲಿ ಮಂಡ್ಯ ರವಿ ನಟಿಸದೇ ಹೋದರೂ ಸಹ ರಾಜ್​ ವಂಶದ ಕುಡಿ ವಿನಯ್​ ರಾಜ್​ಕುಮಾರ್​ ಜೊತೆಯಲ್ಲಿ ‘ಪೆಪೆ’ ಸಿನಿಮಾದಲ್ಲಿ ರವಿ ಪ್ರಸಾದ್ ನಟಿಸಿದ್ದಾರೆ. ಈ ಸಿನಿಮಾ ಇನ್ನಷ್ಟೇ ತೆರೆ ಕಾಣಬೇಕಿದೆ. ಇನ್ನೂ ಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಬೇಕಿದ್ದ ಅಪ್ರತಿಮ ಕಲಾವಿದ ಈ ರೀತಿ ಅಕಾಲಿಕ ಮರಣ ಕಂಡಿದ್ದು ದುರಂತವೇ ಸರಿ .

ಇದನ್ನು ಓದಿ : Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

ಇದನ್ನೂ ಓದಿ : man’s nose ear chopped off :ಮಗಳಿಗೆ ಮರು ಮದುವೆ ಮಾಡಿದ ತಂದೆಯ ಮೂಗು, ಕಿವಿಯನ್ನೇ ಕತ್ತರಿಸಿದ ದುಷ್ಕರ್ಮಿಗಳು

Mandya Ravi wanted to act with Puneeth Rajkumar

Comments are closed.