Puneeth – Darshan Thoogudeepa : ಅಪ್ಪು ನೆಚ್ಚಿನ ಊರಿನಲ್ಲಿ “ಕ್ರಾಂತಿ” 2ನೇ ಹಾಡು : ತೂಗುದೀಪ್‌ ದರ್ಶನ್‌ ಘೋಷಣೆ ‌

ಚಾಲೆಂಚಿಂಗ್‌ ಸ್ಟಾರ್‌ ತೂಗುದೀಪ್‌ ದರ್ಶನ್‌ ಅಭಿನಯದ ಬಹು ನಿರೀಕ್ಷಿತ “ಕ್ರಾಂತಿ” ಸಿನಿಮಾದ ಬಿಡುಗಡೆಗೆ ದಿನ ಹತ್ತಿರವಾಗುತ್ತಿದ್ದಂತೆ (Puneeth – Darshan Thoogudeepa) ಸಿನಿಮಾ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿದೆ. ಒಂದು ಕಡೆ ಸ್ವತಃ ಅಭಿಮಾನಿಗಳೇ “ಕ್ರಾಂತಿ” ಸಿನಿಮಾ ದ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದು ಕಡೆ ಸಿನಿತಂಡ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡುವುದರ ಮೂಲಕ ಸಿನಿಮಾದ ಕೂತುಹಲವನ್ನು ಕೆರಳಿಸುತ್ತಿದೆ. ಸಿನಿ ತಂಡ ಮೊದಲೇ ನಿಗದಿಪಡಿಸಿದಂತೆ “ಕ್ರಾಂತಿ” ಸಿನಿಮಾ ಮೊದಲ ಹಾಡು “ಧರಣಿ” ಹಾಡನ್ನು ಡಿಸೆಂಬರ್‌ 10ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.

“ಕ್ರಾಂತಿ” ಸಿನಿಮಾದ ಮೊದಲ ಹಾಡು “ಧರಣಿ”ಯನ್ನು ನಟ ದರ್ಶನ್‌ ಅವರ ನೆಚ್ಚಿನ ಅಭಿಮಾನಿಗಳಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಈ ಹಾಡನ್ನು ಅಭಿಮಾನಿಗಳಿಗೆ ಡಿ ಬೀಟ್ಸ್‌ ಮ್ಯೂಸಿಕ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಳಲು ಲಭ್ಯವಿದೆ. ಈ ಹಾಡಿನ ಮೊದಲ ಸಾಲು “ಧರಣಿ ಮಂಡಲ ಮಧ್ಯದಲ್ಲಿ.. ಮೆರೆವ ಕನ್ನಡ ದೇಶದಲಿ..ಎಂಬ ಸಾಲುಗಳಿಂದ ಆರಂಭವಾಗಿ ಕನ್ನಡ ಹಾಗೂ ಕನ್ನಡಕ್ಕಾಗಿ ಬದುಕಿ ಹೋರಾಡಿದ ಹಲವಾರು ಸಾಧಕರನ್ನು ನೆನಪಿಸಲಾಗುತ್ತದೆ. ಇದರಲ್ಲಿ ಕನ್ನಡ ಭಾಷೆಗಿರುವ ಮಹತ್ವ ಹಾಗೂ ಇತಿಹಾಸವನ್ನು ತಿಳಸಲಾಗಿದೆ. ಇನ್ನೂ ಈ ಹಾಡು ಲಿರಿಕಲ್‌ ವಿಡಿಯೋ ರೂಪದಲ್ಲಿದ್ದು, ಹಾಡಿನ ಕೆಲ ದೃಶ್ಯದ ತುಣುಕುಗಳನ್ನು ಸಹ ನೋಡಬಹುದಾಗಿದೆ.

ಈ ಹಾಡಿಗೆ ವಿ.ನಾಗೇಂದ್ರ ಪ್ರಸಾದ್‌ ಬಹಳ ಮೈನವಿರೇಳಿಸುವಂತಹ ಸಾಹಿತ್ಯವನ್ನು ಬರೆದಿದ್ದಾರೆ. ಹಾಗೇ ವಿ.ಹರಿಕೃಷ್ಣ ಈ ಹಾಡಿಗೆ ಬಹಳ ಅದ್ಭುತವಾಗಿ ಸಂಗೀತವನ್ನು ಸಂಯೋಜಿಸಿದ್ದಾರೆ. ಸದ್ಯ ಈ ಹಾಡು ಎಲ್ಲಾ ಕಡೆ ನೆಚ್ಚಿನ ಕನ್ನಡ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಈ ಹಾಡಿನ ಬಳಿಕ ಸಿನಿತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡುತ್ತಾ ಅಥವಾ ಸಿನಿಮಾ ಟ್ರೈಲರ್‌ ರಿಲೀಸ್‌ ಮಾಡುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಆದರೆ ಈ ಪ್ರಶ್ನೆಗೆ ಈಗಾಗಲೇ ನಟ ದರ್ಶನ್‌ ಧರಣಿ ಹಾಡು ರಿಲೀಸ್‌ಗೂ ಮುನ್ನ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಉತ್ತರ ನೀಡಿದ್ದಾರೆ.

“ಕ್ರಾಂತಿ” ಸಿನಿಮಾದ ಮುಂದಿನ ಹಾಡನ್ನು ಡಿಸೆಂಬರ್‌ 18ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ರಿಲೀಸ್‌ ಮಾಡುತ್ತೇವೆ ಎಂದು ನಟ ದರ್ಶನ್‌ ಘೋಷಿಸಿದ್ದಾರೆ. ಮುಂದಿನ ಹಾಡು ಯಾವುದು ಎನ್ನುವುದನ್ನು ಸದ್ಯದಲ್ಲೇ ತಿಳಿಸುತ್ತೇವೆ ಎಂದು ಕೂಡ ಹೇಳಿದ್ದಾರೆ. ನಟ ಪುನೀತ್‌ ರಾಜಕುಮಾರ್‌ ಸಾಕಷ್ಟು ಬಾರಿ ನನ್ನ ನೆಚ್ಚಿನ ಊರು ಎಂದು ಹೇಳಿಕೊಂಡ ಹೊಸಪೇಟೆಯಲ್ಲಿ ಗೆಳೆಯ ದರ್ಶನ್‌ ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ರಿಲೀಸ್‌ ಮಾಡಲಿರುವುದು ಬಹಳ ವಿಶೇಷವಾಗಿದೆ.

ಇದನ್ನೂ ಓದಿ : Anirudh Controversy: ಬ್ಯಾನ್ ತೂಗುಗತ್ತಿಯಿಂದ ‘ಸೂರ್ಯವಂಶ’ ಪಾರು; ಮುನಿಸು ಮರೆತು ಒಂದಾದ ಅನಿರುದ್ಧ್- ಆರೂರು

ಇದನ್ನೂ ಓದಿ : Anurag Kashyap: ಕಾಂತಾರ ಸಿನಿಮಾ ಸಕ್ಸಸ್ ಆಯ್ತು ಅಂತ ರಿಷಬ್ ಶೆಟ್ಟಿ ‘ಆ’ ತಪ್ಪನ್ನು ಮಾಡಬಾರದು; ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಾರ್ನಿಂಗ್

ಇದನ್ನೂ ಓದಿ : Pakistani YouTuber : ತನ್ನ ಸಂಗಾತಿಗಾಗಿ “ಕತ್ತೆಮರಿ” ಉಡುಗೊರೆ ಕೊಟ್ಟ ಪಾಕಿಸ್ತಾನಿ ಯುಟ್ಯೂಬರ್

ಈಗಾಗಲೇ “ಕ್ರಾಂತಿ” ಸಿನಿಮಾದ ಮೊದಲ ಹಾಡನ್ನು ಮೈಸೂರು ನಗರದಲ್ಲಿ ಬಿಡುಗಡೆ ಮಾಡಿದ್ದು, ಎರಡನೇ ಹಾಡನ್ನು ಬಳ್ಳಾರಿಯ ಹೊಸಪೇಟೆ ಪಟ್ಟಣದಲ್ಲಿ ಬಿಡುಗಡೆ ಮಾಡುವುದಾಗಿ ಸಿನಿತಂಡ ತಿಳಿಸಿದೆ. ಹಾಗೆ ಬೆಳಗಾವಿಯಲ್ಲೂ ಕೂಡ ಸಈ ಸಿನಿಮಾದ ಹಾಡನ್ನು ಬಿಡುಗಡೆ ಮಾಡುವ ಸುದ್ದಿ ಇದೆ. ಹೀಗಾಗಿ ಒಂದೊಂದು ಹಾಡನ್ನು ಒಂದೊಂದು ಊರಿನಲ್ಲಿ ಬಿಡುಗಡೆ ಮಾಡುವ ಸೂಚನೆಯನ್ನು ನೀಡಿದೆ.

ಅಷ್ಟೇ ಅಲ್ಲದೇ ಕ್ರಾಂತಿ ಸಿನಿಮಾ ತಂಡದ ಸದಸ್ಯರು ಒಂದೊಂದು ಹಾಡು ಬಿಡುಗಡೆಗೂ ಒಂದೊಂದು ಬಣ್ಣದ ಉಡುಗೆ ತೊಡಲು ನಿರ್ಧರಿಸಿದ್ದು, ಈ ಮಾಹಿತಿಯನ್ನು ಸಹ ದರ್ಶನ್‌ ಸುದ್ದಿಗೊಷ್ಠಿಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಬಿಡುಗಡೆಗೊಂಡ “ಧರಣಿ” ಹಾಡಿಗೆ ಸಿನಿತಂಡವು ಕೆಂಪು ಬಣ್ಣದ ಉಡುಗೆಯನ್ನು ಧರಸಿದ್ದಾರೆ. ಹಾಗೆ ಪ್ರತಿ ಹಾಡಿಗೂ ಬೇರೆ ಬೇರೆ ಬಣ್ಣದ ಉಡುಗೆಯನ್ನು ತೊಡುವುದಾಗಿ ತಿಳಿಸಿದ್ದಾರೆ.

Puneeth – Darshan Thoogudeepa : “Kranti” in Appu’s Favorite Town 2nd Song : Thoogudeep Darshan Announces

Comments are closed.