Kavya Shastri : ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ : ಹೃದಯವಂತಿಕೆ ಮೆರೆದ ನಟಿ ಕಾವ್ಯ ಶಾಸ್ತ್ರೀ

ಸ್ಯಾಂಡಲ್ ವುಡ್ ನಟಿ ಕಾವ್ಯಶಾಸ್ತ್ರಿ‌ ಹೃದಯವಂತಿಕೆ  ಮೆರೆದಿದ್ದಾರೆ. ಕ್ಯಾನ್ಸರ್ ರೋಗಿಗಳಿಗಾಗಿ ಮಿಡಿದಿರಿವ ನಟಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಕಾವ್ಯ ಶಾಸ್ತ್ರಿ ತಾವು ಕೂದಲನ್ನು ಯಾವ ಕಾರಣಕ್ಕೆ ದಾನ ಮಾಡುತ್ತಿದ್ದೇನೆ ಅಂತಾನೂ ಬರೆದುಕೊಂಡಿದ್ದಾರೆ. 

ನಟಿ ಕಾವ್ಯಶಾಸ್ತ್ರೀ  ಇನ್ ಸ್ಟಾ ಖಾತೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ನಾನು ಕೂದಲು ದಾನ ಮಾಡಿದ್ದೇನೆ, ಕ್ಯಾನ್ಸರ್​​ನಿಂದಾಗಿ ನಾನು ನನ್ನ ಚಿಕ್ಕಪ್ಪನನ್ನು ಕಳೆದು ಕೊಂಡಿದ್ದೆ.

ಆ ನೋವನ್ನು ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ, ಈ ನಿರ್ಧಾರಕ್ಕೆ ಬಂದಿದ್ದೇನೆ. ಕೂದಲು ದಾನ ಸಣ್ಣ ಕೆಲಸವೇ ಇರಬಹುದು. ಆದರೆ, ಒಳ್ಳೇ ಕೆಲಸಕ್ಕೆ ನೀವು ಸಹ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನಟಿಯರ ಪೈಕಿ ಹಲವರು ಈಗಾಗಲೇ ಕೂದಲು ದಾನ ಮಾಡಿದ್ದಾರೆ‌. ಈ ಪೈಕಿ ನಟಿ ಶ್ವೇತಾ ಪ್ರಸಾದ್, ಕಾರುಣ್ಯ ರಾಮ್, ಗಾಯಕಿ ಅಖಿಲಾ ಪಜಿಮಣ್ಣು ಮಾನವೀಯತೆ ಮರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದರು.

Comments are closed.