ದಿಗಂತ್ ಗೆ ಸ್ಪೋರ್ಟ್ಸ್ ಇಂಜುರಿ : 2 ದಿನದಲ್ಲಿ ಚೇತರಿಸಿಕೊಳ್ಳುತ್ತಾರೆ ದಿಗಂತ್ ತಂದೆ ಹೇಳಿಕೆ

ಬೆಂಗಳೂರು : ವೆಡ್ಡಿಂಗ್ ಆನ್ಯಿವರ್ಸರಿ ಸೆಲೆಬ್ರೇಶನ್ ಗಾಗಿ ಗೋವಾದ ವಾಗಾಥೋರ್ ಬೀಚ್ ಗೆ ತೆರಳಿದ್ದ ದೂದಪೇಡಾ ದಿಗಂತ್ ಸಾಹಸಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ಬ್ಯಾಕ್ ಪ್ಲೀಪ್ ಮಾಡಲು ಹೋಗಿದ್ದ ದಿಗಂತ್ ಗೆ ಕತ್ತು ಹಾಗೂ ಬೆನ್ನು ಮೂಳೆಗೆ ಗಂಭೀರ ಸ್ವರೂಪದ ಏಟುಗಳಾಗಿದ್ದು (Sports Injury Diganth) ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿದೆ. ಆದರೆ ದಿಗಂತ್ ಗೆ ಆಗಿರೋದು ಸಣ್ಣ ಏಟು ಎಂದಿರುವ ದಿಗಂತ್ ತಂದೆ ಸದ್ಯದಲ್ಲೇ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.

ನಿನ್ನೆ ಮಧ್ಯಾಹ್ನ ದಿಗಂತ್ ಸಮುದ್ರತೀರದಲ್ಲಿ ಸಾಹಸ ಮಾಡಲು ಹೋಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಗೋವಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಹೆಚ್ಚಿನ ಚಿಕಿತ್ಸೆ ಹಾಗೂ ತುರ್ತು ಶಸ್ತ್ರ‌ಚಿಕಿತ್ಸೆಗಾಗಿ ದಿಗಂತ್ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ದಿಗಂತ್ ಪೋಷಕರು ಸುದ್ದಿ ತಿಳಿದು ಮಣಿಪಾಲ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಟ ದಿಗಂತ್ ತಂದೆ ಪ್ರೊ.ಕೃಷ್ಣಮೂರ್ತಿ ಮಂಚಾಲೆ ಡಾಕ್ಟರ್ ಹೆಚ್ಚಿನ ಏಟಾಗಿಲ್ಲ ಅನ್ನೋ ಮಾಹಿತಿ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಎದ್ದು ಓಡಾಡಬಹುದು ಅನ್ನೋ ಮಾಹಿತಿ ಕೊಟ್ಟಿದ್ದಾರೆ. ಇನ್ಸಿಡೆಂಟ್ ಏನಾಗಿದೆ ಅನ್ನೋದು ನಮಗೆ ಗೊತ್ತಾಗಿಲ್ಲ. ನಾವು ಮನೆಯಲ್ಲಿದ್ದೇವು.

ಓಡಾಡೋವಾಗ ಬೀಳೋದು ಸಹಜ. ಅದೇ ರೀತಿ ಏನೋ ಸ್ಟಂಟ್ ಮಾಡಲು ಹೋಗಿ‌ ಬಿದ್ದಿದ್ದಾರೆ ಅಷ್ಟೇ, ನಾನೇ ಮೊನ್ನೆ ಬೈಕ್ ತೆಗೆದುಕೊಂಡು ಹೋಗುವಾಗ ಬಿದ್ದಿದ್ದೆ.ಹಾಗಾಗಿ ಇದೆಲ್ಲ ಸಹಜ. ಚೆನ್ನಾಗಿ ಮಾತಾಡ್ತಿದ್ದಾನೆ. ಅಫರೇಶನ್ ಗೆ ಕರೆದುಕೊಂಡು ಹೋಗಿದ್ದಾರೆ. ಮೈನರ್ ಆಫರೇಶನ್ ಇರೋದರಿಂದ ಈಗಲೇ ಆಫರೇಶನ್ ಮಾಡ್ತಿವಿ ಅಂತ ಕರೆದು ಕೊಂಡು ಹೋಗಿದ್ದಾರೆ. ಮುಂದೇ ಏನು ಸಮಸ್ಯೆ ಆಗಬಾರದು ಅಂತ ಈಗ ಆಫರೇಶನ್ ಮಾಡ್ತಿದ್ದಾರೆ ಎಂದು ದಿಗಂತ್ ತಂದೆ ‌ಮಾಹಿತಿ ನೀಡಿದ್ದಾರೆ.

ಇನ್ನೂ ಈಗಾಗಲೇ ಆಸ್ಪತ್ರೆಗೆ ಐಂದ್ರಿತಾ ರೇ ತಂದೆ ಡಾಕ್ಟರ್ ರೇ ಹಾಗೂ ತಾಯಿ ಸುಮಿತಾ ರೇ ಭೇಟಿ ನೀಡಿದ್ದು, ಅಳಿಯನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈಗಾಗಲೇ ಡಾ.ವಿಧ್ಯಾದರ್ ನೇತೃತದ ತಂಡ ದಿಗಂತ್ ಆಫರೇಶನ್ ನಡೆಸಿದ್ದು, ರಾತ್ರಿ ವೇಳೆಗೆ ದಿಗಂತ್ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಹಿತಿ ಹೊರಬೀಳೋ ನೀರಿಕ್ಷೆ ಇದೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಬೇಗ ಚೇತರಿಸಿಕೊಳ್ಳಲಿ ಎಂಬ ಹಾರೈಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : diganth : ಕಣ್ಣಿಗೆ ಏಟು… ಕತ್ತಿಗೆ ಪೆಟ್ಟು..ದಿಗಂತ್​​ ಲೈಫಲ್ಲಿ ಸಾಲು ಸಾಲು ಸಂಕಷ್ಟ..!

ಇದನ್ನೂ ಓದಿ : actor diganth injured : ನಟ ದಿಗಂತ್​ ಕತ್ತಿಗೆ ಬಲವಾದ ಏಟು : ಮಣಿಪಾಲ ಆಸ್ಪತ್ರೆಯತ್ತ ಧಾವಿಸಿದ ಯೋಗರಾಜ್​ ಭಟ್​

Sports Injury Diganth, recovering in 2 days Diganth father stated

Comments are closed.