ನಾಗ ಚೈತನ್ಯರನ್ನು ‘ಹಸ್ಬೆಂಡ್​ ಮಟಿರೀಯಲ್​’ ಎಂದು ಹೊಗಳಿದ ನಟಿ ಸಮಂತಾ ಪ್ರಭು

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಹಾಗೂ ನಾಗಚೈತನ್ಯ ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ವೈವಾಹಿಕ ಸಂಬಂಧವನ್ನು ಅಂತ್ಯಗೊಳಿಸಿದ್ದರು. ತಮ್ಮ ಸೋಶಿಯಲ್​​ ಮೀಡಿಯಾ ಖಾತೆಗಳಲ್ಲಿ ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುತ್ತಿರುವ ಬಗ್ಗೆ ನಾಗ ಚೈತನ್ಯ ಹಾಗೂ ಸಮಂತಾ ಪ್ರಭು ಬರೆದುಕೊಂಡಿದ್ದರು. ಇದು ಅಭಿಮಾನಿಗಳಿಗೆ ಬಾರೀ ನೋವನ್ನುಂಟು ಮಾಡಿತ್ತು. ತೆಲುಗು ಚಿತ್ರರಂಗದ ಅತ್ಯಂತ ಫೇವರಿಟ್​ ಜೋಡಿ ಎನಿಸಿದ್ದ ಸಮಂತಾ ಹಾಗೂ ನಾಗಚೈತನ್ಯರ ಈ ನಿರ್ಧಾರವನ್ನು ತಿಳಿದು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.

ಸಮಂತಾ ಹಾಗೂ ನಾಗಚೈತನ್ಯ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ದಂಪತಿಯಾಗಿ ಇದ್ದಷ್ಟು ದಿನವೂ ಈ ಜೋಡಿ ಸೋಶಿಯಲ್​ ಮೀಡಿಯಾಗಳಲ್ಲಿ ಜೊತೆಯಾಗಿರುವ ಫೋಟೋಗಳನ್ನು ಶೇರ್​ ಮಾಡುತ್ತಿದ್ದರು. ಸಮಂತಾ ತಮ್ಮ ಸಂದರ್ಶನಗಳಲ್ಲಿ ನಾಗಚೈತನ್ಯರ ಬಗ್ಗೆ ಮಾತನಾಡದೇ ಇರುತ್ತಲೇ ಇರಲಿಲ್ಲ. ಹಳೆಯ ಸಂದರ್ಶನವೊಂದರಲ್ಲಿ ನಟಿ ಸಮಂತಾ ನನ್ನ ಭಯಾನಕ ತಪ್ಪುಗಳನ್ನು ನೋಡಿದ ಬಳಿಕವೂ ನಾಗಚೈತನ್ಯ ನನ್ನನ್ನು ವರಸಿದ್ದಾರೆ ಎಂದು ಹೇಳಿಕೊಂಡಿದ್ದರು.

ಫೀಟ್​ ಅಪ್​ ವಿತ್​ ದಿ ಸ್ಟಾರ್ಸ್​ ತೆಲುಗು ಆವೃತ್ತಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ನಟಿ ಸಮಂತಾ ತನ್ನ ಬಳಿ ಹಣವಿಲ್ಲದ ಸಂದರ್ಭದಲ್ಲಿ ನಾಗಚೈತನ್ಯ ಎಷ್ಟೆಲ್ಲ ಸಹಾಯ ಮಾಡಿದ್ದಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ನನ್ನ ಬಳಿ ಹಣವಿಲ್ಲದ ಸಮಯದಲ್ಲಿ ನಾಗಚೈತನ್ಯ ನನ್ನ ತಾಯಿಗೆ ಕರೆ ಮಾಡಲು ನೆರವಾಗಿದ್ದರು. ನಾಗಚೈತನ್ಯ ನಿಜಕ್ಕೂ ಒಬ್ಬ ಹಸ್ಬೆಂಡ್​ ಮಟಿರೀಯಲ್​ ಎಂದು ಸಮಂತಾ ಹೇಳಿದ್ದಾರೆ.
ನಾಗಚೈತನ್ಯ ಒಬ್ಬ ಹಸ್ಬೆಂಡ್​ ಮಟಿರೀಯಲ್​. ನನ್ನ ಬಳಿ ಏನೂ ಇಲ್ಲದೇ ಇದ್ದ ಸಮಯದಿಂದಲೂ ಚೈತನ್ಯ ನನ್ನನ್ನು ನೋಡುತ್ತಾ ಬಂದಿದ್ದಾರೆ. ನನ್ನ ಬಳಿ ತಾಯಿಗೆ ಫೋನ್​ ಮಾಡಲೂ ಸಹ ಹಣವಿರಲಿಲ್ಲ. ನಾನು ನಾಗಚೈತನ್ಯ ಫೋನ್​ನ್ನು ತೆಗೆದುಕೊಂಡು ತಾಯಿಗೆ ಕರೆ ಮಾಡಿದ್ದೆ. ಚೈತನ್ಯ ನನ್ನನ್ನು ಆ ದಿನಗಳಿಂದ ಈ ದಿನಗಳವರೆಗೆ ನೋಡಿದ್ದಾರೆ. ಉಳಿದವರಿಗೆ ನನ್ನ ಜೀವನದ ಅರ್ಧಭಾಗ ಮಾತ್ರ ತಿಳಿದಿದೆ. ನಾನು ಜೀವನದಲ್ಲಿ ಅತ್ಯಂತ ದೊಡ್ಡ ತಪ್ಪುಗಳನ್ನು ಮಾಡಿದ್ದನ್ನೂ ನಾಗಚೈತನ್ಯ ನೋಡಿದ್ದಾರೆ ಎಂದು ಸಮಂತಾ ಹೇಳಿಕೊಂಡಿದ್ದರು.

ಕಳೆದ ತಿಂಗಳು ನಾಗಚೈತನ್ಯರಿಂದ ಬೇರ್ಪಟ್ಟಿರುವ ಬಗ್ಗೆ ಘೋಷಣೆ ಮಾಡಲು ಶೇರ್​ ಮಾಡಿದ್ದ ಇನ್​ಸ್ಟಾಗ್ರಾಂ ಪೋಸ್ಟ್​ನ್ನು ಸಮಂತಾ ಡಿಲೀಟ್​ ಮಾಡಿದ್ದರು. ಇದರಿಂದಾಗಿ ಇವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇನ್ನು ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ನಟಿ ಸಮಂತಾ ರುತ್​ ಪ್ರಭು ಕೊನೆಯ ಬಾರಿಗೆ ಅಲ್ಲು ಅರ್ಜುನ್​ ಸ್ಟಾರರ್​​ ಪುಷ್ಪಾ: ದಿ ರೈಸ್​ ಸಿನಿಮಾದ ಊ ಅಂಟಾವಾ ಮಾವ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ : ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗೌತಮ್​ ಅದಾನಿ

ಇದನ್ನೂ ಓದಿ : ಶಾಲೆಯಲ್ಲಿ ಹಿಜಾಬ್‌ ಕೇಳುವವರು, ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ಕೊಡಿ : ಸಚಿವ ಸುನೀಲ್‌ ಕುಮಾರ್‌

When Samantha Ruth Prabhu revealed estranged husband Naga Chaitanya helped her when she didn’t have money to make a call

Comments are closed.