ಮಂಗಳೂರು : ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ : ಕೊಲೆ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನ
ಮಂಗಳೂರು : ಮಹಿಳೆಯೋರ್ವರನ್ನು ತನ್ನ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿ, ನಂತರ ಮದುವೆಯಾಗುವಂತೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬಾತನೇ ಬಂಧನಕ್ಕೆ ಒಳಗಾದ ಆರೋಪಿ. ಪತಿಯಿಂದ ವಿಚ್ಚೇಧನ ಪಡೆದಿದ್ದ ಮಹಿಳೆಯೋರ್ವರು ಪ್ರತ್ಯೇಕವಾಗಿ ವಾಸಿಸಲು ಬಾಡಿಗೆ ಮನೆಯೊಂದರ ಹುಡುಕಾಟ ನಡೆಸಿದ್ದಾರೆ. ನಂತರದಲ್ಲಿ ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬಾತನಿಂದ ಬಾಡಿಗೆ ಮನೆಯೊಂದನ್ನು ಪಡೆದುಕೊಂಡಿದ್ದಾರೆ. ಅಂತೆಯೇ ಮಹಿಳೆ ತನ್ನ ಬಟ್ಟೆಯನ್ನು ರೂಂನಲ್ಲಿ ಇಟ್ಟು ಬಂದಿದ್ದರು.
ಇದನ್ನೂ ಓದಿ : ಪ್ರಜ್ಞೆ ತಪ್ಪಿಸಿ ಅಶ್ಲೀಲ ವಿಡಿಯೋ ಶೂಟ್ : ಹನಿಟ್ರ್ಯಾಪ್ ಮಾಡಿ ಸಿಕ್ಕಿ ಬಿದ್ರು ಗೆಳೆಯ, ಗೆಳತಿ
ನಂತರದಲ್ಲಿ ಮಹಿಳೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೂಮ್ ಗೆ ಆಕೆ ತೆರಳಿರಲಿಲ್ಲ. ಹೀಗಾಗಿ ಪ್ರಶಾಂತ್ ಅಪ್ಪು ಮಹಿಳೆಗೆ ನಿರಂತರವಾಗಿ ಕರೆ ಮಾಡಿ ಬಟ್ಟೆಯನ್ನು ಕೊಂಡು ಹೋಗುವಂತೆ ತಿಳಿಸಿದ್ದಾನೆ. ಕೊನೆಗೆ ತಾನೇ ಬಟ್ಟೆಗಳನ್ನು ತೆಗೆದುಕೊಂಡು ನಿನ್ನ ಮನೆಗೆ ಬರುತ್ತೇನೆ ಎಂದಿದ್ದಾನೆ. ಮಹಿಳೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಆರೋಪಿ ತನ್ನ ಕಾರಿನಲ್ಲಿ ಬಟ್ಟೆಯನ್ನು ತಂದಿರಲಿಲ್ಲ. ನೀವೇ ಬಂದು ತೆಗೆದುಕೊಂಡು ಹೋಗಿ ಎಂದು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ.
ಇದನ್ನೂ ಓದಿ : ಒಬ್ಬಳೇ ಮನೆಗೆ ಬಾ ಎಂದ ಪೊಲೀಸಪ್ಪ : ಬಾಲಕಿ ದೂರು, ಪೊಲೀಸ್ ಹೆಡ್ಕಾನ್ಸ್ಸ್ಟೇಬಲ್ ಅರೆಸ್ಟ್
ಮಾರ್ಗ ಮಧ್ಯದಲ್ಲಿ ನಿರ್ಜನ ಪ್ರದೇಶದಲ್ಲಿ ಆರೋಪಿ ಮಹಿಳೆಯ ಮೇಲೆ ಕಾರಿನಲ್ಲಿಯೇ ಅತ್ಯಾಚಾರವೆಸಗಿದ್ದಾನೆ. ನಂತರ ಪದೇ ಪದೇ ಕರೆ ಮಾಡಿ ಮದುವೆಯಾಗುವಂತೆ ಒತ್ತಾಯಿಸಿ ದ್ದಾನೆ. ಆದರೆ ಮಹಿಳೆ ಮದುವೆಯ ಪ್ರಸ್ತಾಪ ನಿರಾಕರಿಸಿದಾಗ ತನ್ನ ಮೇಲೆ ಕೊಲೆ ಬೆದರಿಕೆಯೊಡ್ಡಿದ್ದಾನೆ ಅಂತಾ ಮಹಿಳೆ ಪಾಂಡೇಶ್ವರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
Comments are closed.