ಬೆಂಗಳೂರಿನಲ್ಲಿ ಭಯಾನಕ ಘಟನೆ : ಬಿಯರ್‌ ಬಾಟಲಿಯಿಂದ ಹೊಡೆದು ರೌಡಿಶೀಟರ್‌ ಹತ್ಯೆ

ಬೆಂಗಳೂರು : (Bangalore rowdy sheeter killed) ರಾಜ್ಯದಲ್ಲಿ ಚುನಾವಣೆಗೆ ತಯಾರಿ ನಡೆಸಿಕೊಳ್ಳಲಾಗುತ್ತಿದೆ. ಈ ಮಧ್ಯೆಯೇ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ರೌಡಿಶೀಟರ್‌ ಒಬ್ಬನ ಹತ್ಯೆಯಾಗಿದ್ದು, ಸುಬ್ರಹ್ಮಣ್ಯಪುರದ ರೌಡಿಶೀಟರ್‌ ಶಿವರಾಜ್‌ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬೆಂಗಳೂರಿನ ಉತ್ತರಹಳ್ಳಿಯ ಬಾರ್‌ ಒಂದರಲ್ಲಿ ಇಬರು ರೌಡಿಶೀಟರ್‌ ಗಳು ಕಂಠಪೂರ್ತಿ ಕುಡಿದಿದ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ನಂತರ ಮಾತು ಜಗಳಕ್ಕೆ ತಿರುಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ರೌಡಿಶೀಟರ್‌ ಮಂಜ ಎನ್ನುವಾತ ಶಿವರಾಜ್‌ ತಲೆಗೆ ಬಿಯರ್‌ ಬಾಟಲ್‌ ನಿಂದ ಹೊಡೆದಿದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಬಿಯರ್‌ ಬಾಟಲ್‌ ನಿಂದ ತಲೆಗೆ ಹೊಡೆದ ಪರಿಣಾಮ ರೌಡಿಶೀಟರ್‌ ಶಿವರಾಜ್‌ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪೊಲಾರ್‌ ಕಿರಿಕ್‌ ನಿಂದಾಗಿ ಈ ಕೊಲೆ ನಡೆದಿದ್ದು, ಆರೋಪಿ ರೌಡಿಶೀಟರ್‌ ಮಂಜ ಪರಾರಿಯಾಗಿದ್ದಾನೆ. ಇದೀಗ ಕೊಲೆ ಘಟನೆ ಸಂಬಂದ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಮಂಜನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಿಲಿಕಾನ್‌ ಸಿಟಿ ದಿನೇ ದಿನೇ ತನ್ನ ಭಯಾನಕತೆಯನ್ನು ತೆರೆದುಕೊಳ್ಳುತ್ತಿದೆ. ಹಾಡಹಗಲೇ ಕೊಲೆ, ಸುಲಿಗೆ ದರೋಡೆ ಹೀಗೆ ಪ್ರಕರಣಗಳಲ್ಲಿ ಏರಿಕೆಯನ್ನೇ ಕಾಣುತ್ತಿದೆ ಹೊರತು ಕೊಲೆ ಸುಲಿಗೆಯಂತಹ ಪ್ರಕರಣಗಳು ಇಳಿಕೆಯಾಗುತ್ತಿಲ್ಲ. ಮಹಿಳೆಯರಿಗೆ ಸುರಕ್ಷತೆಯೇ ಇಲ್ಲ, ಎಲ್ಲೆಂದರಲ್ಲಿ ಅತ್ಯಾಚಾರ ಪ್ರಕರಣಗಳು, ಗ್ಯಾಂಗ್‌ ಗಳ ನಡುವೆಯೇ ಹೊಡೆದಾಟ, ರೌಡಿಶೀಟರ್‌ ಗಳ ಹತ್ಯೆ, ರಸ್ತೆಗಳ ಮಧ್ಯದಯಲ್ಲಿಯೇ ಬರ್ಬರ ಹತ್ಯೆಗಳಂತಹ ಘಟನೆಗಳು ನಡೆಯುತ್ತಿದ್ದು, ಸಿಲಿಕಾನ್‌ ಸಿಟಿ ಕ್ರೈಮ್‌ ಸಿಟಿಯಾಗಿ ಮಾರ್ಪಟ್ಟಿದೆ. ಮೊದಲೇ ಬೆಂಗಳೂರು ಎಂದರೆ ಹೆದರುವ ಮಂದಿ ದಿನೇ ದಿನೇ ಈ ರೀತಿಯ ಪ್ರಕರಣಗಳನ್ನು ಕೇಳುತ್ತಿದ್ದರೆ ಇನ್ನಷ್ಟು ಭಯ ಬೀಳುವುದರಲ್ಲಿ ಮಾತಿಲ್ಲ.

ಇದನ್ನೂ ಓದಿ : ಸಾಲಿಗ್ರಾಮ : ಮಾಲೀಕನ ಎದುರಲ್ಲೇ ಸ್ಕೂಟರ್‌ ಕದ್ದ ಕಳ್ಳ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು : Video

ಇದನ್ನೂ ಓದಿ : ಬೈಂದೂರು : ಕೊಸಳ್ಳಿ ಫಾಲ್ಸ್‌ ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

ಇದನ್ನೂ ಓದಿ : Rape case- lady died: ಅತ್ಯಾಚಾರವೆಸಗಿ ಮಹಿಳೆಗೆ ಬೆಂಕಿ ಹಚ್ಚಿದ ಕಾಮುಕ : ಚಿಕಿತ್ಸೆ ಫಲಿಸದೇ ಮಹಿಳೆ ಸಾವು

Bangalore rowdy sheeter killed: Horrific incident in Bangalore: Rowdy sheeter killed by hitting with beer bottle

Comments are closed.