Mangalore : ಅಧ್ಯಾಪಕಿಯ ಮಾಂಗಲ್ಯ ಸರ ಕದ್ದ ಬಿಸಿಎ ಪದವೀಧರ : ಬಂಧನ

ಮಂಗಳೂರು : ಶಿಕ್ಷಕಿಯೋರ್ವರು ಶಾಲೆಗೆ ತೆರಳುತ್ತಿದ್ದ ವೇಳೆಯಲ್ಲ ಕತ್ತಿನಲ್ಲಿದ್ದ ಸರವನ್ನು ಕಳವು ಮಾಡಿದ್ದ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಇದೀಗ ಬಿಸಿಎ ಪದವೀಧರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿಕ್ಷಕಿಯ ಸರ ಕಳವು ಮಾಡಿರುವ ಆತನನ್ನು ಚಿಕ್ಕಮಗಳೂರಿನ ಶ್ರೇಯಸ್ ಎಂದು ಗುರುತಿಸಲಾಗಿದೆ. 2019ನೇ ವರ್ಷದಲ್ಲಿ ಸುರತ್ಕಲ್ ಕಾಲೇಜಿನ ಬಿಸಿಎ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. ಶ್ರೇಯಸ್‌ ಕೆಲಸ ಸಿಗದೆ ನಿರುದ್ಯೋಗಿಯಾಗಿದ್ದು ಈ ಕಾರ್ಯಕ್ಕೆ ಕೈ ಹಾಕಿದ್ದಾನೆ ಎನ್ನಲಾಗುತ್ತಿದೆ.

ಇದನ್ನೂ ಓದು : ಫೇಸ್‌ಬುಕ್‌ನಲ್ಲಿ ಪರಿಚಯ, ದೋಖಾ : ಉಡುಪಿಯ ಮಹಿಳೆ ಕಳೆದುಕೊಂಡಿದ್ದು 19 ಲಕ್ಷ

ಆಗಸ್ಚ್ 4 ರಂದು ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾ ಅವರು ಶಾಲೆಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಕತ್ತಿನಲ್ಲಿದ್ದ 2 ಪವನ್ ತೂಕದ ಮಾಂಗಲ್ಯ ಸರವನ್ನು ಕಳವು ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡ ಸುರತ್ಕಲ್‌ ಠಾಣೆಯ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ ವೇಳೆಯಲ್ಲಿ ಶ್ರೇಯಸ್‌ ಚಹರೆ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮೂಲದ ಶ್ರೇಯಸ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಎ ಪದವೀಧರ ಉದ್ಯೋಗ ಸಿಗದೆ ಕಳ್ಳತನಕ್ಕೆ ಇಳಿದಿರೋದು ದುರಂತವೇ ಸರಿ.

Comments are closed.