ಕುಡಿದ ಮತ್ತಿನಲ್ಲಿ ಹೊಡೆದು ಪತ್ನಿಯನ್ನೇ ಕೊಂದ ಪತಿರಾಯ !

ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ಪತಿಯೋರ್ವ ಮರದ ತುಂಡಿನಿಂದ ಹೊಡೆದು ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಕುಟ್ಟಿಚಾರು ಎಂಬಲ್ಲಿ ನಡೆದಿದೆ.

ಕೇರಳ ಮೂಲದ ಇರುಟ್ಟ ಮೂಲದ ಸೌಮ್ಯಾ ಜಾನ್ಸನ್ ಎಂಬವರೇ ಕೊಲೆಯಾದ ದುರ್ದೈವಿ. ಸೌಮ್ಯ ಜಾನ್ಸನ್ ಕಳೆದ ಕೆಲ ವರ್ಷಗಳಿಂದಲೂ ಪತಿ ಜಾನ್ಸನ್ ಜೊತೆಗೆ ಬೆಳ್ತಂಗಡಿ ತಾಲೂಕಿನ ಕುಟ್ಟಿಚಾರು ಗ್ರಾಮದಲ್ಲಿ ವಾಸವಾಗಿದ್ದರು. ರಬ್ಬರ್ ಟಾಪಿಂಗ್ ಕೆಲಸ ಮಾಡ್ತಿದ್ದ ಜಾನ್ಸನ್ ನಿತ್ಯವೂ ಕುಡಿದು ಬಂದು ಪತ್ನಿಯ ಮೇಲೆ ಸಂಶಯಗೊಂಡು ಹೊಡೆಯುತ್ತಿದ್ದ. ನಿನ್ನೆ ರಾತ್ರಿ ಕೂಡ ವಿಪರೀತವಾಗಿ ಕುಡಿದು ಬಂದಿದ್ದ ಜಾನ್ಸನ್ ಮರದ ತುಂಡಿನಿಂದ ಸೌಮ್ಯಳ ಮೇಲೆ ಹಲ್ಲೆ ನಡೆಸಿದ್ದಾನೆ.

ಮರದ ತುಂಡಿನಿಂದ ಸೌಮ್ಯಳ ಹಣೆಯ ಭಾಗಕ್ಕೆ ಹೊಡೆದಿದ್ದಾನೆ. ಅಲ್ಲದೇ ತಲೆಯ ಹಿಂಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾನೆ. ಸದಾ ಸಂಶಯದಿಂದಲೇ ಪತ್ನಿಯೊಂದಿಗೆ ಜಗಳಕ್ಕೆ ಇಳಿಯುತ್ತಿದ್ದ ಜಾನ್ಸನ್ , ನಿನ್ನೆಯೂ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತರಳಿ ಕೊಲೆಯಲ್ಲಿ ಅಂತ್ಯಕಂಡಿದೆ.

ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ ಬಿಜಿ ಹಾಗೂ ಧರ್ಮಸ್ಥಳ ಎಸ್ಸೈ ಪವನ್ ಇವರ ತಂಡ ಘಟನೆ ನಡೆದ ಸ್ಥಳಕ್ಕೆ ಆ ಕೂಡಲೇ ಧಾವಿಸಿದ್ದರು. ಪೋಲಿಸರ ತಂಡವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಏಟು ಬಿದ್ದ ಸೌಮ್ಯ ಜಾನ್ಸನ್ ಗಳನ್ನು ಮೊದಲು ಬೆಳ್ತಂಗಡಿ ಯಲ್ಲಿ ಆಸ್ಪತ್ರೆಗೆ ತೋರಿಸಲಾಗಿತ್ತು. ಅಲ್ಲಿಂದ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಸೂಚಿಸಲಾಯಿತು. ಆದರೆ ಮಾರ್ಗ ಮಧ್ಯದಲ್ಲಿ ಆಕೆ ಮೃತಪಟ್ಟಿದ್ದಾರೆ. ಸೌಮ್ಯ ಜಾನ್ಸನ್ ಸಹೋದರ ಸನೋಜ್ ಫ್ರಾನ್ಸಿಸ್ ಕುತ್ರೊಟ್ಟು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

.

Comments are closed.