Lovers suicide case: ಆರು ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಿಸಿತ್ತು ಆ ಒಂದು ಕೇಸ್‌

ಚಿಕ್ಕಮಗಳೂರು: (Lovers suicide case) ಪ್ರೇಮಿಗಳಿಬ್ಬರು ಒಂದೇ ವೇಲ್‌ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಆದರೆ ಅದಕ್ಕೆ ನಿಖರ ಕಾರಣಗಳು ಏನೆಂಬುದು ತಿಳಿದಿರಲಿಲ್ಲ. ಇದೀಗ ಅವರ ಆರು ವರ್ಷದ ಪ್ರೀತಿಯಲ್ಲಿ ಬಿರುಕು ಮೂಡಲು ಆ ಒಂದು ಕೇಸ್‌ ಕಾರಣವಾಗಿತ್ತು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಹೌದು.. ಆರು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Lovers suicide case) ಮಾಡಿಕೊಂಡಿದ್ದರು. ಇದಕ್ಕೆ ಕಾರಣವಾಗಿದ್ದು ಒಂದು ಕೇಸ್.‌ ಪೂರ್ವಿಕ ಮತ್ತು ದರ್ಶನ್‌ ಇಬ್ಬರು ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಮನೆಯವರ ಒಪ್ಪಿಗೆ ಕೂಡ ಇತ್ತು. ಐದು ವರ್ಷದ ಬಳಿಕ ಮದುವೆ ಮಾಡುವುದಾಗಿ ಮನೆಯವರು ಭರವಸೆ ಕೂಡ ನೀಡಿದ್ದರು.

ಆದರೆ ಒಂದು ತಿಂಗಳ ಹಿಂದೆ ದರ್ಶನ್‌ ವಿರುದ್ದ ಚಿಕ್ಕಮಗಳೂರಿನ ಮಲ್ಲಂದೂರು ಠಾಣೆಯಲ್ಲಿ ದಾಖಲಾಗಿದ್ದ ಅದೊಂದು ಪ್ರಕರಣ ಅವರಿಬ್ಬರ ಮಧ್ಯೆ ಬಿರುಕು ಮೂಡಿಸಿತ್ತು. ದರ್ಶನ್‌ ನಿಂದ ತನಗೆ ಮೋಸ ಆಗಿರುವುದಾಗಿ, ಅವನಿಂದಲೇ ತಾನು ಗರ್ಭಿಣಿಯಾಗಿರುವುದಾಗಿ ಯುವತಿಯೋರ್ವಳು ದೂರು ನೀಡಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಪೂರ್ವಿಕಾ ಆಘಾತಕ್ಕೊಳಗಾಗಿದ್ದಾಳೆ. ಆದರೆ ಈ ಪ್ರಕರಣದಲ್ಲಿ ತನ್ನದು ಯಾವುದೇ ತಪ್ಪಿಲ್ಲ. ಬೇಕಾದರೆ ಡಿಎನ್​ಎ ಟೆಸ್ಟ್ ಮಾಡಿಸಿ ಎಂದು ದರ್ಶನ್ ತನ್ನ ಅಸಾಹಯಕತೆಯನ್ನು ಹೇಳಿಕೊಂಡಿದ್ದನು.

ಆದರೆ ದರ್ಶನ್‌ ಎಷ್ಟು ಅಸಾಹಯಕನಾಗಿದ್ದನು ಎಂದರೇ ದೂರು ನೀಡಿದ ಯುವತಿಯನ್ನೇ ಮದುವೆಯಾಗುವ ಪರಿಸ್ಥಿತಿ ಆತನಿಗೆ ನಿರ್ಮಾಣವಾಗಿತ್ತು. ಈಚೆಗೆ ಪೂರ್ವಿಕಾಗೆ ದರ್ಶನ್‌ ನನ್ನು ಬಿಟ್ಟು ಬದುಕಲು ಆಗುವುದಿಲ್ಲ ಎಂಬ ಮಟ್ಟಿಗೆ ಆಕೆ ಆತನನ್ನು ಪ್ರೀತಿಸಿದ್ದಳು. ಹೀಗಾಗಿ ದರ್ಶನ್ ನನ್ನು ಬೇಟಿಯಾಗಲೇಂದು ಪೂರ್ವಿಕಾ ಚಿಕ್ಕಮಗಳೂರಿಗೆ ಬಂದಿದ್ದಾಳೆ. ಆದರೆ ಅಲ್ಲಿ ಇಬ್ಬರ ಮಧ್ಯೆ ಏನು ಮಾತುಕತೆ ನಡೆಯಿತೋ ತಿಳಿದಿಲ್ಲ. ತನ್ನ ಅಪ್ಪ ಅಮ್ಮನಿಗೆ ಆತನನ್ನು ಬಿಟ್ಟು ಇರಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಎಂದು ವಾಯ್ಸ್‌ ಮೆಸೇಜ್‌ ಹಾಕಿ ಇಬ್ಬರು ಒಟ್ಟಿಗೆ ಒಂದೇ ವೇಲ್‌ ನಲ್ಲಿ ನೇಣಿಗೆ ಶರಣಾಗಿದ್ದಾರೆ.

ಆದರೆ ಚಿಕ್ಕಮಗಳೂರಿನಲ್ಲಿ ದೂರು ನೀಡಿದ್ದ ಯುವತಿ ಹೇಳುತ್ತಿರುವುದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದರ ಬಗ್ಗೆ ಅರಿವಿಲ್ಲ. ಅವಳ ಮಾತನ್ನೇ ನಂಬಿದ ದರ್ಶನ್‌ ತಂದೆ ತಾಯಿ ಯುವತಿಯ ಜೊತೆ ಮದುವೆ ಮಾಡಿಸಲು ಮುಂದಾಗಿ ಸಮಸ್ಯೆಯಿಂದ ಕೈತೊಳೆದುಕೊಳ್ಳಲು ಮುಂದಾಗಿದ್ದರು. ಇದರಿಂದ ಮನನೊಂದ ದರ್ಶನ್‌ ಅಸಾಹಯಕನಾಗಿ ತಾನು ಪ್ರೀತಿಸಿದ ಪೂರ್ವಿಕಾ ಜೊತೆಗೆ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ : Sexual harassment case: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ವಸತಿ ಶಾಲೆಯ ಪ್ರಾಂಶುಪಾಲ ಅರೆಸ್ಟ್

(Lovers suicide case) An incident where two lovers committed suicide by hanging themselves from the same veil took place in Chikkamagalur. But the exact reasons were not known. It has been revealed during the investigation that that one case was the reason for the rift in their six-year-old love.

Comments are closed.