property controversy : ಒಡಹುಟ್ಟಿದ ತಮ್ಮನನ್ನೇ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾದ ಅಣ್ಣ..!

ವಿಜಯನಗರ : ಹುಟ್ತಾ ಹುಟ್ತಾ ಅಣ್ಣ – ತಮ್ಮಂದಿರು . ಬೆಳೀತಾ ಬೆಳೀತಾ ದಾಯಾದಿಗಳು ಎಂಬ ಗಾದೆ ಮಾತೊಂದಿದೆ. ಸಾಕಷ್ಟು ಮಂದಿಯ ಜೀವನದಲ್ಲಿ ಈ ಮಾತು ನಿಜ ಕೂಡ ಆಗಿದೆ. ಒಂದೇ ಮನೆಯಲ್ಲಿ ಹುಟ್ಟಿ – ಬೆಳೆದು ಒಂದೇ ಸುಖ ದುಃಖಗಳನ್ನು ಕಂಡಿದ್ದರೂ ಸಹ ದೊಡ್ಡವರಾದ ಮೇಲೆ ಆಸ್ತಿ ವಿಚಾರವಾಗಿ ಸಹೋದರರು ದ್ವೇಷಿಗಳಾದ ಸಾಕಷ್ಟು ಪ್ರಕರಣಗಳನ್ನು ನಾವು ಕಂಡಿದ್ದೇವೆ. ಇದೀಗ ಇದೇ ಮಾತಿಗೆ ಮತ್ತೊಂದು ಪ್ರತ್ಯಕ್ಷ ಉದಾಹರಣೆ ಎಂಬಂತೆ ವಿಜಯನಗರದ ಹಗರಿಬೊಮ್ಮನಹಳ್ಳಿ ತಾಲೂಕಿನ ಕೊಂಡೇನಹಳ್ಳಿ ಗ್ರಾಮದಲ್ಲಿ ಸ್ವಂತ ಅಣ್ಣನೊಬ್ಬ ತನ್ನ ತಮ್ಮನನ್ನು ಬರ್ಬರವಾಗಿ ಕೊಲೆ(property controversy) ಮಾಡಿದ್ದಾನೆ.


ಅಣ್ಣ ಹಾಗೂ ತಮ್ಮಂದಿರ ನಡುವೆ ಆಸ್ತಿ ವಿಚಾರವಾಗಿ ವೈಷಮ್ಯ ಮೂಡಿತ್ತು. ಇದೇ ಹಗೆಯನ್ನು ಮುಂದುವರಿಸಿದ ಅಣ್ಣ ತಮ್ಮನನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ . ಮೃತ ವ್ಯಕ್ತಿಯನ್ನು 66 ವರ್ಷದ ಭರಮಪ್ಪ ಎಂದು ಗುರುತಿಸಲಾಗಿದೆ. ಅಣ್ಣ ಉಲವತ್ತಿ ಸೋಮಪ್ಪ ಹಾಗೂ ಕೊಲೆಯಾದ ತಮ್ಮ ಭರಮಪ್ಪ ನಡುವೆ ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಅನೇಕ ವರ್ಷಗಳಿಂದ ಜಟಾಪಟಿ ನಡೆಯುತ್ತಿತ್ತು ಎನ್ನಲಾಗಿದೆ.


ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ವೈಷಮ್ಯ ಮೂಡಿಸಿಕೊಂಡಿದ್ದ ಅಣ್ಣ – ತಮ್ಮಂದಿರು ಆಸ್ತಿಗಾಗಿ ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಆದರೂ ಇಬ್ಬರ ನಡುವೆ ಯಾವುದೇ ರಾಜಿ ಸಂಧಾನ ಆಗುವಂತೆ ಮಾತ್ರ ಕಾಣುತ್ತಿರಲಿಲ್ಲ. ಇದೇ ವಿಚಾರವಾಗಿ ತಮ್ಮ ಭರಮಪ್ಪನ ಮೇಲೆ ದ್ವೇಷವನ್ನು ತುಂಬಿಕೊಂಡಿದ್ದ ಅಣ್ಣ ಉಲವತ್ತಿ ಸೋಮಪ್ಪ ತಮ್ಮ ಭರಮಪ್ಪನನ್ನು ಕುಡುಗೋಲಿನಿಂದ ಕೊಚ್ಚಿ ಕೊಂದು ಬಳಿಕ ತಾನೇ ಪೊಲೀಸ್​ ಠಾಣೆಗೆ ತೆರಳಿ ಪೊಲೀಸ್​ ಅಧಿಕಾರಿಗಳ ಎದುರು ತಪ್ಪೊಪ್ಪಿಕೊಳ್ಳುವ ಮೂಲಕ ಶರಣಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಉಲವತ್ತಿ ಸೋಮಪ್ಪನನ್ನು ಬಂಧಿಸಿದ ಪೊಲೀಸರು ಸ್ಥಳಕ್ಕೆ ತೆರಳಿ ಭರಮಪ್ಪನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ತಂಬ್ರಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Andhra Pradesh Shocker : 8 ತಿಂಗಳು, 80 ಮಂದಿ ಕಾಮುಕರು..! ಗ್ಯಾಂಗ್​ರೇಪ್​ಗೊಳಗಾಗುತ್ತಿದ್ದ ಬಾಲಕಿಯ ಕರುಣಾಜನಕ ಕತೆಯಿದು..!

ಇದನ್ನೂ ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

property controversy elder brother who killed his brother

Comments are closed.