ರೇಣುಕಾಸ್ವಾಮಿ ಕೊಲೆ ಪ್ರಕರಣ : ಕೊಲೆ ಕೇಸ್​ನಿಂದ ಕೈಬಿಡುವಂತೆ ಹೈಕೋರ್ಟ್ ಮೆಟ್ಟಿಲೇರಿದ ಡಿ ಗ್ಯಾಂಗ್​ ಸದಸ್ಯ

Renukaswamy murder case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲೂಟ ಅನುಭವಿಸುತ್ತಿರುವ ದರ್ಶನ್​ ಗ್ಯಾಂಗ್​ನ ಸದಸ್ಯರೊಬ್ಬರು ಈ ಪ್ರಕರಣದಿಂದ ತನ್ನನ್ನು ಕೈಬಿಡುವಂತೆ ಆಗ್ರಹಿಸಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ […]

Renukaswamy murder case D gang member moves High Court to drop murder case

Renukaswamy murder case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲೂಟ ಅನುಭವಿಸುತ್ತಿರುವ ದರ್ಶನ್​ ಗ್ಯಾಂಗ್​ನ ಸದಸ್ಯರೊಬ್ಬರು ಈ ಪ್ರಕರಣದಿಂದ ತನ್ನನ್ನು ಕೈಬಿಡುವಂತೆ ಆಗ್ರಹಿಸಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್​ , ನೀವಾಗಿಯೇ ಅರ್ಜಿ ಹಿಂಪಡೆದರೆ ಒಳ್ಳೆಯದು.ಇಲ್ಲವಾದಲ್ಲಿ ನಾವೇ ಅರ್ಜಿ ವಜಾಗೊಳಿಸುತ್ತೇವೆ ಎಂದಿದೆ.

ಈ ಪ್ರಕರಣದ 14ನೇ ಆರೋಪಿ ಎನಿಸಿರುವ ಪ್ರದೋಶ್​ ಎಸ್​.ರಾವ್​ ಈ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ತಮ್ಮ ಮೇಲೆ ಹೊರಿಸಿರುವ ಆರೋಪಗಳಿಂದ ತಮ್ಮನ್ನು ಕೈಬಿಡಬೇಕು ಎಂದು ಆಗ್ರಹಿಸಿ ರಾಜ್ಯ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್​ನಲ್ಲಿ ನಿಮ್ಮ ಜಾಮೀನು ಅರ್ಜಿಯೇ ತಿರಸ್ಕೃತಗೊಂಡಿರುವಾಗ, ಕ್ರಿಮಿನಲ್​ ಪ್ರಕರಣದ ಹೊಣೆಗಾರಿಕೆಯಿಂದ ನೀವು ತಪ್ಪಿಸಿಕೊಳ್ಳಬಹುದು ಎಂದು ಹೇಗೆ ನಿರೀಕ್ಷೆ ಮಾಡಿದಿರಿ ? ಎಂದು ನ್ಯಾಯಮೂರ್ತಿಗಳು ಆರೋಪಿ ಪರ ವಕೀಲರನ್ನು ಪ್ರಶ್ನಿಸಿದ್ದಾರೆ.

Also Read: ಒಂದೇ ಅಂತಸ್ತನ್ನು 25 ಜನರಿಗೆ ಮಾರಿದ 32nd Avenue ಸಿಇಒ ಬಂಧನ!

ಹೈಕೋರ್ಟ್​ನಲ್ಲಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ, ಈ ಕೊಲೆ ಕೇಸ್​ ಸಂಬಂಧ ಜನವರಿ ತಿಂಗಳಲ್ಲಿಯೇ ಸಂಚು ನಡೆದಿತ್ತು. ಆದರೆ ಈ ಸಂಚಿನಲ್ಲಿ ಪ್ರದೋಶ್​ ಪಾತ್ರ ಇರಲಿಲ್ಲ. ಆದರೆ ಈ ಘಟನೆಯ ಅಂತ್ಯದಲ್ಲಿ ಮಾತ್ರ ಪ್ರದೋಶ್​ ಇದ್ದರು, ಹಾಗೂ ದರ್ಶನ್​ರಿಂದ 30 ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ ಎಂಬ ಆರೋಪ ಇವರ ಮೇಲಿದೆ.

ಹೀಗಾಗಿ ಈ ಕೊಲೆ ಕೇಸ್​ನಲ್ಲಿ ಪ್ರದೋಶ್​ರನ್ನು ದೋಷಮುಕ್ತ ಮಾಡದಿದ್ದರೂ ಆರೋಪಗಳಿಂದ ಸಡಿಲಿಕೆ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಬಳಿಕ ಹೈಕೋರ್ಟ್ ಜಡ್ಹ್​​ ಮಾತನ್ನು ಆಲಿಸಿದ ಪ್ರದೋಶ್​ ಪರ ವಕೀಲರು ಅರ್ಜಿ ಹಿಂಪಡೆಯಲು ಸಮ್ಮತಿ ಸೂಚಿಸಿದರು.

Scroll to Top