small child died: ನೀರಿನ ಬಕೆಟ್‌ ಗೆ ಬಿದ್ದು ಪ್ರಾಣ ಕಳೆದುಕೊಂಡ ಮುದ್ದು ಕಂದಮ್ಮ..!

ದಾವಣೆಗೆರೆ: (small child died) ಪೋಷಕರ ಅಜಾಗರೂಕತೆಯಿಂದ ನೀರು ತುಂಬಿದ ಬಕೆಟ್‌ ಗೆ ಬಿದ್ದು ಹತ್ತು ತಿಂಗಳ ಕಂದಮ್ಮ ಬಲಿಯಾದ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನಡೆದಿದೆ. ಮಂಜುನಾಥ್‌ ಹಾಗೂ ತಾರಾ ದಂಪತಿಯ ಪುತ್ರಿ ಅನುಸಾವ್ಯ ಮೃತಪಟ್ಟ ಹತ್ತು ತಿಂಗಳ ಮಗು ಎನ್ನಲಾಗಿದೆ.

ಎಂದಿನಂತೆ ಸಂಜೆ ಮಗು (small child died) ಮನೆಯ ಮುಂದೆ ಆಟವಾಡುತ್ತಿತ್ತು. ಅಲ್ಲಿಯೇ ಸಮೀಪದಲ್ಲಿ ನೀರು ತುಂಬಿದ ಬಕೆಟ್ ಕೂಡ ಇದ್ದು, ಅದರ ಬಳಿ ಹೋಗಿದೆ. ಅದನ್ನು ನೋಡುವ ಕುತೂಹಲದಲ್ಲಿ ಮಗು ಬಕೆಟ್‌ನೊಳಗೆ ಇಣುಕಿದೆ. ಹಿಡಿತ ತಪ್ಪಿದ ಮಗು ಬಕೆಟ್‌ ಗೆ ಬಿದ್ದು ಉಸಿರುಕಟ್ಟಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು. ಪೋಷಕರು ಗಾಬರಿಗೊಂಡು ಮಗುವನ್ನು ಎತ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಸಾವನ್ನಪ್ಪಿದೆ. ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ರಸ್ತೆ ಮಾರ್ಗ ಮಧ್ಯದಲ್ಲೇ ಮಗು ಅಸುನೀಗಿದೆ.

ಇದಕ್ಕೆ ಪೋಷಕರ ಅಜಾಗರೂಕತೆಯೇ ಅಕರಣ ಎನ್ನಲಾಗಿದೆ. ಕೇವಲ ಹತ್ತು ತಿಂಗಳ ಹೆಣ್ಣು ಮಗುವನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಯ ಕುರಿತು ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಪಂಚ ಜ್ಞಾನವಿಲ್ಲದ ಮಗುವಿನ ದುರಂತ ಅಂತ್ಯಕ್ಕೆ ಇಡೀ ಗ್ರಾಮವೇ ಕಣ್ಣೀರಿಡುತ್ತಿದೆ.

ಇದನ್ನೂ ಓದಿ : Terrible accident: ಕಾರು ಲಾರಿ ಭೀಕರ ಅಪಘಾತ :3 ಸಾವು, ಓರ್ವ ಗಂಭೀರ

ಇದನ್ನೂ ಓದಿ : Attack on boys: ಬೈಂದೂರು ಯುವಕರ ಮೇಲಿನ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಅಂಗಡಿ ಮಾಲೀಕ ಅರೆಸ್ಟ್

ಇದನ್ನೂ ಓದಿ : Attack on boys: ಬೈಂದೂರು ಯುವಕರ ಮೇಲಿನ ಹಲ್ಲೆ ಪ್ರಕರಣ: ಸುಪಾರಿ ಕೊಟ್ಟ ಅಂಗಡಿ ಮಾಲೀಕ ಅರೆಸ್ಟ್

(small child died) Due to the carelessness of the parents, a ten-month-old child fell into a bucket full of water and a tragic incident took place in Jagaluru taluk of Davangere district. Anusavya, the daughter of Manjunath and Tara, is said to have died as a ten-month-old child.

Comments are closed.