ನಿತ್ಯಭವಿಷ್ಯ : 08-09-2020

0

ಮೇಷರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲಬಾಧೆ, ಅಲೆದಾಟ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡು ಬರುವುದು. ಆರ್ಥಿಕವಾಗಿ ಸ್ವಾವಲಂಬಿಯಾಗುವಿರಿ. ಇತರರ ಕಷ್ಟನಷ್ಟಗಳಿಗೆ ಸ್ಪಂದಿಸಿರಿ. ಶ್ರೀದೇವರು ನಿಮಗೆ ಒಳ್ಳೆಯ ಅನುಕೂಲ ಕೊಟ್ಟಿರುತ್ತಾನೆ, ಅಕಾಲ ಭೋಜನ, ನಂಬಿಕೆ ದ್ರೋಹ, ದಾಂಪತ್ಯದಲ್ಲಿ ಪ್ರೀತಿ.

ವೃಷಭರಾಶಿ
ಹೊಸ ವ್ಯಕ್ತಿಗಳ ಪರಿಚಯ, ಮನಸ್ಸಿಗೆ ಸದಾ ಸಂಕಟ, ಮನಸ್ಸಿನಲ್ಲಿ ಆರೋಗ್ಯದ ಬಗ್ಗೆ ಚಿಂತೆ ಹಾಗೂ ತಳಮಳಗಳೇ ಹೆಚ್ಚು ಕಂಡು ಬರಲಿದೆ. ತುಂಬಾ ಚಿಂತಿಸದಿರಿ. ದೇವರು ಒಳ್ಳೆಯ ದಾರಿಯನ್ನು ಕರುಣಿಸಿಯಾನು. ಹಿಡಿದ ಕೆಲಸವನ್ನು ಮಾಡಿಯೇ ತಿರಿಸಿರಿ, ವಿನಾಕಾರಣ ನಿಷ್ಠುರ, ಕುಟುಂಬದ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಿ.

ಮಿಥುನರಾಶಿ
ಉತ್ತಮವಾದ ದೈಹಿಕ ಸಾಮರ್ಥ್ಯವು ನಿಮಗಿದೆ. ಆಟೋಟ ಸ್ಪರ್ಧೆಗಳಲ್ಲಿ ಮುಂದಾಳತ್ವವನ್ನು ವಹಿಸುವಿರಿ. ಸಾಧಿಸಿದರೆ ಸಬಲ ನುಂಗುವಿರಿ. ಹಾಗೇ ಛಲ ಬಿಡದೆ ಯಾವುದನ್ನೂ ಮಾಡಿಯೇ ಬಿಡಿರಿ, ನಿರೀಕ್ಷಿತ ಆದಾಯ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ದ್ರವ್ಯಲಾಭ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.

ಕಟಕರಾಶಿ
ಪತಿಯ ಬಗ್ಗೆ ಚಿಂತೆಬೇಡ. ನೌಕರಿ ಯಾ ವ್ಯಾಪಾರದಲ್ಲಿ ಏರಿಳಿತ ಇದ್ದೇ ಇರುತ್ತದೆ. ಅಲ್ಲದೆ ಸಾಮಾಜಿಕವಾಗಿ ಉತ್ತಮ ಸಂಬಂಧವನ್ನು ನೀವು ಇಟ್ಟುಕೊಂಡಿರುವಿರಿ. ಸ್ವಲ್ಪ ಕಷ್ಟದ ದಿನಗಳಿವು, ದೇವತಾಕಾರ್ಯದಲ್ಲಿ ಭಾಗಿ, ಬಿಡುವಿಲ್ಲದ ಕಾರ್ಯಕ್ರಮಗಳು, ಸ್ತ್ರೀ ಲಾಭ, ಮನಶಾಂತಿ, ಆತ್ಮೀಯರಿಂದ ಕಲಹ, ಧನಲಾಭ.

ಸಿಂಹರಾಶಿ
ಒಳ್ಳೆಯ ಸಮಯವಿದು. ಯಾವುದೇ ರೀತಿಯ ಚಿಂತೆಗೆ ಒಳಗಾಗದೆ ಬಂದುದನ್ನು ಬಂದ ಹಾಗೇ ಸ್ವೀಕರಿಸಿದರೆ ಉತ್ತಮ. ಕೆಟ್ಟದ್ದನ್ನು ಬಯಸದಿರಿ. ನಿಮಗೆ ಒಳಿತೇ ಕಂಡು ಬರುವುದು, ತಾಳ್ಮೆಯಿಂದ ನಿಭಾಯಿಸಿ, ಚಂಚಲ ಮನಸ್ಸು, ದ್ವಿಚಕ್ರ ವಾಹನ ಮಾರಾಟದವರಿಗೆ ಲಾಭ.

ಕನ್ಯಾರಾಶಿ
ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಒಳ್ಳೆಯ ಮೈಕಟ್ಟು, ಚತುರತೆ, ಮಾತಿನಲ್ಲಿ ಮೋಡಿ ಮಾಡುವ ನಿಮಗೆ ಎಲ್ಲಾ ದಿನಗಳಲ್ಲಿ ಇದು ನಡೆಯದು. ಹಾಗಾಗಿ ನಿಮ್ಮ ಮನೋಸ್ಥಿತಿಯನ್ನು ಬದಲಾಯಿಸಿಕೊಳ್ಳಿರಿ. ಇಲ್ಲದಿದ್ದರೆ ಪರಿಣಾಮ ಕೆಟ್ಟದಾದೀತು, ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ.

ತುಲಾರಾಶಿ
ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ತಕ್ಕಡಿಯಂತೆ ಹಾಗೊಮ್ಮೆ, ಹೀಗೊಮ್ಮೆ ಚಲಿಸುವ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿರಿ. ಪತ್ನಿಯ ಆಲೋಚನೆಗಳು ಶ್ರೇಯೋಭಿವೃದ್ಧಿಕರವಾದೀತು. ಮಕ್ಕಳು ನಿಮಗೆ ಬೆಂಬಲ ನೀಡುವರು, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮನಶಾಂತಿ.

ವೃಶ್ಚಿಕರಾಶಿ
ದಾಯಾದಿಗಳಿಂದ ಕೆಟ್ಟ ಮಾತುಗಳು ಕೇಳಿ ಬಂದಾವು. ಅದಕ್ಕೆ ತಲೆಕೆಡಿಸಿಕೊಳ್ಳದೆ ನಿಮ್ಮ ಕಾರ್ಯವನ್ನು ನೀವು ಮಾಡಿರಿ. ನಿಮಗೆ ಉತ್ತಮ ಫ‌ಲ ಸಿಗಲಿದೆ. ಪತ್ನಿಯ ಆರೋಗ್ಯದಲ್ಲಿ ಏರುಪೇರು, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಪತಿ-ಪತ್ನಿಯರ ಪ್ರೀತಿ ಸಮಾಗಮ, ಸಾಧಾರಣ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ.

ಧನಸ್ಸುರಾಶಿ
ವಸ್ತ್ರ ವ್ಯಾಪಾರಿಗಳಿಗೆ ಲಾಭ, ನೀವಿಂದು ಪತ್ನಿಯೊಂದಿಗೆ ಒಳ್ಳೆಯ ದಿನವನ್ನು ಸವಿಯುವಿರಿ. ವರ್ಗಾವಣೆಯಿಂದ ಬೇಸತ್ತ ನಿಮ್ಮ ಮನಸ್ಸಿಗೆ ಕೊಂಚ ಸಮಾಧಾನವು ದೊರಕೀತು. ಪತ್ನಿಯ ಸಂಬಂಧಿಕರಿಂದ ಸಹಾಯಹಸ್ತ ಸಿಗಲಿದೆ, ಮನಸ್ಸಿನ ನೆಮ್ಮದಿ ಹಾಳಾಗುವುದು, ಧರ್ಮ ಕಾರ್ಯಗಳಿಂದ ಮನಶಾಂತಿ.

ಮಕರರಾಶಿ
ತಂದೆ ತಾಯಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ. ಅವರು ಸುರಕ್ಷಿತವಾಗಿರುವರು. ನಿಮ್ಮ ಭವಿಷ್ಯದ ಬಗ್ಗೆ ನಿಮಗೆ ಚಿಂತೆ ಕಾಡಲಿದೆ. ಆರ್ಥಿಕವಾಗಿ ಎಷ್ಟಿದ್ದರೂ ಸಾಲದೆಂಬಂತ್ತಿರುತ್ತದೆ, ಮಕ್ಕಳ ಪ್ರತಿಭೆಗೆ ಮಾನ್ಯತೆ ದೊರೆಯುತ್ತದೆ, ದೂರ ಪ್ರಯಾಣ, ಕೋಪ ಜಾಸ್ತಿ, ಅಕಾಲ ಭೋಜನ.

ಕುಂಭರಾಶಿ
ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾತಿನಲ್ಲಿ ಹಿಡಿತವಿರಲಿ, ಕೃಷಿಕರಿಗೆ ಸ್ವಲ್ಪ ಚುರುಕಾಗಿ ಚಟುವಟಿಕೆ ನಡೆಸುವ ಕಾಲವಾಗಿದೆ. ಒಮ್ಮೊಮ್ಮೆ ಚಿಂತಿತರಾಗುವಿರಿ. ಕಲಾವಿದರಿಗೆ ಉತ್ತಮ ಅವಕಾಶವು ಕೂಡಿ ಬಂದೀತು. ನಿಮ್ಮ ಚಾಕಚಕ್ಯತೆಯಿಂದ ಜಯ ಲಭಿಸೀತು, ಹಿರಿಯರಿಂದ ಬೋಧನೆ, ಸ್ತ್ರೀಯರಿಗೆ ಶುಭ ಸಮಯ, ಆಕಸ್ಮಿಕ ಧನಲಾಭ.

ಮೀನರಾಶಿ
ಕೋರ್ಟ್ ವಿವಾದದಿಂದ ಮನಸ್ತಾಪ, ಅನಗತ್ಯ ಖರ್ಚು, ನಿಧಾನಗತಿಯಿಂದ ಏರುಗತಿ ಕಾಣುತ್ತಿರುವ ನಿಮ್ಮ ಆರ್ಥಿಕ ಪರಿಸ್ಥಿತಿಯು ಇನ್ನೂ ಉತ್ತಮಗೊಳ್ಳಲಿದೆ. ಮಂಗಲ ಕಾರ್ಯದ ಬಗ್ಗೆ ಸ್ವಲ್ಪ ಚಿಂತಿಸುವುದು ಉತ್ತಮ. ಸಮಯವಿನ್ನೂ ಮಿಂಚಿಲ್ಲಾ, ಕೆಲಸದಲ್ಲಿ ತೊಂದರೆ, ವೈಮನಸ್ಸು, ಹಣಕಾಸಿನ ವಿಷಯದಲ್ಲಿ ಎಚ್ಚರ.

Leave A Reply

Your email address will not be published.