ಶಾಸಕ ಹರತಾಳು ಹಾಲಪ್ಪಗೆ ಅನಾರೋಗ್ಯ : ಮಣಿಪಾಲ ಆಸ್ಪತ್ರೆಗೆ ದಾಖಲು

0

ಶಿವಮೊಗ್ಗ : ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೊರೊನಾ ವೈರಸ್ ಸೋಂಕಿನಿಂದ ಶಾಸಕ ಹಾಲಪ್ಪ ಅವರು ಚೇತರಿಸಿಕೊಂಡಿದ್ದರು. ಆದ್ರೀಗ ಶಾಸಕ ಹಾಲಪ್ಪ ಅವರಿಗೆ ಹೊಟ್ಟೆಯಲ್ಲಿ ಹುಣ್ಣು (ಅಲ್ಸರ್​) ಆಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಅಡ್ಮಿಟ್ ಮಾಡಲಾಗಿದೆ.

ಸಾಗರದಲ್ಲಿದ್ದ ಹಾಲಪ್ಪ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾರಿನಲ್ಲಿಯೇ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.