ನಿತ್ಯಭವಿಷ್ಯ : 27-07-2020

0

ಮೇಷರಾಶಿ
ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ. ಗೃಹ ಕೃತ್ಯಗಳು, ಮಕ್ಕಳ ಸಂಬಂಧ ಕೆಲಸ ಕಾರ್ಯಗಳು ಕೈಗೂಡುತ್ತವೆ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ವೈರಿಗಳಿಂದ ದೂರವಿದ್ದರೆ ಉತ್ತಮ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ ವಿಕ್ರಯಗಳಲ್ಲಿ ಲಾಭ.

ವೃಷಭರಾಶಿ
ಹಿರಿಯರ ಮಾತಿಗೆ ಗೌರವ ಕೊಡಿ, ವಿವಿಧ ರೀತಿಯ ಆತಂಕಗಳಿದ್ದರೂ ನಿಮ್ಮ ಆತ್ಮ ವಿಶ್ವಾಸ ಮುನ್ನಡೆಗೆ ಸಾಧಕವಾಗಲಿದೆ. ಸ್ಥಗಿತಗೊಂಡ ಕಾರ್ಯಗಳು ಹಂತ ಹಂತವಾಗಿ ಪರಿಪೂರ್ಣವಾದೀತು .ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ನಷ್ಟ, ದಾಯಾದಿಗಳ ಕಲಹ, ಕೆಲಸಗಳಲ್ಲಿ ಅಲ್ಪ ಪ್ರಗತಿ,

ಮಿಥುನರಾಶಿ
ಕಾರ್ಯರಂಗದಲ್ಲಿ ಶತ್ರುಗಳು ಹಿನ್ನಡೆ ತಂದಾರು. ಧರ್ಮ ಸಮ್ಮತವಲ್ಲದ ಕೆಲಸ ಕಾರ್ಯಗಳು ಮನಸ್ಸನ್ನು ಕೆಡಿಸಲಿವೆ. ರಾಜಕೀಯ ವರ್ಗದವರಿಗೆ ಯಶಸ್ಸು. ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ಮಾನಸಿಕ ವ್ಯಥೆ, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ.

ಕಟಕರಾಶಿ
ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಸೌಖ್ಯ, ಹೊಸ ಸ್ಥಳಗಳ ಸಂದರ್ಶನ ಭಾಗ್ಯವಿದೆ. ವಾಹನ ಹಾಗೂ ಸಂಚಾರದಲ್ಲಿ ಜಾಗ್ರತೆವಹಿಸಿರಿ. ವೃತ್ತಿರಂಗದಲ್ಲಿ ತೋರಿ ಬರುವ ಕೊರತೆಯನ್ನು ಸಹಕರಿಸಿಕೊಂಡು ಹೋಗಿರಿ. ವಾಹನದಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ, ಈ ದಿನ ಮಿಶ್ರ ಫಲ.

ಸಿಂಹರಾಶಿ
ಅನ್ಯ ಮಾತಿನಿಂದ ಅನಾವಶ್ಯಕ ತಪ್ಪು ಅಭಿಪ್ರಾಯ ತಂದೀತು. ದೇವತಾನುಗ್ರಹದಿಂದ ಕಾರ್ಯಸಾಧನೆಯಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ತೋರಿ ಬರಲಿದೆ. ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿತ ಶತ್ರುಗಳ ಬಾಧೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಕನ್ಯಾರಾಶಿ
ತಂಪು ಪಾನೀಯಗಳಿಂದ ಅನಾರೋಗ್ಯ, ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿರಿ. ರಾಜಕೀಯ ವರ್ಗದವರಿಗೆ ಅನಾವಶ್ಯಕ ಖರ್ಚು ಬರುತ್ತದೆ. ವಾಹನ ಖರೀದಿಗೆ ಇದು ಸಕಾಲವಲ್ಲ. ಅವಿವಾಹಿತರಿಗೆ ವಿವಾಹ ಯೋಗ, ಮಾನಸಿಕ ನೆಮ್ಮದಿ, ಹಣಕಾಸು ಸಮಸ್ಯೆ ಅಲ್ಪ ಚೇತರಿಕೆ, ಈ ದಿನ ಮಿಶ್ರ ಫಲ ಯೋಗ.

ತುಲಾರಾಶಿ
ಮಾನಸಿಕ ಒತ್ತಡ, ಕಾರ್ಯದಲ್ಲಿ ವಿಕಲ್ಪ, ನಿರೀಕ್ಷಿತ ಕೆಲಸ ಕಾರ್ಯಗಳು ಮನಸ್ಸಿನಂತೆ ನಡೆಯಲಾರದು. ನಿರುದ್ಯೋಗಿಗಳಿಗೆ ಉದ್ಯೋಗಗಳ ಅವಕಾಶಗಳು ಸಿಗಲಿವೆದ. ದೇವತಾ ಕಾರ್ಯಗಳಿಗೆ ಖರ್ಚು ಇರಲಿದೆ.ಉದರ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ವಿಪರೀತ ಸಾಲ ಬಾಧೆ.

ವೃಶ್ಚಿಕರಾಶಿ
ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರೀತಿ ಸಮಾಗಮ, ಆದಾಯಕ್ಕಿಂತ ಖರ್ಚು ಹೆಚ್ಚು, ಹಿರಿಯರಿಗೆ ಆಗಾಗ ದೇಹ ಪ್ರಕೃತಿಯಲ್ಲಿ ಸಮಸ್ಯೆಗಳು ತೋರಿ ಬಂದಾವು. ಮಡದಿಗೆ ಅಲರ್ಜಿಯಂತಹ ವಿಚಾರದಲ್ಲಿ ಕಿರಿಕಿರಿ ಕಾಣಿಸಲಿದೆ. ವೈವಾಹಿಕ ಪ್ರಸ್ತಾವಗಳಿಗೆ ಅಡ್ಡಿ ಆತಂಕವನ್ನು ಎದುರಿಸುವಂತಾದೀತು. ನಾನಾ ವಿಚಾರಗಳಲ್ಲಿ ಆಸಕ್ತಿ,

ಧನಸ್ಸುರಾಶಿ
ಆತ್ಮೀಯರಲ್ಲಿ ಪ್ರೀತಿ, ಯತ್ನ ಕಾರ್ಯದಲ್ಲಿ ವಿಳಂಬ, ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗಳಿಗೆ ಗುರಿಯಾಗದೆ. ದೃಢ ನಿರ್ಧಾರಕ್ಕೆ ಒತ್ತು ನೀಡಿರಿ. ನಾನಾ ಮೂಲಗಳಿಂದ ಧನಾಗಮನವಿರುತ್ತದೆ. ಸಾಮಾಜಿಕ ಕಾರ್ಯದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಶಂಸೆಗೆ ಕಾರಣವಾಗಲಿದೆ. ವಸ್ತ್ರಾಭರಣ ಖರೀದಿಗೆ ಮನಸ್ಸು, ದ್ರವ ರೂಪದ ವಸ್ತುಗಳಿಂದ ಲಾಭ.

ಮಕರರಾಶಿ
ಯೋಚಿಸಿ ನಿರ್ಧಾರ ಕೈಗೊಳ್ಳಿ, ವ್ಯವಹಾರದಲ್ಲಿ ಏರುಪೇರು, ಆತುರ ಸ್ವಭಾವ, ಪತ್ರಿಕೋದ್ಯಮಿಗಳಿಗೆ ಉತ್ತಮ ಫ‌ಲವಿದೆ. ದೇವತಾಕಾರ್ಯಗಳು ಮನಸ್ಸಿಗೆ ಸಮಾಧಾನವನ್ನು ತರಲಿವೆ. ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರವಾಗಿ ಕೈಗೂಡಲಿವೆ. ವೃತ್ತಿರಂಗದಲ್ಲಿ ಸೋಲಲ್ಲೂ ಗೆಲುವಿದೆ. ಶತ್ರುಗಳ ಬಾಧೆ, ವಾದ-ವಿವಾದಗಳಲ್ಲಿ ಸೋಲು.

ಕುಂಭರಾಶಿ
ಸಹೋದರರಿಂದ ಸಹಾಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ವ್ಯವಸಾಯದಲ್ಲಿ ಉತ್ತಮ ಬೆಳೆಯನ್ನು ಪಡೆಯಲಿದ್ದೀರಿ. ಸಹನೆ ಕಳೆದುಕೊಳ್ಳದೆ ಸ್ವಸಾಮರ್ಥ್ಯದ ಬಗ್ಗೆ ಭರವಸೆಯನ್ನಿಡಿರಿ. ಖರ್ಚುವೆಚ್ಚಗಳಲ್ಲಿ ಹಿಡಿತ ಸಾಧಿಸಿರಿ. ರಾಜಕೀಯ ವ್ಯಕ್ತಿಗಳಿಗೆ ಹೆಮ್ಮೆಯ ಕಾಲವಾಗಿದೆ. ಅಪಘಾತವಾಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಮೋಸ,

ಮೀನರಾಶಿ
ಖರ್ಚಿನ ಬಗ್ಗೆ ನಿಗಾವಹಿಸಿ, ದುಡುಕಿನ ಪರಿಣಾಮದಿಂದ ಸಮಸ್ಯೆಗಳನ್ನು ಅನುಭವಿಸುವಿರಿ. ಮಕ್ಕಳೊಂದಿಗೆ ಆದಷ್ಟು ಜಾಗ್ರತೆ ವಹಿಸುವುದು ಉತ್ತಮ. ದೃಢ ನಿರ್ಧಾರದಿಂದ ಮುನ್ನಡೆದಲ್ಲಿ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ರಾಜಕಾರಣಿಗಳಿಗೆ ಪಕ್ಷದಲ್ಲಿ ಗೊಂದಲ, ಮನೆಯಲ್ಲಿ ನೆಮ್ಮದಿ, ವಿದ್ಯಾಭ್ಯಾಸಕ್ಕೆ ಅಡೆತಡೆ, ಉತ್ತಮ ಪ್ರಗತಿ.

Leave A Reply

Your email address will not be published.