ನಿತ್ಯಭವಿಷ್ಯ : 25-06-2020

0

ಮೇಷರಾಶಿ
ಆಗಾಗ ಅತಿಥಿಗಳು ಬಂದಾರು. ಆತ್ಮಸ್ಥೆರ್ಯಗಳಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿ ಬರುತ್ತದೆ. ಮಾನಸಿಕ ವೇದನೆ, ಚಿಂತೆಯಿಂದ ನಿದ್ರಾಭಂಗ, ಸ್ಥಿರಾಸ್ತಿ ವಿಚಾರದಲ್ಲಿ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯ ಅಹಂಭಾವದಿಂದ ಕಿರಿಕಿರಿ, ಮಾಟ-ಮಂತ್ರದ ತಂತ್ರದ ಭೀತಿ, ಪ್ರಯಾಣಕ್ಕೆ ಮನಸ್ಸು-ಅಡೆತಡೆ, ರಾಜಕೀಯದವರಿಗೆ ಮುನ್ನಡೆಯ ಅವಕಾಶಗಳು ತೋರಿ ಬರಲಿವೆ.

ವೃಷಭರಾಶಿ
ಆಕಸ್ಮಿಕ ಬಂಧುಗಳ ಆಗಮನ, ಕುಟುಂಬದಲ್ಲಿ ಬೆರೆಯುವ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯದ ಸೂಚನೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ದುಸ್ವಪ್ನಗಳು, ನಿದ್ರಾಭಂಗ, ಲಾಭ ಪ್ರಮಾಣದ ಅಧಿಕ, ಹಿರಿಯರಿಂದ ಶುಭವಾರ್ತೆ, ಆಕಸ್ಮಿಕ ಅವಘಡ. ಅವಿವಾಹಿತರಿಗೆ ಕಂಕಣಬಲದ ಅವಕಾಶ ಗಳಿರುತ್ತದೆ.ಸದುಪಯೋಗಿಸಿರಿ.ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಕಂಡು ಬರುತ್ತದೆ.ಹಳೇ ಮಿತ್ರರ ಆಗಮನದಿಂದ ಸಂತಸ.

ಮಿಥುನರಾಶಿ
ಆಗಾಗ ಅಡಚಣೆಗಳು ತೋರಿ ಬಂದು ಕೆಲಸಕಾರ್ಯಗಳಲ್ಲಿ ಮನಸ್ಸಾಗದು. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಡನೆ ಅನಾವಶ್ಯಕ ಭಿನ್ನಾಭಿಪ್ರಾಯ ತಂದೀತು. ಸ್ನೇಹಿತರಿಂದ ಧನಾಗಮನ ನಿರೀಕ್ಷೆ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಸಂಗಾತಿಯಿಂದ ಬೇಸರ, ದಾಂಪತ್ಯದಲ್ಲಿ ನಿರಾಸಕ್ತಿ. ಅನಿರೀಕ್ಷಿತವಾಗಿ ಶುಭವಾರ್ತೆ ಕೇಳುವಿರಿ.

ಕಟಕರಾಶಿ
ವಿದ್ಯಾರ್ಥಿಗಳು ಪ್ರಯತ್ನಬಲದಿಂದಲೇ ಮುಂದು ವರಿಯುವುದುಲೇಸು. ಕಫ, ಶೀತ, ಅಜೀರ್ಣ ಸಮಸ್ಯೆ, ಕುಲದೇವರ ದರ್ಶನ ಭಾಗ್ಯ, ತಂದೆ ಮಾಡಿದ ಸಾಲ ಬಾಧೆ, ಶತ್ರುಗಳ ಕಾಟ, ಆರೋಗ್ಯದಲ್ಲಿ ವ್ಯತ್ಯಾಸ.ರಾಜಕೀಯ ರಂಗದಲ್ಲಿ ನಿಮ್ಮ ಮಾತೇ ನಡೆಯಲಿದೆ.ಆರ್ಥಿಕ ಸ್ಥಿತಿಯಲ್ಲಿ ಜಾಗ್ರತೆ ವಹಿಸಿರಿ.ಕಾರ್ಮಿಕರಿಗೆ ಪರಿಸ್ಥಿತಿ ಅನುಕೂಲವಾಗಲಿದೆ.

ಸಿಂಹರಾಶಿ
ಸಾಂಸಾರಿಕವಾಗಿ ಮಾನಸಿಕ ನೆಮ್ಮದಿ ಇರದು. ಮಕ್ಕಳಿಂದ ಸಮಸ್ಯೆ, ಕೋರ್ಟ್ ಕೇಸ್‍ಗೆ ಅಲೆದಾಟ, ಭವಿಷ್ಯದ ಚಿಂತೆ, ನಿದ್ರಾಭಂಗ, ಮಾಟ-ಮಂತ್ರದ ಭೀತಿ, ಮಕ್ಕಳ ಬಗ್ಗೆ ಯೋಚನೆ, ಬೇಜವಾಬ್ದಾರಿಯಿಂದ ನೋವು. ಅನಾವಶ್ಯಕವಾಗಿ ಕೋಪತಾಪಗಳಿಗೆ ಬಲಿಯಾಗುವಿರಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ ತೋರಿ ಬರಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿಯು ತೋರಿ ಬರುವುದು. ಮುನ್ನಡೆಯಿರಿ.

ಕನ್ಯಾರಾಶಿ
ಹಿರಿಯರಿಗೆ ಮಕ್ಕಳ ಬಗ್ಗೆ ಚಿಂತೆ ತಂದೀತು. ವ್ಯಾಪಾರ, ವ್ಯವಹಾರಗಳು ತಕ್ಕ ಮಟ್ಟಿಗೆ ನಡೆದರೂ ಆತಂಕ ಕಂಡು ಬರಲಿವೆ. ದಾಂಪತ್ಯದಲ್ಲಿ ವಿರಸ, ಮಾನಸಿಕ ನೋವು, ಮಾತೃವಿನಿಂದ ಸ್ತಿರಾಸ್ತಿ-ವಾಹನ ಲಾಭ, ಹಿರಿಯರಿಂದ ಮನಸ್ಥೈರ್ಯ ಪ್ರಾಪ್ತಿ, ನಂಬಿಕಸ್ಥರಿಂದ ಮೋಸ, ಸೋಲು-ನಷ್ಟ ನಿರಾಸೆ, ಲಾಭ ಪ್ರಮಾಣ ಕುಂಠಿತ. ಯೋಗ್ಯ ವಯಸ್ಕರು ಕಂಕಣಬಲವನ್ನು ಹೊಂದಲಿದ್ದಾರೆ. ದೂರ ಸಂಚಾರದಲ್ಲಿ ಜಾಗ್ರತೆ.

ತುಲಾರಾಶಿ
ವಿದ್ಯಾರಂಗದಲ್ಲಿ ಅಧಿಕಾರಿ ವರ್ಗದವರಿಂದ ಅಭಿವೃದ್ಧಿ ಕಂಡು ಬರಲಿದೆ. ಸ್ವಂತ ಉದ್ಯೋಗ ಆರಂಭಕ್ಕೆ ಭರವಸೆ, ನೆರೆಹೊರೆಂ-ಬಂಧುಗಳಿಂದ ಕಿರಿಕಿರಿ, ಮನಸ್ಸಿನಲ್ಲಿ ಗೊಂದಲ, ಶತ್ರುಗಳಿಂದ ಅಪಜಯ, ಉದ್ಯೋಗ-ಸ್ಥಳ ಬದಲಾವಣೆಗೆ ಮನಸ್ಸು, ಪ್ರಯಾಣಕ್ಕೆ ಅಡೆತಡೆ, ನೆಮ್ಮದಿ ಇಲ್ಲದ ಜೀವನ. ಹಳೇ ಮಿತ್ರರಿಂದ ಘರ್ಷಣೆ ನಡೆದು ಅನಾವಶ್ಯಕವಾಗಿ ಮನಸ್ತಾಪಕ್ಕೆ ಬಲಿಯಾಗುವಿರಿ. ಆಗಾಗ ಸಂಚಾರಗಳು ಒದಗಿ ಬಂದೀತು.

ವೃಶ್ಚಿಕರಾಶಿ
ದೇಹಾರೋಗ್ಯದಲ್ಲಿ ಅಭಿವೃದ್ಧಿ ತೋರಿ ಬರಲಿದೆ.ಶುಭಮಂಗಲ ಕಾರ್ಯಗಳಿಗಾಗಿ ಧನವ್ಯಯವಾದೀತು.ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಒತ್ತಡಗಳು ಕಂಡು ಬಂದಾವು. ಹೆಚ್ಚು ಶ್ರಮಪಡಬೇಡಿ. ತಂದೆಯಿಂದ ಅನುಕೂಲವಾಗುವ ಭರವಸೆ, ಪ್ರೀತಿ ವಿಶ್ವಾಸ-ಭಾವನೆಗಳಿಗೆ ಧಕ್ಕೆ, ಕುಟುಂಬಸ್ಥರಿಂದ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ನೀವಾಡುವ ಮಾತಿನಿಂದಲೇ ಸಮಸ್ಯೆ, ಹಣಕಾಸು ವಿಚಾರವಾಗಿ ತಪ್ಪು ನಿರ್ಧಾರ, ಕುಟುಂಬದಲ್ಲಿ ವೈಮನಸ್ಸು.

ಧನುರಾಶಿ
ವೃತ್ತಿರಂಗದಲ್ಲಿ ಬದಲಾವಣೆಗಳು ಕಂಡು ಬರಲಿವೆ. ತಾಯಿಯೊಂದಿಗೆ ವಾಗ್ವಾದ, ಒಂಟಿತನ ಬಯಸುವಿರಿ, ಸ್ವಂತ ಉದ್ಯಮದಲ್ಲಿ ನಷ್ಟ, ಪ್ರೀತಿ ಪ್ರೇಮ ಭಾವನೆಗಳಿಗೆ ಧಕ್ಕೆ, ಆರ್ಥಿಕ ಮುಗ್ಗಟ್ಟು, ಕೆಲಸ ಕಾರ್ಯಗಳಲ್ಲಿ ಅಡೆತಡೆ. ನಿಮ್ಮ ಕ್ರಿಯಾಶೀಲತೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ನೀಡಿಯಾರು.ಅನಿರೀಕ್ಷಿತ ಆರೋಗ್ಯದಲ್ಲಿ ಏರುಪೇರಾದೀತು.ಜಾಗ್ರತೆ ಇರಲಿ. ಹೆಚ್ಚು ಚಿಂತೆ ಬೇಡ.

ಮಕರರಾಶಿ
ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆಗಳು ಕಂಡು ಬಂದು ಹಂತ ಹಂತವಾಗಿ ಅಭಿವೃದ್ಧಿಯಾಗಲಿವೆ. ಸ್ನೇಹಿತರಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಆತ್ಮೀಯರು-ಬಂಧುಗಳಲ್ಲಿ ವೈಮನಸ್ಸು, ನಿದ್ರೆಯಲ್ಲಿ ದುಸ್ವಪ್ನ, ವ್ಯಾಪಾರ-ವ್ಯವಹಾರ ನಷ್ಟದ ಭೀತಿ, ಅನಗತ್ಯ ಖರ್ಚು, ದಾನ ಮಾಡುವ ಮನಸ್ಥಿತಿ, ಆರ್ಥಿಕವಾಗಿ ಕೂಡಾ ಬರಬೇಕಾದ ಹಣ ಸಂದಾಯವಾದೀತು.ಹಣದ ಬಗ್ಗೆ ಯಾರನ್ನೂ ನಂಬಬಾರದು.

ಕುಂಭರಾಶಿ
ಅನಾವಶ್ಯಕವಾಗಿ ಮನಸ್ತಾಪದಿಂದ ಗೊಂದಲಗಳು ಕಂಡು ಬಂದಾವು. ಸೇವಕರು-ಕೂಲಿ ಕಾರ್ಮಿಕರಿಂದ ಒಳಿತು, ಮಿತ್ರರಿಂದ ಕೌಟುಂಬಿಕ ಸಮಸ್ಯೆ ಪರಿಹಾರ, ಆದಾಯಕ್ಕಿಂತ ಅಧಿಕವಾದ ಖರ್ಚು, ಸ್ನೇಹಿತರಿಂದ ಸಹಕಾರ, ಮಾಟ-ಮಂತ್ರ, ತಂತ್ರದ ಭೀತಿ, ದುಷ್ಟರ ಸಹವಾಸದಿಂದ ತೊಂದರೆ, ಕಾರ್ಯ ಯಶಸ್ಸಿಗಾಗಿ ಪರಿಶ್ರಮ. ಆರ್ಥಿಕವಾಗಿ ಗೊಂದಲಗಳು ಕಂಡು ಬಂದಾವು.ಪತ್ನಿಯ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಕಾರ್ಮಿಕರಿಗೆ ಉನ್ನತಿ ಇರುವುದು.

ಮೀನರಾಶಿ
ಶ್ರೀದೇವತಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ನೆರವೇರಲಿವೆ. ಮಕ್ಕಳಿಗೆ ಉದ್ಯೋಗಾವಕಾಶ, ದಾಂಪತ್ಯದಲ್ಲಿ ವಿರಸ, ನೆಮ್ಮದಿಗೆ ಭಂಗ, ಉದ್ಯೋಗದಲ್ಲಿ ಅಡೆತಡೆ, ಮಾಡುವ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ. ಆಗಾಗ ಆರ್ಥಿಕ ಅಡಚಣೆಗಳು ಎದುರಾದಾವು. ಉದಾಸೀನತೆಯಿಂದ ಕೆಲಸ ಕಾರ್ಯಗಳು ಹಿನ್ನಡೆ ಕಂಡಾವು.ಬಂಧುಗಳ ಆಗಮನವಿದೆ.

Leave A Reply

Your email address will not be published.