ಶನಿವಾರ, ಜೂನ್ 14, 2025
Homehoroscopeನಿತ್ಯಭವಿಷ್ಯ :19-05-2020

ನಿತ್ಯಭವಿಷ್ಯ :19-05-2020

- Advertisement -

ಮೇಷರಾಶಿ
ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ನಿರುದ್ಯೋಗಿಗಳ ಅಲೆದಾಟ ಸದ್ಯದ ಮಟ್ಟಿಗೆ ಮುಂದುವರಿಯಲಿದೆ. ವೃತ್ತಿರಂಗದಲ್ಲಿ ಬಂದ ಅವಕಾಶಗಳನ್ನು ಸದುಪಯೋಗಿಸುವುದು. ಅಗತ್ಯವಿದೆ. ಪತ್ನಿಯ ಸಹಕಾರ ಮುನ್ನಡೆಗೆ ಸಾಧಕ. ಶತ್ರುಗಳ ಬಾಧೆ ನಿವಾರಣೆ, ಮಾನಸಿಕ ನೆಮ್ಮದಿ, ಉನ್ನತ ಶಿಕ್ಷಣದಲ್ಲಿ ಪ್ರಗತಿ, ವ್ಯವಹಾರ ನಿಮಿತ್ತ ಪ್ರಯಾಣ.

ವೃಷಭರಾಶಿ
ಜನರಿಂದ ಬೆಂಬಲ ಲಭಿಸುವುದು, ಆಗಾಗ ಸಂಚಾರ ಯಂತ್ರ ರಿಪೇರಿಗಾಗಿ ನಾನಾ ರೀತಿಯಲ್ಲಿ ಖರ್ಚುಗಳು ಬರಲಿವೆ. ಅವಿವಾಹಿತರು ಭಾಗ್ಯಶಾಲಿಗಳಾದಾರು. ಆಗಾಗ ಮಾನಸಿಕ ಅಶಾಂತಿ ತೋರಿ ಬಂದರೂ ಆತ್ಮವಿಶ್ವಾಸ ನಮ್ಮನ್ನು ಕಾಪಾಡಲಿದೆ. ನಿರೀಕ್ಷೆಗೆ ತಕ್ಕಂತೆ ಆದಾಯ, ಸರ್ಕಾರಿ ಕೆಲಸಗಳಿಗೆ ಓಡಾಟ, ಕಾರ್ಯ ಕ್ಷೇತ್ರದಲ್ಲಿ ಅಲ್ಪ ಒತ್ತಡ, ಮಾಡುವ ಕೆಲಸದಲ್ಲಿ ಯಶಸ್ಸು.

ಮಿಥುನರಾಶಿ
ಮಾನಸಿಕ ಚಿಂತೆ, ಸಣ್ಣ ಪುಟ್ಟ ತೊಂದರೆ, ಉದ್ಯೋಗ ಸ್ಥಳದಲ್ಲಿ ಅಸಮಾಧಾನ, ದೇವತಾ ಕಾರ್ಯಗಳು ಮನಸ್ಸಿಗೆ ಶಾಂತಿ ಸಮಾಧಾನ ನೀಡಬಲ್ಲದು. ನಿಮ್ಮ ಅಭಿವದ್ಧಿಗೆ ಆಗಾಗ ಹಿತಶತ್ರುಗಳೇ ನಿಮಗೆ ಅಡ್ಡಿ ಮಾಡಲಿದ್ದಾರೆ. ನೂತನ ಕಾರ್ಯಾರಂಭಕ್ಕೆ ಆತುರ ಮಾಡುವುದು ಬೇಡ. ಹಣಕಾಸು ವಿಚಾರದಲ್ಲಿ ಎಚ್ಚರ, ಈ ದಿನ ಅಶುಭ ಫಲ ಯೋಗ.

ಕಟಕರಾಶಿ
ವಾಹನ ಯೋಗ, ಪರಿಚಿತರಿಂದಲೇ ಮೋಸ ಹೋಗುವ ಸಂದರ್ಭ, ಧನದಾಯ ಉತ್ತಮವಿದ್ದರೂ ಆಗಾಗ ಅನಿರೀಕ್ಷಿತ ಖರ್ಚುವೆಚ್ಚಗಳು ಆತಂಕಕ್ಕೆ ಕಾರಣವಾದೀತು. ಉದರ ಸಂಬಂಧಿ ಸಮಸ್ಯೆಗಳು ತೋರಿಬರುತ್ತವೆ. ನಿರುದ್ಯೋಗಿಗಳು ಹಲವಾರು ಅವಕಾಶವನ್ನು ನಿರಾಕರಿಸಲಿದ್ದಾರೆ. ಆರೋಗ್ಯದಲ್ಲಿ ಏರುಪೇರು, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಇಂದು ಮಿಶ್ರ ಫಲ ಯೋಗ.

ಸಿಂಹರಾಶಿ
ಯತ್ನ ಕಾರ್ಯದಲ್ಲಿ ಜಯ, ವ್ಯಾಪಾರಿ ವರ್ಗದವರು ಉತ್ತಮದಾಯಕ ಅಭಿವೃದ್ಧಿಯನ್ನು ಪಡೆಯಲಿದ್ದಾರೆ. ಸಾಮಾಜಿಕವಾಗಿ ಹಲವಾರು ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಹಿರಿಯರ ಮಾರ್ಗದರ್ಶನ ಅನುಗ್ರಹಕಾರಕವಾಗಲಿದೆ. ಕ್ರಯ ವಿಕ್ರಯಗಳಲ್ಲಿ ಲಾಭ, ಹಿತ ಶತ್ರುಗಳ ಬಾಧೆ, ವ್ಯವಹಾರದಲ್ಲಿ ಜಾಣ್ಮೆ ಅಗತ್ಯ, ಈ ದಿನ ಶುಭ ಫಲ ಯೋಗ.

ಕನ್ಯಾರಾಶಿ
ಸ್ವಯಂ ಸಾಮಥ್ರ್ಯದಿಂದ ಅವಕಾಶ, ಅಲ್ಪ ಲಾಭ, ಹಿತಶತ್ರುಗಳ ಬಗ್ಗೆ ಜಾಗ್ರತೆ ವಹಿಸಿರಿ. ಅನಾವಶ್ಯಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಕುಟುಂಬದಲ್ಲಿ ಅಸಮಾಧಾನದ ವಾತಾವರಣ ತಂದೀತು. ಆರ್ಥಿಕವಾಗಿ ಆತಂಕಕ್ಕೆ ಕಾರಣವಾಗುವ ಘಟನೆ ನಡೆದೀತು. ಅಧಿಕವಾದ ಖರ್ಚು, ಸ್ಥಿರಾಸ್ತಿ ತಗಾದೆಗಳು ಇತ್ಯರ್ಥ, ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ.

ತುಲಾರಾಶಿ
ಮಾಡಿದ ಕೆಲಸಗಳಿಂದ ಪಶ್ಚಾತ್ತಾಪ, ವ್ಯಾಪಾರ, ವ್ಯವಹಾರಗಳು ತುಸು ಅಭಿವೃದ್ಧಿ ಹಾಗೂ ಲಾಭ ತರಲಿವೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಆಗಾಗ ಮಿತ್ರರ ಆಗಮನ ಸಂತಸ ತಂದೀತು. ಹಠ, ಛಲ ಕಡಿಮೆ ಮಾಡಿರಿ. ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದವರಿಂದ ತೊಂದರೆ, ಆತ್ಮೀಯರೊಂದಿಗೆ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ.

ವೃಶ್ಚಿಕರಾಶಿ
ಶುಭ ಮಂಗಲ ಕಾರ್ಯಗಳು ವಿಳಂಬವಾಗಲಿವೆ. ಉದ್ಯೋಗಿಗಳಿಗೆ ಮುನ್ನಡೆಯ ದಿನಗಳಿವು. ಅನಿರೀಕ್ಷಿತ ರೀತಿಯಲ್ಲಿ ಆರೋಗ್ಯಕ್ಕೆ ಸಮಸ್ಯೆ ಬಂದೀತು. ಮಾತಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ಬಂಧು ಮಿತ್ರರಲ್ಲಿ ವಿರೋಧ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ, ದೇಹದಲ್ಲಿ ಆಲಸ್ಯ, ಸ್ಥಳ ಬದಲಾವಣೆ, ಚಂಚಲ ಮನಸ್ಸು.

ಧನಸ್ಸುರಾಶಿ
ಅಧಿಕವಾದ ತಿರುಗಾಟ, ದುಷ್ಟರಿಂದ ದೂರವಿರಿ, ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲಿದ್ದಾರೆ. ಹಣಕಾಸಿನ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು. ಹಿರಿಯರ ವಿರೋಧ ಮನಸ್ಸಿಗೆ ಬೇಸರ ತಂದೀತು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಸಗಟು ವ್ಯಾಪಾರಿಗಳಿಗೆ ಧನ ಲಾಭ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಈ ದಿನ ತಾಳ್ಮೆ ಅತ್ಯಗತ್ಯ.

ಮಕರರಾಶಿ
ಅಲ್ಪ ಸಮಸ್ಯೆಗಳು ಬಗೆಹರಿಯುವುದು, ಕ್ರೀಡಾಳುಗಳಿಗೆ ಶುಭವಾರ್ತೆ ಇರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಹಂತಹಂತವಾಗಿ ಸುಧಾರಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ನಿಮಗೆ ಸಾಧಕವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಭಿವದ್ಧಿ ಇದೆ. ಮನೆ ನಿರ್ಮಾಣಕ್ಕೆ ಅಧಿಕ ಖರ್ಚು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಹಣಕಾಸು ಸಮಸ್ಯೆ ಎದುರಾಗುವುದು, ಇಷ್ಟಾರ್ಥ ಸಿದ್ಧಿಗಾಗಿ ಪರಿಶ್ರಮ.

ಕುಂಭರಾಶಿ
ಸಹೋದ್ಯೋಗಿಗಳಿಂದ ತೊಂದರೆ, ಆಗಾಗ ಮನಸ್ಸಿಗೆ ಅಸಮಾಧಾನದ ಘಟನೆಗಳು ತೋರಿಬಂದಾವು. ಆರ್ಥಿಕವಾಗಿ ಸಹ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ವೃತ್ತಿರಂಗದಲ್ಲಿ ನಿಮ್ಮ ಕರ್ತವ್ಯಭಾವದಿಂದ ಮುಂದುವರಿಯಿರಿ. ಮನೆಯಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸಮಾಧಾನಕರವಾದ ದಿನ.

ಮೀನರಾಶಿ
ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ನಷ್ಟ, ಆರೋಗ್ಯದಲ್ಲಿ ಏರುಪೇರು, ಸಾಂಸಾರಿಕ ಹಾಗೂ ಕೌಟುಂಬಿಕವಾಗಿ ಅಭಿವೃದ್ಧಿ ಹಾಗೂ ಉತ್ತಮ ಬೆಳವಣಿಗೆ ಗೋಚರಕ್ಕೆ ಬರಲಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ನೆಂಟರಿಷ್ಟರ ಸಹಕಾರದಿಂದ ಅಭಿವೃದ್ಧಿ ಇದೆ. ಶತ್ರುಗಳ ಬಾಧೆ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಕಿರಿಕಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular