ನಿತ್ಯಭವಿಷ್ಯ : 14-04-2020

0

ಮೇಷರಾಶಿ
ಅಧಿಕವಾದ ಖರ್ಚು, ಪರರಿಂದ ಮೋಸ, ವಿವಿಧ ರೀತಿಯಲ್ಲಿ ಅನುಕೂಲವು ಉಂಟಾಗಲಿದೆ. ನೌಕರರಿಂದ ಸಹಕಾರವೂ ದೊರಕಲಿದೆ. ಒಮ್ಮೊಮ್ಮೆ ಆರ್ಥಿಕ ಅಡಚಣೆಗಳಿಂದ ಆತ್ಮಸ್ಥೈರ್ಯ ಕುಗ್ಗಲಿದೆ. ನೂತನ ಕೆಲಸ ಕಾರ್ಯಗಳಿಗೆ ಸಕಾಲವಲ್ಲ. ಅಲ್ಪ ಕಾರ್ಯ ಸಿದ್ಧಿ, ಶತ್ರುಗಳ ನಾಶ, ಉದ್ಯೋಗದಲ್ಲಿ ಕಿರಿಕಿರಿ.

ವೃಷಭರಾಶಿ
ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬ ಸೌಖ್ಯ, ಸುಖ ಭೋಜನ, ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ಕಂಡು ಬರಲಿದೆ. ಮಕ್ಕಳ ಅಭ್ಯಾಸದ ಬಗ್ಗೆ ಹಾಗೂ ಉದ್ಯೋಗದ ಕಡೆಗೆ ಗಮನ ಕೊಡಬೇಕಾದೀತು. ಆಹಾರದಲ್ಲಿ ಜಾಗ್ರತೆ ವಹಿಸಿರಿ. ಬಂಧುಗಳಿಂದ ನಿಂದನೆ, ಆತ್ಮೀಯರಲ್ಲಿ ವೈಮನಸ್ಸು.

ಮಿಥುನರಾಶಿ
ಆಸ್ತಿ ವಿಚಾರದಲ್ಲಿ ಕಲಹ, ಸ್ವಯಂಕೃತ ಅಪರಾಧ, ದಾಂಪತ್ಯದಲ್ಲಿ ಅನುಕೂಲವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹವು ಕಂಡು ಬರುವುದು. ಆರೋಗ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದಾವು. ಗೃಹ, ವಾಹನಾದಿಗಳಿಗೆ ಹಾನಿಯಾದೀತು. ಮಾನಸಿಕ ವ್ಯಥೆ, ವಾದ-ವಿವಾದಗಳಲ್ಲಿ ಎಚ್ಚರ.

ಕಟಕರಾಶಿ
ಮನೆಯಲ್ಲಿ ಸಂತಸ, ಋಣ ಬಾಧೆ, ಕೃಷಿಕರಿಗೆ ಲಾಭ, ಆರೋಗ್ಯ ಸಮಸ್ಯೆ, ಆಗಾಗ ಸಾಂಸಾರಿಕವಾಗಿ ಖನ್ನತೆಯಿಂದ ಬಳಲುವಂತಾದೀತು. ನರದ ತೊಂದರೆ, ಪಿತ್ತೋಷ್ಣ ಸಂಬಂಧಿ ಅನಾರೋಗ್ಯವು ಕಂಡು ಬಂದೀತು. ಸ್ಥಿರ ಸೊತ್ತುಗಳ ವ್ಯವಹಾರದಿಂದ ನಷ್ಟವಾದೀತು. ಬಂಧು ಸಹಕಾರ ಸಿಗಲಿದೆ. ಮನಸ್ಸಿಗೆ ನಾನಾ ರೀತಿ ಚಿಂತೆ, ದ್ರವ್ಯ ನಷ್ಟ.

ಸಿಂಹರಾಶಿ
ಮಕ್ಕಳಿಂದ ನೋವು ದುಃಖ, ಸಾಲ ಬಾಧೆ, ಅನ್ಯರೊಂದಿಗೆ ಮನಸ್ತಾಪ ಕಂಡು ಬಂದೀತು. ಹಿರಿಯ ಬಂಧುಗಳಿಂದ ಸಹಕಾರ ಸಿಗಲಿದೆ. ಹಣದ ವ್ಯವಹಾರದಲ್ಲಿ ಅಭಿವೃದ್ಧಿ ತೋರಿ ಬರಲಿದೆ. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಕುರುಹು ಕಾಣಿಸೀತು. ವಿದ್ಯಾರ್ಥಿಗಳಿಗೆ ಹಿನ್ನಡೆ, ಕುಟುಂಬದಲ್ಲಿ ಪ್ರೀತಿ, ಆಕಸ್ಮಿಕ ಧನವ್ಯಯ.

ಕನ್ಯಾರಾಶಿ
ಪತ್ನಿಯ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರಲಿದೆ. ಆಗಾಗ ಮಾನಸಿಕ ಉದ್ವೇಗದಿಂದ ಬಳಲುವಿರಿ. ದೇಹಾರೋಗ್ಯದಲ್ಲಿ ಅಲ್ಪ ತೊಂದರೆಗಳು ಕಂಡು ಬರಬಹುದು. ದೂರ ಸಂಚಾರಗಳು, ಅಡೆತಡೆಯನ್ನು ತರಲಿದೆ. ಆರೋಗ್ಯದ ಕಡೆ ಗಮನಹರಿಸಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಹಿರಿಯರಲ್ಲಿ ಶ್ರದ್ಧೆ ಗೌರವ, ಕೆಲಸ ಕಾರ್ಯಗಳಲ್ಲಿ ಅಲ್ಪ ವಿಳಂಬ.

ತುಲಾರಾಶಿ
ಮಿತ್ರರಿಂದ ಸಲಹೆ, ವಾಸಗೃಹದಲ್ಲಿ ತೊಂದರೆ, ನೂತನ ಶುಭ ಮಂಗಲ ಕಾರ್ಯಗಳಿಗೆ ನಾನಾ ರೀತಿಯಲ್ಲಿ ಪರೋಕ್ಷವಾಗಿ ಸಹಕಾರವು ದೊರಕಲಿದೆ. ಸಾಂಸಾರಿಕವಾಗಿ, ಕುಟುಂಬಿಕವಾಗಿ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ದೊರಕಲಿದೆ. ತಾಳ್ಮೆಯಿಂದ ವರ್ತಿಸಿ, ಸಣ್ಣ ಪುಟ್ಟ ವಿಚಾರಗಳಿಂದ ಮನಃಸ್ತಾಪ.

ವೃಶ್ಚಿಕರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ಶೀತ ಸಂಬಂಧಿತ ರೋಗ, ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಲಿದೆ. ಸಾಮಾಜಿಕವಾಗಿ ಗೌರವ, ಸ್ಥಾನಮಾನಗಳು ಒದಗಿ ಬರಲಿದೆ. ದೂರ ಸಂಚಾರದಲ್ಲಿ ಕಾರ್ಯಸಾಧನೆಯ ಶುಭವಾರ್ತೆ ಸಿಗಲಿದೆ. ಪತ್ನಿ, ಮಕ್ಕಳಿಂದ ಅನುಕೂಲವು ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹಣಕಾಸು ನಷ್ಟ, ಆತ್ಮೀಯರೊಂದಿಗೆ ಮನಃಸ್ತಾಪ, ಅಕಾಲ ಭೋಜನ.

ಧನಸ್ಸುರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನೇಕ ವಿಚಾರಗಳ ಬಗ್ಗೆ ಚರ್ಚೆ, ಮಾನಸಿಕ ನೆಮ್ಮದಿಗೆ ಭಂಗ ಬಂದರೂ ಪ್ರಯತ್ನ ಬಲದಿಂದ ಕಾರ್ಯ ಸಾಧನೆಯಾಗಲಿದೆ. ಮನಸ್ತಾಪವಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿರಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ.ಮಾನಸಿಕ ವೇದನೆ, ಗೊಂದಲಮಯ ವಾತಾವರಣ.

ಮಕರರಾಶಿ
ಆತುರ ಸ್ವಭಾವ, ದೂರಾಲೋಚನೆ, ಅಧಿಕವಾದ ಖರ್ಚು, ವೃತ್ತಿರಂಗದಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾದೀತು. ಕೆಲಸ ಕಾರ್ಯವು ನಿಧಾನಗತಿಯಲ್ಲಿ ನಡೆಯುತ್ತದೆ. ಶಾರೀರಿಕವಾಗಿ ಆಯಾಸವು ತೋರಿಬಂದೀತು. ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಮಾತಿನ ಮೇಲೆ ನಿಗಾವಿರಲಿ, ಕೆಲಸದಲ್ಲಿ ಒತ್ತಡ.

ಕುಂಭರಾಶಿ
ಅನ್ಯ ಜನರಲ್ಲಿ ವೈಮನಸ್ಸು, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ಕುಟುಂಬಿಕ ಸಮಸ್ಯೆಗಳು ಎದುರಾಗಲಿದೆ. ಸ್ತ್ರೀ ಸಂಬಂಧ ತೊಂದರೆಗಳು ಅನುಭವಕ್ಕೆ ಬರಲಿದೆ. ಆಗಾಗ ಹಣದ ಅಪವ್ಯಯವಾದೀತು. ಮನೋವ್ಯಾಕುಲತೆ ತೋರಿಬಂದು ಮುನ್ನಡೆಗೆ ಅನಾನುಕಲವಾದೀತು. ಉತ್ತಮ ಬುದ್ಧಿಶಕ್ತಿ, ಆರೋಗ್ಯ ಸಮಸ್ಯೆ.

ಮೀನರಾಶಿ
ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳ ಬಾಧೆ, ವ್ಯಾಪಾರದಲ್ಲಿ ಲಾಭ, ಹಿರಿಯರ ಸಹಕಾರದಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಕೂಡ ಕೆಲವು ಅನುಕೂಲ ಅಭಿವದ್ಧಿ ಇರುತ್ತದೆ. ನಿರುದೋÂàಗಿಗಳಿಗೆ ಕಾಯುವಂತಹ ಪರಿಸ್ಥಿತಿಯು ಗೋಚರಕ್ಕೆ ಬರಲಿದೆ. ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ವಿಪರೀತ ತೊಂದರೆ.

Leave A Reply

Your email address will not be published.