ನಿತ್ಯಭವಿಷ್ಯ: 22-04-2020

0

ಮೇಷರಾಶಿ
ಸದ್ಯ ಸಾಂಸಾರಿಕವಾಗಿ ವ್ಯಾವಹಾರಿಕವಾಗಿ ದುಡುಕು ನಿರ್ಧಾರಗಳ ಬಗ್ಗೆ ಜಾಗ್ರತೆ ವಹಿಸಿರಿ. ವೈವಾಹಿಕ ಭಾಗ್ಯಕ್ಕೆ ಕನ್ಯಾಪಿತೃಗಳ ಪ್ರಯತ್ನ ಬಲ ಸಾರ್ಥಕವಾದೀತು. ಹಣ ಸಮಸ್ಯೆ, ಸಾಲ ಬಾಧೆ, ಪಾಪ ಬುದ್ಧಿ, ಚರ್ಮರೋಗ, ಕುಟುಂಬದಲ್ಲಿ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ವ್ಯಾಪಾರದಲ್ಲಿ ಚೇತರಿಕೆ.

ವೃಷಭರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ಐಷಾರಾಮದಿಂದ ದೈಹಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ವಹಿಸಬೇಕು. ವಿದ್ಯಾರ್ಥಿ ಗಳಾದವರು ಉತ್ತಮ ಫ‌ಲಿತಾಂಶವನ್ನು ಪಡೆದಾರು. ಮನಸ್ಸಿನಲ್ಲಿ ಭಯ, ಶತ್ರುಗಳ ಬಾಧೆ, ಅನಗತ್ಯ ಸುತ್ತಾಟ ಮಾಡಬೇಡಿ, ವೈಯುಕ್ತಿಕ ವಿಚಾರದ ಬಗ್ಗೆ ಗಮನಹರಿಸಿ. ದಿನಾಂತ್ಯ ಶುಭವಾರ್ತೆ.

ಮಿಥುನರಾಶಿ
ಹಣಕಾಸು ವಿಚಾರದಲ್ಲಿ ಎಚ್ಚರ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ವೃತ್ತಿರಂಗದಲ್ಲಿ ಅನುಕರಣೆ ಸ್ವಂತಿಕೆಯ ಅಭಿವೃತ್ತಿಯಲ್ಲ. ಸಾವಕಾಶವಾಗಿ ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ. ಯಶಸ್ಸು ನಿಮ್ಮದಾದೀತು. ವೈವಾಹಿಕ ಸಂಬಂಧ ಕೂಡಿಬರಲಿದೆ. ಮಾನಸಿಕ ಚಿಂತೆ, ಅಕಾಲ ಭೋಜನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಕಟಕರಾಶಿ
ಮಾತಿನ ಮೇಲೆ ಹಿಡಿತ ಅಗತ್ಯ, ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಶಿಸ್ತು ಅಗತ್ಯವಿದೆ. ಆರ್ಥಿಕವಾಗಿ ಖರ್ಚು ಅಧಿಕವಾದೀತು. ಅವಿವಾಹಿತರಿಗೆ ಒಂಟಿತನ ನಿವಾರಣೆಯಾಗುತ್ತದೆ. ತಾಳ್ಮೆಯಿಂದ ವರ್ತಿಸುವುದು ಉತ್ತಮ, ಮಕ್ಕಳಿಗೆ ಅನಾರೋಗ್ಯ, ವಿಪರೀತ ಹಣ ಖರ್ಚು, ವಿದ್ಯಾಭ್ಯಾಸದಲ್ಲಿ ಆಸಕ್ತಿ. ಈ ದಿನ ಮಿಶ್ರಫಲ ಯೋಗ.

ಸಿಂಹರಾಶಿ
ಆರೋಗ್ಯ ಭಾಗ್ಯಕ್ಕಾಗಿ ಜಾಗ್ರತೆ ಇರಲಿ. ಕಾರ್ಯ ಒತ್ತಡಗಳಿಂದ ವಿಶ್ರಾಂತಿ ಅಗತ್ಯವಿದೆ. ಆಹಾರದ ಬಗ್ಗೆ ಹೆಚ್ಚಿನ ಗಮನ ಬೇಕು. ಆರ್ಥಿಕವಾಗಿ ಧನಾಗಮನ ಇದ್ದೇ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ವಿಳಂಬ, ಅಲ್ಪ ಆದಾಯ, ಅಧಿಕ ಖರ್ಚು, ಅಭಿವೃದ್ಧಿ ಕುಂಠಿತ, ಹೇಳಿಕೆ ಮಾತಿನಿಂದ ಸಂಕಷ್ಟಕ್ಕೆ ಸಿಲುಕುವಿರಿ, ಬಂಧು ಮಿತ್ರರ ವಿಚಾರದಲ್ಲಿ ಎಚ್ಚರ.

ಕನ್ಯಾರಾಶಿ
ನಿರುದ್ಯೋಗಿಗಳಿಗೆ ಸದ್ಯದಲ್ಲೇ ಉದ್ಯೋಗ ಭಾಗ್ಯ ಸಿಗಲಿದೆ. ಹಿತಶತ್ರುಗಳು ನಿಮ್ಮ ದಾರಿಯನ್ನು ತಪ್ಪಿಸಲಿದ್ದಾರೆ. ಮಾನಸಿಕ ಒತ್ತಡ, ನೆಮ್ಮದಿಯಾಗಿರಲು ಬಯಸುವಿರಿ. ಸರಕಾರಿ ಕೆಲಸ ಕಾರ್ಯಗಳು ವಿಳಂಬವಾಗುತ್ತವೆ. ಖಾಸಗಿ ಕಂಪನಿಗಳಿಗೆ ನಷ್ಟ, ಗುರು ಹಿರಿಯಲ್ಲಿ ಭಕ್ತಿ, ಶತ್ರುಗಳ ನಾಶ,

ತುಲಾರಾಶಿ
ಅನಗತ್ಯ ಕಲಹವಾಗುವುದು, ಚಂಚಲ ಮನಸ್ಸು, ವಿದ್ಯಾರ್ಥಿಗಳಲ್ಲಿ ಗೊಂದಲ, ಉದ್ಯೋಗಿಗಳಿಗೆ ಕೆಲಸದ ಮಹತ್ವ ತಿಳಿಯಲಿದೆ. ಆರ್ಥಿಕವಾಗಿ ಪರಿಸ್ಥಿತಿ ಸಮಾಧಾನ ಸಿಗಲಾರದು. ಸಾಂಸಾರಿಕವಾಗಿ ಇತರರ ಸಹಕಾರದಿಂದ ಕಾರ್ಯ ಸಾಧನೆಯಾದೀತು. ಹಣಕಾಸು ವಿಚಾರದಲ್ಲಿ ಮೋಸ, ವ್ಯವಹಾರಗಳನ್ನು ಮುಂದೂಡುವುದು ಉತ್ತಮ.

ವೃಶ್ಚಿಕರಾಶಿ
ಅತಿಯಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಸಮಸ್ಯೆಗಳು ಹಂತ ಹಂತವಾಗಿ ತಮ್ಮಷ್ಟಕ್ಕೆ ತಾವೇ ಇಲ್ಲದಂತಾಗಿ ಬಿಡುತ್ತದೆ. ನೆರೆಹೊರೆಯವರ ಯೋಗಕ್ಷೇಮಕ್ಕಾಗಿ ಆಸಕ್ತಿ ಕಂಡುಬರುತ್ತದೆ. ವ್ಯವಹಾರಗಳಲ್ಲಿ ದೃಷ್ಟಿ ದೋಷ, ಆಕಸ್ಮಿಕ ತೊಂದರೆ, ಮಾನಸಿಕ ವ್ಯಥೆ.

ಧನಸ್ಸುರಾಶಿ
ಮಾತೃವಿನಿಂದ ಲಾಭ, ಸ್ನೇಹಿತರಿಂದ ನೆರವು, ದೈಹಿಕವಾಗಿ ಹಾಗೂ ಮಾನಸಿಕವಾಗಿ ದೃಢತೆ ಮುಂದಿನ ಮುನ್ನಡೆಗೆ ಸಾಧಕವಾಗಲಿದೆ. ವೈಯಕ್ತಿಕ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಸಂಚಾರದಲ್ಲಿ ಜಾಗ್ರತೆ. ಸುಖ ಭೋಜನ, ಪ್ರೀತಿ ಸಮಾಗಮ, ಶರೀರದಲ್ಲಿ ತಳಮಳ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಉದರ ಬಾಧೆ, ಬದಲಾವಣೆಯ ಸಾಧ್ಯತೆ ಇರುತ್ತದೆ. ಆದರೂ ಹೊಂದಾಣಿಕೆ ಅಗತ್ಯವಿರುತ್ತದೆ. ಸಂಚಾರದಲ್ಲಿ ಜಾಗ್ರತೆ ಇರಲಿ. ಆರ್ಥಿಕವಾಗಿ ಖರ್ಚು ವೆಚ್ಚಗಳಲ್ಲಿ ಹೆಚ್ಚಿನ ಹಿಡಿತ ಬೇಕು. ವ್ಯರ್ಥ ಧನಹಾನಿ, ಪುತ್ರರಲ್ಲಿ ದ್ವೇಷ, ಯಾರನ್ನೂ ಹೆಚ್ಚು ನಂಬಬೇಡಿ, ಆಲಸ್ಯ ಮನೋಭಾವ.

ಕುಂಭರಾಶಿ
ವಾದ-ವಿವಾದದಲ್ಲಿ ತೊಡಗುವಿರಿ, ಅತಿಯಾದ ಆತ್ಮ ವಿಶ್ವಾಸದಿಂದ ತೊಂದರೆ, ಮರ್ಕಟ ಮನಸ್ಸು ಕಡಿವಾಣದಲ್ಲಿರಲಿ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾದೀತು. ಹಿರಿಯರಿಗೆ ಶ್ರೀದೇವತಾ ದರ್ಶನವಿದೆ. ವೈರಿಗಳಿಂದ ದೂರವಿರಿ, ಪರಿಶ್ರಮಕ್ಕೆ ತಕ್ಕ ಆದಾಯ.

ಮೀನರಾಶಿ
ತಂಪು ಪಾನೀಯಗಳಿಂದ ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ,ಶಾರೀರಿಕ ಸ್ವತ್ಛತೆಗೆ ಗಮನಹರಿಸಿರಿ. ಸಾರ್ವಜನಿಕ ಸೇವಾ ಕಾರ್ಯದಲ್ಲಿ ಆಸಕ್ತಿ ಇರುತ್ತದೆ. ವ್ಯಾಪಾರ ವ್ಯವಹಾರವಾದಲ್ಲಿ ಚೇತರಿಕೆ ಕಾರ್ಯ ಸಾಧನೆಗೆ ಸಾಧಕವಾಗಲಿದೆ. ಹಿತ ಶತ್ರುಗಳ ಬಾಧೆ, ಸ್ತ್ರೀಯರಿಗೆ ಲಾಭ, ಹೊಗಳಿಕೆ ಮಾತಿಗೆ ಮರುಳಾಗಬೇಡಿ.

Leave A Reply

Your email address will not be published.